ಪುತ್ತೂರು: ವಿಶ್ವ ನೃತ್ಯ ದಿನಾಚರಣೆಯ ಅಂಗವಾಗಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಲ್ಲಿ ನಡೆಯುತ್ತಿರುವ ‘ನೃತ್ಯಾಂತರಂಗ ಸಪ್ತಾಹದಲ್ಲಿ’ ಎರಡನೆಯ ದಿನ ಒಡಿಸ್ಸಿ ನೃತ್ಯ ನಡೆಯಿತು.
ಒರಿಸ್ಸಾದ ಡಾ.ಬಿಸ್ವಜಿತ್ ದಾಸ್ ಇವರು ಈ ನೃತ್ಯ ಕಾರ್ಯಕ್ರಮ ಹಾಗೂ ಉಪನ್ಯಾಸ ನಡೆಸಿಕೊಟ್ಟರು. ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಅಭ್ಯಾಗತರಾಗಿ ಆಗಮಿಸಿ ಸಮಾಜದ ಸ್ವಾಸ್ಥ್ಯ ಉಳಿಸುವಲ್ಲಿ ಲಲಿತ ಕಲೆಗಳ ಪಾತ್ರದ ಬಗ್ಗೆ ಹೇಳಿದರು.
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel