ಸುಳ್ಯ: ತನಗೆ ಬೆದರಿಕೆ ಇದೆ ಆದುದರಿಂದ ಸೂಕ್ತ ರಕ್ಷಣೆ ನೀಡಬೇಕು ಎಂದು ನಗರ ಪಂಚಾಯತ್ ಚುನಾವಣೆಯಲ್ಲಿ 17ನೇ ವಾರ್ಡ್ ಬೋರುಗುಡ್ಡೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಆರ್.ಕೆ.ಮಹಮ್ಮದ್ ಅವರು ಚುನಾವಣಾಧಿಕಾರಿಗಳು ಹಾಗೂ ಅಭ್ಯರ್ಥಿಗಳ ಸಭೆಯಲ್ಲಿ ಹೇಳಿದರು. ಈ ಸಂದರ್ಭ ಲಿಖಿತ ದೂರು ನೀಡುವಂತೆ ಚುನಾವಣಾಧಿಕಾರಿಗಳು ಆರ್.ಕೆ.ಮಹಮ್ಮದ್ ಅವರಿಗೆ ಸೂಚಿಸಿದರು.
ಬೋರುಗುಡ್ಡೆ ವಾರ್ಡ್ನ್ನು ಸೂಕ್ಷ್ಮ ಮತಗಟ್ಟೆ ಎಂದು ಪರಿಗಣಿಸಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನೀಡಬೇಕು ಮತ್ತು ತನಗೆ ಚುನಾವಣೆ ಮುಗಿಯುವ ತನಕ ರಕ್ಷಣೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಚುನಾವಣಾ ಆಯೋಗಕ್ಕೆ ಮತ್ತು ಪೊಲೀಸ್ ಇಲಾಖೆಗೆ ಲಿಖಿತ ದೂರು ಸಲ್ಲಿಸುವಂತೆ ಚುನಾವಣಾಧಿಕಾರಿಗಳು ಆರ್.ಕೆ.ಮಹಮ್ಮದ್ಗೆ ಸೂಚಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel