ಪಿಯುಸಿಯಲ್ಲಿ 600 ರಲ್ಲಿ 583 ಅಂಕ ಪಡೆದ ಮರಿಯಂ ರಫಾನ | ಸುಳ್ಯ ತಾಲೂಕಿಗೆ ಈಕೆ ಪ್ರಥಮ |

July 17, 2020
10:42 AM

ಸುಳ್ಯ: ಈ ವರ್ಷದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿತ ಮರಿಯಂ ರಫಾನ ಸುಳ್ಯ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಈಕೆ 6೦೦ ರಲ್ಲಿ 583 ಅಂಕ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾಳೆ.

Advertisement
Advertisement

ಸುಳ್ಯದ ರಥಬೀದಿಯಲ್ಲಿ ಸುಮಾರು 40 ವರ್ಷದಿಂದ ಅಝಾದ್ ವಾಚ್ ವರ್ಕ್ಸ್ ಎಂಬ ಸಂಸ್ಥೆಯನ್ನು ನಡೆಸುವ ಕೆ.ಪಿ ಅಬ್ದುಲ್ ರಹಿಮಾನ್ ( ವಾಚ್ ಬಾಬಚ್ಚ) ಮತ್ತು ಝೌರಾ ದಂಪತಿಗಳ ಪುತ್ರಿ ಈಕೆ. ಕುರುಂಜಿ ವೆಂಕಟ್ರಮಣ ಗೌಡ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ. ಈಕೆ ಪಿಯುಸಿಯಲ್ಲಿ ಶೇ 98.25 ಅಂಕ ಪಡೆಯುವ ಮೂಲಕ  ಸುಳ್ಯ ತಾಲೂಕಿನಲ್ಲಿ ದಾಖಲೆ ನಿರ್ಮಿಸಿದ್ದಾಳೆ. ಈಕೆ ಭೌತಶಾಸ್ತ್ರ100, ಗಣಿತ 100, ಇಂಗ್ಲಿಷ್ 95 , ಹಿಂದಿ 95, ರಸಾಯನ ಶಾಸ್ತ್ರ 98 , ಜೀವಶಾಸ್ತ್ರ 95 ಅಂಕ ಪಡೆದಿದ್ದಾಳೆ.

ಈಕೆ ಕೇವಲ ಶಾಲಾ ಚಟುವಟಿಕೆಗಳಲ್ಲಿ ಮಾತ್ರವಲ್ಲ  ಗಾಂಧಿನಗರ ಮದರಸದ +2 ವಿದ್ಯಾರ್ಥಿ, ತನ್ನ ಸಾಧನೆಯನ್ನು ಮದರಸದಲ್ಲಿ ಕೂಡ ಮಾಡಿದ ಕೀರ್ತಿ ಈಕೆಯದು.ಇಲ್ಲಿ ಕೂಡ TOP + ಶ್ರೇಣಿಯನ್ನು ಪಡೆದಿದ್ದಾಳೆ. ಈ ಎಲ್ಲಾ ಸಾಧನೆಯ ಬಗ್ಗೆ ಹೇಳುವ ರಫಾನ, ನಿರಂತರ ಓದಿನಿಂದ ಸಾಧ್ಯವಾಯಿತು ಎನ್ನುತ್ತಾಳೆ. ಕಲಿಕೆಗೆ ವಿಶೇಷ ವೇಳಾಪಟ್ಟಿ ಏನು ಮಾಡಿಲ್ಲ,ರಾತ್ರಿ ಹೊತ್ತು ಒಂದಿಷ್ಟು ಓದಿ, ಬೆಳಗ್ಗೆ ನಮಾಝ್ ಮುಗಿಸಿ  5:30 ರಿಂದ 7..30 ಗಂಟೆಯ ವರೆಗೆ ಓದುತ್ತಿದ್ದೆ ತರಗತಿಯಲ್ಲಿ ಮಾಡಿದ ಪಾಠವನ್ನು ಏಕಾಗ್ರತೆಯಿಂದ ಕೇಳುತ್ತಿದ್ದೆ. ಗುರಿ ಸಾಧನೆಗೆ  ಏಕಾಗ್ರತೆಯೇ ಮುಖ್ಯ ಕಾರಣ ಎನ್ನುತ್ತಾಳೆ ಮರಿಯಂ ರಫಾನ.

 

Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬುಧನಿಂದ ಈ 4 ರಾಶಿಯವರ ಲಕ್ ಫುಲ್ ಚೇಂಜ್, ಸಕಲ ಐಶ್ವರ್ಯ ಪ್ರಾಪ್ತಿ..!
June 3, 2025
8:10 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 02-06-2025 | ಸಾಮಾನ್ಯ ಮಳೆ ಮುಂದುವರಿಕೆ | ಜೂನ್ ತಿಂಗಳಲ್ಲಿ ದುರ್ಬಲ ಮುಂಗಾರು ಸಾಧ್ಯತೆ |
June 2, 2025
2:15 PM
by: The Rural Mirror ಸುದ್ದಿಜಾಲ
ಕೊರೊನಾ ಬಗ್ಗೆ ಮುನ್ನೆಚ್ಚರಿಕೆಯ ಹೊರತು ಭಯಭೀತರಾಗುವ ಅವಶ್ಯಕತೆಯಿಲ್ಲ
June 2, 2025
11:20 AM
by: The Rural Mirror ಸುದ್ದಿಜಾಲ
ಭೂಕುಸಿತ ಹಿನ್ನೆಲೆ | ಪಶ್ಚಿಮಘಟ್ಟ ಧಾರಣ ಸಾಮರ್ಥ್ಯದ ಅಧ್ಯಯನಕ್ಕೆ ಸಚಿವ  ಈಶ್ವರ್ ಖಂಡ್ರೆ ಸೂಚನೆ
June 2, 2025
7:33 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group