ಸವಣೂರು : ಪುಣ್ಚಪ್ಪಾಡಿ ಬಿಜೆಪಿ ಬೂತ್ 69ರ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ನೂತನ ಅಧ್ಯಕ್ಷರಾಗಿ ಮಹೇಶ್ ಕೆ.ಸವಣೂರು, ಪ್ರಧಾನ ಕಾರ್ಯದರ್ಶಿಯಾಗಿ ಶೀನಪ್ಪ ಶೆಟ್ಟಿ ನೆಕ್ರಾಜೆ, ಕಾರ್ಯದರ್ಶಿಯಾಗಿ ವಿಜಯ ಕೆ ಆಯ್ಕೆಯಾಗಿದ್ದಾರೆ.

ಸದಸ್ಯರಾಗಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ, ಗ್ರಾಮ ಪಂಚಾಯತ್ ಸದಸ್ಯರಾದ ವೇದಾವತಿ ಅಂಜಯ ,ಸುಧಾ ನಿಡ್ವಣ್ಣಾಯ, ಪ್ರಮೋದ್ ಬೊಳ್ಳಾಜೆ ಲೋಕೇಶ್ ಕನ್ಯಾಮಂಗಲ, ರಾಮಚಂದ್ರ ಕೊಳಂಬೆತಡ್ಕ, ಪ್ರಶಾಂತ್ ನೂಜಾಜೆ, ಸತೀಶ್ ಪೂಜಾರಿ ನೇರೋಳ್ತಡ್ಕ, ವೇದಾವತಿ ಕುಮಾರಮಂಗಲ, ಉಷಾ ಈಶ್ವರ ನೂಜಾಜೆ ಹಾಗೂ ಬೂತ್ ಪ್ರಭಾರಿಯಾಗಿ ತಾ.ಪಂ. ಸದಸ್ಯೆ ರಾಜೇಶ್ವರಿ ಕನ್ಯಾಮಂಗಲ ಅವರನ್ನು ಆಯ್ಕೆ ಮಾಡಲಾಯಿತು.

ಆಯ್ಕೆ ಸಂದರ್ಭ ಬಿಜೆಪಿ ಸುಳ್ಯ ಮಂಡಲ ಸಮಿತಿ ಉಪಾಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಮಂಡಲ ಸಮಿತಿ ಸದಸ್ಯ, ಕಾಣಿಯೂರು ಗ್ರಾ.ಪಂ.ಸದಸ್ಯ ಗಣೇಶ ಉದುನಡ್ಕ, ಸವಣೂರು ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel