ಪುತ್ತೂರು ‘ಗೋಪಣ್ಣ’ ನೆನಪಿನ ಗೌರವಕ್ಕೆ ಪಾವಲಕೋಡಿ ಗಣಪತಿ ಭಟ್ ಆಯ್ಕೆ

June 26, 2019
2:47 PM

ಪುತ್ತೂರು: ಯಕ್ಷಗಾನದ ವಾದನ ಪರಿಕರಕ್ಕೆ ಮತ್ತು ವಾದನಕ್ಕೆ ಹೊಸ ಆಯಾಮವನ್ನು ತೋರಿದ ಪುತ್ತೂರು ಗೋಪಾಲಕೃಷ್ಣಯ್ಯ ಯಾ ಗೋಪಣ್ಣ ಇವರ ಸಂಸ್ಮರಣೆ ಕಾರ್ಯಕ್ರಮವು 2019 ಜೂನ್ 30 ರವಿವಾರದಂದು ಅಪರಾಹ್ನ ಗಂಟೆ 2ಕ್ಕೆ ಜರುಗಲಿದೆ.

Advertisement
Advertisement

ಪುತ್ತೂರಿನ ಬಪ್ಪಳಿಗೆ ‘ಅಗ್ರಹಾರ’ ಗೃಹದಲ್ಲಿ ಸಂಪನ್ನವಾಗುವ ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಅರ್ಥದಾರಿ, ನಿವೃತ್ತ ಅಧ್ಯಾಪಕ ಪಾವಲಕೋಡಿ ಗಣಪತಿ ಭಟ್ಟರಿಗೆ ‘ಗೋಪಣ್ಣ ನೆನಪಿನ ಗೌರವ’ ಪ್ರಧಾನ ಮಾಡಲಾಗುವುದು. ಸಮಾರಂಭದ ಬಳಿಕ ತಾಳಮದ್ದಳೆ ನಡೆಯಲಿದೆ.
ಪಾವಲಕೋಡಿ ಗಣಪತಿ ಭಟ್ಟರು ನಿವೃತ್ತ ಅಧ್ಯಾಪಕರು. ಕನ್ಯಾನ, ಉಪ್ಪಿನಂಗಡಿ, ನೆಲ್ಲಿಕಟ್ಟೆ ಶಾಲೆ ಮತ್ತು ಕಾಣಿಯೂರು ಜ್ಯೂನಿಯರ್ ಕಾಲೇಜುಗಳಲ್ಲಿ ಶಿಕ್ಷಕ ವೃತ್ತಿ. ಶಿಸ್ತಿನ ಅಧ್ಯಾಪಕನೆನ್ನುವ ನೆಗಳ್ತೆ. ಶಿಕ್ಷೆಯೂ ಶಿಕ್ಷಣವೂ ಜತೆಜತೆಯಲ್ಲಿರುವಾಗ ರೂಪುಗೊಂಡ ವಿದ್ಯಾರ್ಥಿ ಸಮೂಹ ಪಾವಲಕೋಡಿಯವರನ್ನು ಈಗಲೂ ಗೌರವಿಸುತ್ತಾರೆ.

ಇವರು ಯಕ್ಷಗಾನ ಅರ್ಥದಾರಿ, ವೇಷಧಾರಿ. ಪುತ್ತೂರು ಬೊಳ್ವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಲ್ಲಿ ಬಹುಕಾಲ ಸಕ್ರಿಯರು. ಬಹುತೇಕ ಖಳಪಾತ್ರಗಳ ಸುಲಲಿತ ನಿರ್ವಹಣೆ. ಶುಂಭ, ಚಂಡ-ಮುಂಡ, ಯಮ, ಕಂಸ, ವೀರಭದ್ರ.. ಮೊದಲಾದ ಪಾತ್ರಗಳ ಸ್ವ-ನಿರ್ಮಿತ ವಿನ್ಯಾಸ. ನಿಯಮಿತವಾದ ಓದುವಿಕೆ. ಒಂದು ಕಾಲಘಟ್ಟದ ಯಕ್ಷಬದುಕಿಗೆ ಪಾವಲಕೋಡಿ ಗಣಪತಿ ಭಟ್ಟರು ಇತಿಹಾಸವಾಗಿ ನಮ್ಮೊಡನಿದ್ದಾರೆ. ಅವರ ದೀರ್ಘ ಕಲಾಯಾನಕ್ಕೆ ಈಗ ಪುತ್ತೂರು ಗೋಪಣ್ಣ ನೆನಪಿನ ಗೌರವ.

ಕಳೆದ ವರುಷಗಳಲ್ಲಿ ಗೋಪಣ್ಣ ನೆನಪಿನ ಗೌರವವನ್ನು ದೇವದರ್ಜಿ ಅಳಕೆ ನಾರಾಯಣ ರಾವ್, ಮದ್ಲೆಗಾರ ವೆಂಕಟೇಶ ಉಳಿತ್ತಾಯರು, ಜ್ಯೋತಿಷಿ ಗಣಪತಿ ಭಟ್ಟರಿಗೆ ಪ್ರದಾನ ಮಾಡಲಾಗಿತ್ತು. ಗೋಪಣ್ಣ ಅವರ ಚಿರಂಜೀವಿ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಕುಟುಂಬ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದಾವಣಗೆರೆ ಜಿಲ್ಲೆಯಲ್ಲಿ ಡಿಜಿಟಲ್ ಲೈಬ್ರರಿ | ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಅನುಕೂಲ |
July 23, 2025
6:49 AM
by: The Rural Mirror ಸುದ್ದಿಜಾಲ
ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?
July 22, 2025
9:52 PM
by: The Rural Mirror ಸುದ್ದಿಜಾಲ
ಜನನ-ಮರಣ 21 ದಿನಗಳೊಳಗೆ  ನೋಂದಣಿ ಕಡ್ಡಾಯ – ದ ಕ ಜಿಲ್ಲಾ ಅಪರ ಜಿಲ್ಲಾಧಿಕಾರಿ
July 22, 2025
9:11 PM
by: The Rural Mirror ಸುದ್ದಿಜಾಲ
ಪಾವಗಡ ತಾಲೂಕಿನಲ್ಲಿ ಕುಡಿಯುವ ಯೋಜನೆಗೆ  ಮುಖ್ಯಮಂತ್ರಿ ಚಾಲನೆ
July 22, 2025
7:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group