ಪೈಂಬೆಚ್ಚಾಲು: ಮಹಾ ಪ್ರಳಯದಿಂದ ತತ್ತರಿಸಿದ ಅಸ್ಸಾಂ ಹಾಗೂ ಕೊಡಗು ಜಿಲ್ಲೆಯ ಸಂತ್ರಸ್ಥರ ನಿಧಿಗೆ ಪೈಂಬೆಚ್ಚಾಲು ಎಸ್ಸೆಸ್ಸೆಫ್ ವತಿಯಿಂದ ಸಹಾಯಧನವನ್ನು ಸುಳ್ಯ ಸೆಕ್ಟರ್ ಸಮಿತಿಯ ನಾಯಕರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ಸೆಕ್ಟರ್ ಸಮಿತಿ ಅಧ್ಯಕ್ಷರಾದ ಸ್ವಬಾಹ್ ಹಿಮಮಿ ಸಖಾಫಿ, ಪ್ರ.ಕಾರ್ಯದರ್ಶಿ ಮಾಲಿಖ್ ಕೊಯಂಗಿ, ಕೋಶಾಧಿಕಾರಿ ಪಿ.ಎ.ಸಿದ್ದೀಖ್ ಸಖಾಫಿ, ಉಪಾಧ್ಯಕ್ಷರು ಬಶೀರ್ ಕಲ್ಲುಮುಟ್ಲು, ಕೆಸಿಎಫ್ ನಾಯಕರಾದ ಹಾರಿಸ್ ಕೆ.ಎಂ, ಯುನಿಟ್ ನಾಯಕರಾದ ಹಾರಿಸ್ ಮಿಸ್ಬಾಹಿ ಹಸೈನಾರ್ ಕೆ.ಎಂ. ಅಲಿ ಪಿ. ಮುನೀರ್ ಸಖಾಫಿ ಹಾಗೂ ಕಾರ್ಯಕರ್ತರೂ ಉಪಸ್ಥಿತರಿದ್ದರು.
ಟಿಎಎಚ್ಚ್ ಸಅದಿ ಸ್ವಾಗತಿಸಿ ಸಿದ್ದೀಖ್ ಹಿಮಮಿ ಧನ್ಯವಾದವಿತ್ತರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel