ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸಂಪುಟ ವಿಸ್ತರಣೆಯ ಸಂಕಟ ಈ ಬಾರಿಯೂ ಕಾಡಲಿದೆ. ಎಲ್ಲವೂ ಒಂದೇ ಟೇಕ್ ನಲ್ಲಿ ಸರಿಯಾಗುತ್ತದೆ ಎಂದು ದೆಹಲಿಗೆ ತೆರಳಿದ್ದ ಬಿ ಎಸ್ ವೈ ಅವರಿಗೆ ಹೈಕಮಾಂಡ್ ಇಂದು ಇನ್ನೊಂದು ಸುತ್ತಿನ ಮಾತುಕತೆಗೆ ಕರೆದಿದೆ. ಹೀಗಾಗಿ ಲಿಸ್ಟ್ ನ ಎಲ್ಲರಿಗೂ ಸಚಿವ ಸ್ಥಾನ ಸಿಗುವುದು ಅನುಮಾನ ಎನ್ನುವ ಸಿಗ್ನಲ್ ದೊರೆತಿದೆ.
ಗುರುವಾರ ರಾತ್ರಿಯೇ ಎಲ್ಲಾ ಮಾತುಕತೆ ಮುಗಿಸಿ ಶುಕ್ರವಾರವೇ ಸಂಪುಟ ವಿಸ್ತರಣೆಗೆ ಬಿ ಎಸ್ ವೈ ಸಿದ್ಧತೆ ನಡೆಸಿದ್ದರು. ಆದರೆ ಬಿಜೆಪಿ ರಾಷ್ಟ್ರೀಯ ಅದ್ಯಕ್ಷರು ಕೆಲವೇ ಹೊತ್ತು ಮಾತುಕತೆ ನಡೆಸಿ ಅಮಿತ್ ಶಾ ಜೊತೆ ಚರ್ಚೆ ನಡೆಸಲು ಸೂಚಿಸಿ ತೆರಳಿದ್ದರು. ಇದಾದ ಬಳಿಕ ಅಮಿತ್ ಶಾ ಅವರು ಮಾತುಕತೆ ನಡೆಸಿ ಶುಕ್ರವಾರ ಬೆಳಗ್ಗೆ ಚರ್ಚೆ ನಡೆಸುವಂತೆ ಸೂಚಿಸಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel