ಬೆಳ್ಳಾರೆ: ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಶ್ವಥ ಕಟ್ಟೆ ಬಳಿ ಇರುವ ಹೊಳೆಯ ಬದಿ ತಡೆಗೋಡೆ ನಿರ್ಮಾಣ ಮಾಡಲು ಸಣ್ಣ ನೀರಾವರಿ ಇಲಾಖೆಯಿಂದ ಶಾಸಕ ಎಸ್.ಅಂಗಾರ ರೂ.20. ಲಕ್ಷ ಅನುದಾನ ಒದಗಿಕೊಟ್ಟಿದ್ದು ಇದಕ್ಕೆ ಗುದ್ದಲಿ ಪೂಜೆಯನ್ನು ನ.16 ರಂದು ಶಾಸಕರು ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಉದಯಕುಮಾರ್ ಪೂಜಾ ಕಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ, ಸದಸ್ಯರಾದ ಸುರೇಶ್ ಕುಮಾರ್ ರೈ ಪನ್ನೆಗುತ್ತು, ಗುಣವತಿ ಮಂಡೇಪು, ಶಶಿಕಲಾ ಚಾವಡಿಬಾಗಿಲು, ನಾಗೇಶ್ ಕುಲಾಲ್, ಜಯರಾಮ ಉಮಿಕ್ಕಳ, ಎನ್.ಎಸ್.ಡಿ.ವಿಠಲದಾಸ್, ಜನಾರ್ಧನ, ಗ್ರಾಮ ಪಂಚಾಯತ್ ಸದಸ್ಯ ನವೀನ್ ರೈ ತಂಬಿನಮಕ್ಕಿ, ಪ್ರೇಮಚಂದ್ರ ಬೆಳ್ಳಾರೆ, ಚಂದ್ರಶೇಖರ ಪನ್ನೆ, ಮೋನಪ್ಪ ತಂಬಿನಮಕ್ಕಿ, ವಸಂತ, ಉಲ್ಲಾಸ್, ಮಹೇಶ್, ಕಂಟ್ರಾಕ್ಟರ್ ಮೂಸಾ ಹಾಜಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel