ಬ್ರ್ಯಾಂಡ್‌ನಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು

July 1, 2019
6:00 PM

ಮಂಗಳೂರು. ದಕ್ಷಿಣ ಕನ್ನಡ ಜಿಲ್ಲೆ ಅತೀ ಹೆಚ್ಚು ಮೂಲಸೌಲಭ್ಯ, ಶುಚಿತ್ವ ಮತ್ತು ನೈರ್ಮಲ್ಯ ಹೊಂದಿದೆ. ಸಾಮರಸ್ಯದ ಇತಿಹಾಸವೂ ಇದೆ. ಇಲ್ಲಿಯ ಬ್ರ್ಯಾಂಡ್ ಹೆಸರು ಉಳಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು ಎಂಬ ಅಭಿಪ್ರಾಯವು ಜಿಲ್ಲಾ ಪತ್ರಕರ್ತರ ಸಮ್ಮಳನದಲ್ಲಿ ಕೇಳಿಬಂತು.
ಬ್ರ್ಯಾಂಡ್ ಮಂಗಳೂರು ಎಂಬ ವಿವಿಧ ಪತ್ರಿಕೆಗಳ ಮುಖ್ಯಸ್ಥರ ಗೋಷ್ಠಿಯಲ್ಲಿ, ಕಳೆದ ಮೂರು ದಶಕಗಳಲ್ಲಿ ಮಂಗಳೂರು ಸಾಕಷ್ಟು ಬದಲಾವಣೆ ಕಂಡಿದೆ. ಹೊಸ ಸೌಲಭ್ಯಗಳು ಬಂದಿದೆ. ಆದರೆ, ಕೆಲವು ಘಟನೆಗಳು ಮತ್ತು ಅದರ ವೈಭವೀಕರಣದಿಂದ ಹೊರ ಜಗತ್ತಿನಲ್ಲಿ ಮಂಗಳೂರಿನ ಹೆಸರು ಹಾಳಾಗುತ್ತಿದೆ. ಬ್ರ್ಯಾಂಡ್ ಮಂಗಳೂರು ಉಳಿಸಲು ಮಾಧ್ಯಮಗಳ ಮುಖ್ಯಸ್ಥರು ಪ್ರಮುಖ ಪಾತ್ರ ವಹಿಸಬೇಕು ಎಂಬ ಅಭಿಪ್ರಾಯ ಕೇಳಿಬಂತು.
ಹಿರಿಯ ಪತ್ರಕರ್ತ ಈಶ್ವರ ದೈತೋಟ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಪತ್ರಿಕೆಗಳ ಮುಖ್ಯಸ್ಥರಾದ  ಯು.ಕೆ.ಕುಮಾರ್‌ನಾಥ್, ಸುರೇಶ್ ಪುದುವೆಟ್ಟು, ಅಬ್ದುಸ್ಸಲಾಂ ಪುತ್ತಿಗೆ,  ಡಾ.ಯು.ಪಿ. ಶಿವಾನಂದ   ವಿಚಾರ ಮಂಡಿಸಿದರು.
ರಾಮಕೃಷ್ಣ ಆರ್., ಹರ್ಷ, ಜಿತೇಂದ್ರ ಕುಂದೇಶ್ವರ, , ಕೆ.ಯು.ಜಾರ್ಜ್, ಲೀಲಾಕ್ಷ ಕರ್ಕೇರ, ಲಕ್ಷ್ಮಣ್ ಕುಂದರ್ ಉಪಸ್ಥಿತರಿದ್ದರು. ಗೋಷ್ಠಿ ಬಳಿಕ ಪ್ರಶ್ನೋತ್ತರ ನಡೆಯಿತು.
ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ವಿಜಯ್ ಕೋಟ್ಯಾನ್ ಸ್ವಾಗತಿಸಿ ಪುಷ್ಪರಾಜ್ ವಿಚಾರ ಮಂಡಿಸಿದರು‌‌, ಹಿಲರಿ ಕ್ರಾಸ್ತ ವಂದಿಸಿದರು. ಮಾಜಿ ಅಧ್ಯಕ್ಷ ಬಿ.ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪಂಜದಲ್ಲಿ ಜನರೇಟರ್ ಕ್ಯಾಂಪ್ | ಆ. 22, 23ರಂದು ಪೋರ್ಟೇಬಲ್ ಜನರೇಟರ್ ಉಚಿತ ಸರ್ವೀಸ್ ಕ್ಯಾಂಪ್
August 20, 2025
9:37 PM
by: ದ ರೂರಲ್ ಮಿರರ್.ಕಾಂ
ಎಲ್ಲೇ ಇದ್ದರೂ ಸ್ವಭಾಷೆ, ಸಂಸ್ಕೃತಿ ಮರೆಯಬೇಡಿ : ರಾಘವೇಶ್ವರ ಶ್ರೀ
August 20, 2025
9:31 PM
by: The Rural Mirror ಸುದ್ದಿಜಾಲ
ಮುಂದುವರಿದ ಮಳೆ ಆತಂಕ | ರಾಜ್ಯದಲ್ಲೂ ನಿರಂತರ ಮಳೆ | ಜನಜೀವನ ಅಸ್ತವ್ಯಸ್ತ
August 20, 2025
9:25 PM
by: The Rural Mirror ಸುದ್ದಿಜಾಲ
ಬಿಮಾ ಯೋಜನೆಗಳ ನೋಂದಣಿಗೆ ಆ.25 ರ ವರೆಗೆ ಅಭಿಯಾನ
August 20, 2025
8:57 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group