ಪೆರ್ನಾಜೆ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಳೆದ ಮೇ ತಿಂಗಳಿನಲ್ಲಿ 2018 19 ನೇ ಸಾಲಿನಲ್ಲಿ ನಡೆಸಿದ ಸೀನಿಯರ್ ಗ್ರೇಡ್ ಭರತನಾಟ್ಯ ಪರೀಕ್ಷೆಯಲ್ಲಿ ಸಿಂಚನ ಲಕ್ಷ್ಮಿ ಕೊಡಂದೂರ್ ಅವರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರಿಗೆ ನಾಟ್ಯ ವಿದ್ಯಾಲಯ ನಾಟ್ಯ ವಿದುಷಿ ವಿದ್ಯಾಲಕ್ಷ್ಮಿ ಕುಂಬ್ಳೆ ಅವರು ತರಬೇತಿ ನೀಡಿದ್ದಾರೆ. ಇವರು ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ. ಬಂಟ್ವಾಳ ತಾಲೂಕು ಅಡ್ಯನಡ್ಕ ರಘು ರಾಮಶಾಸ್ತ್ರಿ ಮತ್ತು ಸವಿತಾ ಕೊಡಂದೂರು ಅವರ ಪುತ್ರಿ. ಕುಮಾರ್ ಪೆರ್ನಾಜೆ ಅವರ ಸ್ವರಸಿಂಚನ ಕಲಾತಂಡದ ಗ್ರಾಮೀಣ ಪ್ರದೇಶದ ವಿಶೇಷ ಪ್ರತಿಭೆ ಯಾಗಿದ್ದಾರೆ. ಭಾವರಾಗ ಹಾಗೂ ತಾಳ ಭರತನಾಟ್ಯ ಕಲೆಯನ್ನು ಕರಗತ ಮಾಡಿಕೊಂಡು ಸಾಧನೆ ಮೆರೆದ ಸಿಂಚನ ಇವಳು ಓದಿನಲ್ಲೂ ಸೈ ನೃತ್ಯಕ್ಕೂ ಮೈಕ್ ಹಿಡಿದರೆ ಹಾಡಲು ಸೈ ಈಗಾಗಲೇ ಹಲವಾರು ಕಡೆ ಭರತನಾಟ್ಯ ಕಾರ್ಯಕ್ರಮವನ್ನು ನೀಡಿ ಮೆಚ್ಚುಗೆ ಗಳಿಸಿದ್ದಾರೆ ವಿವಿಧ ಸಂಘ-ಸಂಸ್ಥೆಗಳಿಂದ ವಿವಿಧ ಪ್ರಶಸ್ತಿ ಸನ್ಮಾನಗಳನ್ನು ಪಡೆದುಕೊಂಡಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement