ಮಂಡೆಕೋಲು: ಸುಳ್ಯ ವಲಯ ಎಸ್ ಕೆಎಸ್ಎಸ್ ಎಫ್ ವಿಖಾಯ ಸಮಿತಿ ವತಿಯಿಂದ ‘ಸನ್ನದ ಸೇವೆಗೆ ಯುವ ಜಾಗೃತಿ’ ಎಂಬ ದ್ಯೇಯ ವಾಕ್ಯ ದೊಂದಿಗೆ ವಿಖಾಯ ತರಬೇತಿ ಶಿಬಿರ ಮಂಡೆಕೋಲು ಮದರಸ ಸಭಾಂಗಣದಲ್ಲಿ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಎಮ್ ಜೆ ಮಸೀದಿ ಖತೀಬರಾದ ಶಮೀಮ್ ಅರ್ಶದಿ ಉದ್ಘಾಟಿಸಿದರು .ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ವಲಯ ವಿಖಾಯ ಚೇರ್ಮನ್ ಜಮಾಲ್ ಬೆಳ್ಳಾರೆ ವಹಿಸಿದರು. ಮುಖ್ಯ ಆತಿಥಿಯಾಗಿ ಎಮ್. ಜೆ .ಮಸೀದಿ ಜಮಾ ಅತ್ ಅಧ್ಯಕ್ಷರಾದ ರಾಫಿ ಶಾಲೆಕ್ಕಾರ್,ಮಂಡೆಕೋಲು ಮಸೀದಿ ಖತೀಬರಾದ ಶಮೀಮ್ ಅರ್ಶದಿ, ಮಂಡೆಕೋಲು ಜಮಾ ಅತ್ ಕಾರ್ಯದರ್ಶಿ ಅಬ್ದುಲ್ಲಾ ಮಾರ್ಗ,ಮಂಡೆಕೋಲು ಎಸ್ ಕೆ ಎಸ್ ಎಸ್ ಎಫ್ ಶಾಖೆಯ ಅಧ್ಯಕ್ಷ ರಾದ ಸಿರಾಜ್ ಶಾಲೆಕ್ಕಾರ್,ಖಲೀಲ್ ಮಂಡೆಕೋಲು,ಮುಂತಾದವರು ಉಪಸ್ಥಿತರಿದ್ದರು .ವಿಖಾಯ ಕನ್ವೀನರ್ ತಾಜುದ್ದೀನ್ ಟರ್ಲಿ ಸ್ವಾಗತಿಸಿ ,ವಂದಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel