ಮಡಪ್ಪಾಡಿ : ಮಹಾತ್ಮಗಾಂಧಿ ಗ್ರಾಮ ಸೇವಾ ತಂಡ ಮಡಪ್ಪಾಡಿ ಇದರ 180 ನೇ ವಾರದ ಶ್ರಮದಾನ ಭಾನುವಾರ ಮುಂಜಾನೆ ನಡೆಯಿತು.
ಮಡಪ್ಪಾಡಿ ಶಾಲೆ ಆವರಣದಲ್ಲಿ ಮರಗಳ ಗೆಲ್ಲು ಸವರಿ ಅಡಿಕೆ ಗಿಡಗಳಿಗೆ ಸೊಪ್ಪು ಮಾಡಲಾಯಿತು. ತಂಡದ ಸದಸ್ಯ ಪೂಂಬಾಡಿ ಗಂಗಯ್ಯ ಗೌಡರು ಶಾಲಾ ಆವರಣದಲ್ಲಿ ನೆಟ್ಟು ಬೆಳೆಸಿದ 100 ಮಂಗಳ ಅಡಿಕೆ ಗಿಡಗಳ ನಿರ್ವಹಣೆಯನ್ನು ಮಹಾತ್ಮಗಾಂಧಿ ಗ್ರಾಮ ಸೇವಾ ತಂಡ ಕಳೆದ ಎರಡೂವರೆ ವರ್ಷಗಳಿಂದ ನಿರ್ವಹಿಸುತ್ತಿದ್ದು ಈಗ ಹಿಂಗಾರ ಬಿಡಲು ಸಿದ್ದವಾಗುತ್ತಿದೆ.ಮುಂದಿನ ದಿನಗಳಲ್ಲಿ ಇದರಿಂದ ಶಾಲೆಗೆ ಪ್ರಯೋಜನವಾಗುವುದಲ್ಲಿ ಸಂದೇಹವಿಲ್ಲ. ಗ್ರಾಮದ ಸ್ವಚ್ಛತೆ ಜೊತೆಗೆ ಶಾಲೆಗೆ ಒಂದು ಸೇವೆ ಮಹಾತ್ಮಗಾಂಧಿ ಗ್ರಾಮ ಸೇವಾ ತಂಡದಿಂದ ಆಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel