ಮಳೆ ಬಂದಾಗ ಮರವನ್ನು ಮರೆತರೇ…?

August 7, 2019
9:44 PM

ಸುಳ್ಯ: ಮಳೆ ಇಲ್ಲದಿರುವಾಗ ಗಿಡ ನೆಡಬೇಕು, ಮರ ಉಳಿಸಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತದೆ. ಆದರೆ ನಿರಂತರ ಎರಡು ದಿನ ಮಳೆ ಬಂದಾಗ ಜನ ಮರವನ್ನು ಮರೆತರೇ… ?ಹೀಗೊಂದು ಜಿಜ್ಞಾಸೆ ಹುಟ್ಟಿಕೊಂಡದ್ದು ಬುಧವಾರ ಸುಳ್ಯದಲ್ಲಿ ನಡೆದ ಪ್ರಕೃತಿ ವಿಕೋಪ ತಡೆ ಕಾರ್ಯಸೂಚಿ ಸಭೆಯಲ್ಲಿ.

Advertisement

ಸಭೆಯಲ್ಲಿ ಮಾತನಾಡಿದ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ‘ಜೂನ್ ತಿಂಗಳ ಕೊನೆಯವರೆಗೆ ಮಳೆಯೇ ಬಾರದಿದ್ದಾಗ ಗಿಡಗಳನ್ನು ನೆಡಬೇಕು, ಮರಗಳನ್ನು ಉಳಿಸಬೇಕು. ನೆಡಲು ಗಿಡ ಕೊಡಿ ಸಾರ್.. ಎಂದು ಹಲವು ಮಂದಿ ಕೇಳುತ್ತಿದ್ದರು. ಆದರೆ ಎರಡು ದಿನ ಮಳೆ ಸುರಿದಾಗ ಮರಗಳು ಅಪಾಯಕಾರಿಯಾಗಿದೆ, ಮರ ಕಡಿಯಿರಿ ಸಾರ್ ಎಂದು ಕರೆ ಮಾಡುತ್ತಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದಾಗ ಗಂಭೀರ ಸಭೆಯಲ್ಲಿ ಕೆಲ ಕಾಲ ನಗುವಿನ ಕಾರಂಜಿ ಚಿಮ್ಮಿತು.

ಮಳೆ ಬಂದ ಕೂಡಲೇ ಮರಗಳನ್ನು, ಗಿಡಗಳನ್ನು ಮರೆಯುವುದು ಸರಿಯಲ್ಲ‌. ಗಿಡ ಬೆಳೆಸುವ, ಮರ ಉಳಿಸುವ ಜಾಗೃತಿ ಸದಾ ಇರಲಿ, ತೀರಾ ಅಪಾಯಕಾರಿ ಆಗಿದ್ದಲ್ಲಿ ಮಾತ್ರ ಅಂತಹಾ ಮರಗಳನ್ನು ಮಾತ್ರ ತೆರವು ಮಾಡಲು ಬೇಡಿಕೆ ಸಲ್ಲಿಸಿ. ಮಳೆಗಾಲದ ನೆಪದಲ್ಲಿ ಸದಾ ನಮ್ನನ್ನು ಸಲಹುವ ಮರಗಳನ್ನು ಕಡಿಯದಂತೆ ಎಚ್ಚರ ವಹಿಸಿ, ಗಿಡಗಳನ್ನು ನೆಡಲು ಆಸಕ್ತಿ ಮುಂದುವರಿಸಿ ಎಂದು ಅವರು ವಿನಂತಿಸಿದಾಗ ನಗು ಕರತಾಡನವಾಗಿ ಮಾರ್ಪಾಡಾಯಿತು.

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಂತರ ರಾಷ್ಟ್ರೀಯ ಹಲಸು ದಿನ | ಗ್ರಾಮೀಣ ಉದ್ಯಮಿಗಳ ಸಬಲೀಕರಣಕ್ಕೆ ಹಲಸು ಬೆಳೆ ಪೂರಕ |
July 5, 2025
8:12 AM
by: ದ ರೂರಲ್ ಮಿರರ್.ಕಾಂ
ಇಲ್ಲಿ ಅಡಿಕೆ ಧಾರಣೆಯಲ್ಲಿ ಏರಿಳಿವಾದಾಗಲೇ ಅಲ್ಲಿ ಬರ್ಮಾ ಅಡಿಕೆ ವಶಕ್ಕೆ…! | ಕಾರಣ ಏನು..?
July 5, 2025
7:41 AM
by: ದ ರೂರಲ್ ಮಿರರ್.ಕಾಂ
ಶುಕ್ರ- ಶನಿ ಸೇರಿ ಲಾಭ ದೃಷ್ಟಿ ಯೋಗ: ಈ 5 ರಾಶಿಯವರಿಗೆ ಶ್ರೀಮಂತಿಕೆಯ ಸುಯೋಗ..!
July 5, 2025
7:17 AM
by: ದ ರೂರಲ್ ಮಿರರ್.ಕಾಂ
ಸಂಶೋಧನಾ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ
July 4, 2025
10:40 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group