ಸುಳ್ಯ:ಮಳೆಯ ಜೊತೆ ಇಂದು ಭಾರೀ ಗಾಳಿ ಸಮಸ್ಯೆ ತಂದೊಡ್ಡಿತು. ತಾಲೂಕಿನ ವಿವಿದೆಡ ಗಾಳಿಗೆ ಮರ ಉರುಳಿ ಬಿದ್ದು ಸಂಚಾರಕ್ಕೆ ಅಡ್ಡಿಯಾಯಿತು.
ಮಂಗಳೂರು ಬೆಂಗಳೂರು ಹೆದ್ದಾರಿಯ ಶಿರಾಡಿ ಘಾಟಿ ಯಲ್ಲಿ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಯಿತು. ಸಂಜೆಯ ವೇಳೆಗೆ ತೆರವು ಕಾರ್ಯ ನಡೆಯಿತು.
ಇತ್ತ ಕಡ ಸುಳ್ಯ ತಾಲೂಕಿನ ವಿವಿಧ ಕಡೆ ಗಾಳಿಯ ರಭಸ ಹೆಚ್ಚು ಕಂಡುಬಂತು. ಇಂದು ಮಳೆಗಿಂತಲೂ ಗಾಳಿಯೇ ಸಮಸ್ಯೆಯಾಯಿತು.
ಸುಬ್ರಹ್ಮಣ್ಯ – ಪಂಜ ರಸ್ತೆಯ ಎಡೋಣಿ ಬಳಿ ರಸ್ತೆಗೆ ಮರ ಬಿದ್ದರೆ ಸುಳ್ಯ ಸುಬ್ರಹ್ಮಣ್ಯ ರಸ್ತೆಯ ವಳಲಂಬೆ ಬಳಿ ರಸ್ತೆ ಗೆ ಮರ ಬಿದ್ದು ಸಂಚಾರಕ್ಕೆ ಸಮಸ್ಯೆ ಯಾಯಿತು.
ಗ್ರಾಮೀಣ ಭಾಗದಲ್ಲೂ ಗಾಳಿ ಸಮಸ್ಯೆ ತಂದೊಟ್ಟಿತು. ಅಡಿಕೆ ಮರ ಧರೆಗೆ ಉರುಳಿತು.
ಮಳೆಯ ಕಾರಣದಿಂದ ಬರೆ ಕುಸಿತ ಅಲ್ಲಲ್ಲಿ ಕಂಡುಬಂತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel