ಮುಂಬಯಿ: ರಾಜ್ಯದ ಕರಾವಳಿಯಲ್ಲಿ ಮಳೆ ಕಡಿಮೆಯಾದರೆ ಮುಂಬಯಿ ಕರಾವಳಿ ಪ್ರದೇಶ ಸೇರಿದಂತೆ ವಿವಿದೆಡೆ ಭಾರೀ ಮಳೆಯಾಗುತ್ತಿದ್ದು 3 ಮಂದಿ ವಿದ್ಯುತ್ ಶಾಕ್ ಗೆ ಬಲಿಯಾದ ಬಗ್ಗೆ ವರದಿಯಾಗಿದೆ. ಈ ನಡುವೆ ದಾಬರ್ ಹೂವಿನ ಮಾರುಕಟ್ಟೆಯಲ್ಲಿ ಗೋಡೆ ಕುಸಿದು 3 ಮಂದಿಗೆ ಗಾಯವಾಗಿದೆ. ಥಾಣೆ, ಪಾಲ್ ಫಾರ್ ಸೇರಿದಂತೆ ವಿವಿದೆಡೆ ಮಳೆಯ ಕಾರಣದಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದೆ. ಗೋರೇಗಾವ್ ಪ್ರದೇಶದಲ್ಲಿ ಇಬ್ಬರಿಗೆ ವಿದ್ಯುತ್ ಶಾಕ್ ಉಂಟಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿದ್ಯುತ್ ಕೇಬಲ್ ಗಳು ನೆಲದೊಳಗೆ ಹಾದುಹೋಗುತ್ತಿರುವುದರಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗುತ್ತಿದ್ದು ಇಂತಹ ಪ್ರದೇಶದಲ್ಲಿ ತೆರಳಿದವರಿಗೆ ಆಘಾತವಾಗಿದೆ. ಈಗಲೂ ಮಳೆ ಸುರಿಯುತ್ತಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel