ಮಂಗಳೂರು:ಕಳೆದ 2 ದಿನಗಳ ವಿದ್ಯಮಾನ ಗಮನಿಸಿ ದಕ ಜಿಲ್ಲೆಯಲ್ಲಿ ಕೆಲವೊಂದು ಸೂಚನೆಗಳನ್ನು ತಿಳಿಸಿದೆ. ದ್ವಿಚಕ್ರ ಹಾಗೂ ಚತುಶ್ಚಕ್ರ ವಾಹನಳು ಪಾಸ್ ಇಲ್ಲದೇ ಸಂಚರಿಸುತ್ತಿದ್ದಲ್ಲಿ ಪೊಲೀಸರು ವಾಹನ ವಶಪಡಿಸಿಕೊಳ್ಳಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಅತೀ ತುರ್ತು ವೈದ್ಯಕೀಯ ಸೇವೆಗೆ ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಕಂಟ್ರೋಲ್ ರೂಂ 1077 ಸಂಖ್ಯೆಗೆ ಕರೆ ಮಾಡಿದರೆ ಒಂದು ದಿನದ ತುರ್ತು ವೈದ್ಯಕೀಯ ಈ ಪಾಸ್ ಗಳನ್ನು ಕಂಟ್ರೋಲ್ ರೂಮಿನಿಂದ ನೀಡಲಾಗುತ್ತದೆ. ಉಳಿದ ವೈದ್ಯಕೀಯ ಸೇವೆಗೆ 108 ಅಥವಾ 1077 ಗೆ ಕರೆ ಮಾಡಿದಲ್ಲಿ ಉಚಿತ ವ್ಯವಸ್ಥೆ ಮಾಡಲಾಗುತ್ತಿದೆ.
ಎ.5 , ಎ.6 ಹಾಗೂ ಎ.7 ರಂದು ನ್ಯಾಯಬೆಲೆ ಅಂಗಡಿಗಳಿಗೆ ರಜೆ ಇರುವುದಿಲ್ಲ, ಈ ದಿನಗಳಲ್ಲಿ ಪಡಿತರ ವಿತರಿಸಲು ಸೂಚಿಸಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel