ಪುತ್ತೂರು: ಫೆ.13ರಂದು ವಿವೇಕಾನಂದ ಕಾನೂನು ಮಹಾ ವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜು, ವಿಟ್ಲದಲ್ಲಿ ಅಣಕು ನ್ಯಾಯಾಲಯ ಪ್ರದರ್ಶನವು ಜರಗಿತು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾಗಿ ಸುಧೀರ್ ಕೆ ತೋಳ್ಪಾಡಿ, ವಕೀಲರು, ಪುತ್ತೂರು ನಿರ್ವಹಿಸಿದರು ಹಾಗೂ ನಿವೃತ್ತ ಪಬ್ಲಿಕ್ ಅಭಿಯೋಜಕರಾದ ಉದಯಶಂಕರರವರು ವಿದ್ಯಾರ್ಥಿಗಳಿಗೆ ಕಾನೂನಿಗೆ ಸಂಬಂದಿಸಿದಂತೆ ವಿವಿಧ ಸ್ತರಗಳ ಕಾನೂನು ಕ್ಷೇತ್ರದಲ್ಲಿನ ವೃತ್ತಿ ಹಾಗೂ ಅದರ ವ್ಯಾಪ್ತಿಯ ಬಗ್ಗೆ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾನೂನು ಕಾಲೇಜಿನ ಉಪನ್ಯಾಸಕಿಯಾದ ಸಂಗೀತಾ ಎಸ್.ಎಮ್., ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶಂಕರ ಪಾಟಾಳಿ ಇವರು ಉಪಸ್ಥಿತರಿದ್ದು, ಸ್ವಾಗತಿಸಿ ವಂದಿಸಿದರು. ಕಾಲೇಜಿನ 300ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel