ವಿವೇಕಾನಂದ ವಿದ್ಯಾವರ್ಧಕ ಸಂಘದ ಗಣೇಶೋತ್ಸವದಲ್ಲಿ ದಾಸ ಸಂಕೀರ್ತನೆ ಮೂಲಕ ಭಗವಂತನ ನಾಮಸ್ಮರಣೆಯ ಮೆಲುಕು

September 4, 2019
12:00 PM

ಪುತ್ತೂರು: ಮಹತ್ತರವಾದ ಸಾಹಿತ್ಯಗಳು ಮೂಡಿಬರಲು, ದಾಸರ ಮೂಲಕ ಸಂಕೀರ್ತನೆಯಾಗಿ ರಚನೆಯಾಗಲು, ಭಗವಂತನೇ ಶಕ್ತಿಯನ್ನು ನೀಡಿದ್ದಾನೆ. ವೇದದ ಸಾರವನ್ನು ದಾಸರ ಮೂಲಕ ಸಾರಿದ್ದಾನೆ. ಅದರ ಸಾರವನ್ನು ತಿಳಿದು ಬದುಕನ್ನು ಸಾರ್ಥಕಗೊಳಿಸಲು ಸಾಧ್ಯ. ಭಜನೆಯೊಂದಕ್ಕೆ ದೇವರನ್ನು ತಲುಪುವ ಶಕ್ತಿಯಿದೆ. ಅಂತಹ ಭಗವಂತನ ನಾಮದ ಮೆಲುಕು ಹಾಕುವುದರಿಂದ ಧನ್ಯತೆಯನ್ನು ಪಡೆಯಬಹುದು. ಇಂತಹ ಒಂದು ಮಹತ್ತರವಾದ ಕಾರ್ಯ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಆಯೋಜಿಸಲ್ಪಟ್ಟ 38ನೇ ವರುಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಎರಡನೇ ದಿನವಾದ ಮಂಗಳವಾರ ಬೆಳಗ್ಗೆ ನಡೆದ ದಾಸ ಸಂಕೀರ್ತನೆ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ನಡೆಯಿತು.

Advertisement


ವಿಘ್ನವಿನಾಶಕನ ಸುತ್ತಿಯೊಂದಿಗೆ ದಾಸ ಸಂಕೀರ್ತನೆಯು ಆರಂಭಗೊಡಿತು. ‘ಗಜಾನನ ಗಜಾನನ ಪಾರ್ವತಿ ಸುತ’ ಎಂದು ವಿನಾಶಕನನ್ನು ಸ್ತುತಿಸುತ್ತಾ ಬಂದ ಭಕ್ತರಲ್ಲಿ ಧನ್ಯತೆಯನ್ನು ತುಂಬುತ್ತ, ನೇರ ಭಕ್ತರು ವಿಘ್ನವಿನಾಶಕನ ಸುತ್ತಿಗೆ ಭಾಗಿಗಳಾಗುವಂತೆ ಮಾಡಿತು. ‘ಬಾರೋ ರಾಘವೇಂದ್ರ’ ಎಂದು ನೀನು ವಿನಾಶಕನೊಂದಿಗೆ ಬಂದು ಭಕ್ತರನ್ನು ಸಲಹು ಎಂದು ಬೇಡಿಕೊಳ್ಳಲಾಯಿತು. ‘ಬಾರೆ ಮಣಿ ತನಕ’, ‘ರಂಗಾ ಕೃಷ್ಣಯ್ಯನೇ ಬಾರಯ್ಯ’, ‘ಕಣ್ಣಿನೊಳಗೆ ನೋಡು ಒಳಗಣ್ಣಿನೊಳಗೆ ನೋಡು’ ಎಂದು ಭಕ್ತಿಯಿಂದ ಮಾತ್ರ ದೇವರನ್ನು ತಲುಪಲು ಸಾಧ್ಯ ಎಂದು ಸ್ತುತಿಸುತ್ತಾ ‘ಲಂಕೆ ಹರಿದ ಹನುಮಂತ’ ಹನುಮನ ರಾಮ ಭಕ್ತಿಯನ್ನು ಚಿತ್ರಿಸಿದರು. ‘ಎನ್ನ ಬಿಟ್ಟು ನೀ ಅಗಲದಿರು ಶ್ರೀನಿವಾಸ’ ಎನ್ನುವ ಹಾಡಿನ ಮೂಲಕ ಶ್ರೀನಿವಾಸನನ್ನು ಧ್ಯಾನಿಸಿದರು. ಈ ದಾಸ ಸಂಕೀರ್ತನೆಯ ಹಿಮ್ಮೇಳದಲ್ಲಿ ಕಿಶೋರ್ ಪಲ್ಯ ಮೃದಂಗದಲ್ಲಿ ಹಾಗೂ ತಬಲದಲ್ಲಿ ಗಿರೀಶ್ ಪೆರ್ಲ ಸಹಕರಿಸಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜಮ್ಮು- ಕಾಶ್ಮೀರ | ಪ್ರವಾಸಿಗರ ಮೇಲೆ ಉಗ್ರರ ದಾಳಿ | ಉಗ್ರರ ದಾಳಿಗೆ ಕನ್ನಡಿಗ ಸೇರಿ 20 ಕ್ಕೂ ಹೆಚ್ಚು ಜನರು ಬಲಿ
April 22, 2025
9:35 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 22.04.2025 | ಅಲ್ಲಲ್ಲಿ ಸಂಜೆ ಗುಡುಗು ಸಹಿತ ಮಳೆ | ಎ.26ರಿಂದ ಮಳೆ ಹೆಚ್ಚಾಗುವ ನಿರೀಕ್ಷೆ
April 22, 2025
5:50 PM
by: ಸಾಯಿಶೇಖರ್ ಕರಿಕಳ
ಭಾರತದ ತೋಟಗಾರಿಕಾ ಹಣ್ಣಿನ ಬೆಳೆಗಳತ್ತ ಚಿತ್ತ | ಜಾಗತಿಕ ಮಾರುಕಟ್ಟೆಗೆ ಭಾರತೀಯ ತಾಜಾ ಹಣ್ಣುಗಳ ಪರಿಚಯ |
April 22, 2025
7:18 AM
by: ದ ರೂರಲ್ ಮಿರರ್.ಕಾಂ
ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಕುರಿತು ಹೆಚ್ಚು ತಿಳುವಳಿಕೆ ನೀಡಬೇಕಾದ ಅಗತ್ಯವಿದೆ
April 22, 2025
6:51 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group