ಸಹಕಾರಿ ಕ್ಷೇತ್ರದ ಚುನಾವಣೆ : ಐವರ್ನಾಡು, ಪಂಜ, ಅರಂತೋಡಿನಲ್ಲಿ ಅಚ್ಚರಿಯ ಗೆಲುವು…!

January 19, 2020
8:33 PM

ಸುಳ್ಯ: ತಾಲೂಕಿನ ಸಹಕಾರಿ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಭಾನುವಾರ ಚುನಾವಣೆ ನಡೆದ ಐವರ್ನಾಡು , ಪಂಜ, ಅರಂತೋಡುಗಳಲ್ಲಿ    ಅಚ್ಚರಿಯ ಗೆಲುವು ದಾಖಲಾಗಿದೆ. ಸಹಕಾರ ಭಾರತಿ-ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

Advertisement
Advertisement

ಐವರ್ನಾಡು ಸಹಕಾರಿ ಸಂಘದಲ್ಲಿ  ಎನ್ ಎನ್ ಮನ್ಮಥ ಸಹಿತ ಸಹಕಾರ ಭಾರತಿ-ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ  8 ಸ್ಥಾನಗಳನ್ನು ಗೆದ್ದುಕೊಂಡರೆ, ಈ ಹಿಂದೆ ಅವಿರೋಧವಾಗಿ 4 ಸ್ಥಾನಗಳನ್ನು  ಗೆಲ್ಲುವ ಮೂಲಕ ಒಟ್ಟು 12 ಸ್ಥಾನಗಳನ್ನೂ ಗೆದ್ದುಕೊಂಡಿದೆ.

ಪಂಜದಲ್ಲಿ ಚಂದ್ರಶೇಖರ ಶಾಸ್ತ್ರಿ ಸಹಿತ ಸಹಕಾರ ಭಾರತಿ-ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು   ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದೆ, ಎಲ್ಲಾ 12 ಸ್ಥಾನಗಳನ್ನೂ ಈ ತಂಡ ಗೆದ್ದಿದೆ.

ಅರಂತೋಡಿನಲ್ಲಿ ಸಂತೋಷ್ ಕುತ್ತಮೊಟ್ಟೆ ಸಹಿತ ಸಹಕಾರ ಭಾರತಿ-ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ತಂಡದ ಎಲ್ಲರೂ ಸಹಕಾರ ಭಾರತಿ-ಬಿಜೆಪಿ ನೇತೃತ್ವದ ತಂಡ ಎಂದೇ ಹೇಳಿದೆ.

Advertisement

ಪಂಜದಲ್ಲಿ

ಸುಳ್ಯ ತಾಲೂಕಿನ ಇತಿಹಾಸದಲ್ಲಿ  ಬಿಜೆಪಿ-ಸಹಕಾರ ಭಾರತಿ ಅಥವಾ ಸಂಘಪರಿವಾರದ ಸಂಘಟನೆಯಿಂದಲೇ ಅಧಿಕೃತ ಅಭ್ಯರ್ಥಿಗಳಲ್ಲ ಎಂದು ಘೋಷಣೆ ಬಳಿಕವೂ ತಂಡವಾಗಿ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಕಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಸಂಘಟನಾತ್ಮಕವಾಗಿ ಬೆಳೆದಿರುವ ಸುಳ್ಯದ  ಸಹಕಾರಿ ಕ್ಷೇತ್ರವು ಬಿಜೆಪಿ-ಸಹಕಾರ ಭಾರತಿಯಲ್ಲಿ ಈಗ ವಿಘಟನೆಯ ಹಾದಿಯಲ್ಲಿ  ಸಾಗಿದೆಯೇ ಎಂಬ ಬಹುದೊಡ್ಡ ಪ್ರಶ್ನೆ ಈಗ ಇದೆ.

ಡಿಸಿಸಿ ಬ್ಯಾಂಕ್  ಅಡ್ಡಮತದಾನದ ಬಳಿಕ ಸುಳ್ಯದಲ್ಲಿ ಸಹಕಾರ ಭಾರತಿ-ಬಿಜೆಪಿಯಲ್ಲಿ ದೈವಸ್ಥಾನದಿಂದ ಆರಂಭವಾಗಿ ಕಾನೂನು ಚೌಕಟ್ಟು, ಸಂಘಟನೆಯ ನಿರ್ಧಾರದವರೆಗೆ  ನಡೆದ ವಿದ್ಯಮಾನಗಳು ಈಗ ಮತ್ತೊಮ್ಮೆ ಗೆಲುವು ಸಾಧಿಸುವವರೆಗೆ ತಲುಪಿದೆ. ಈ ಹಿಂದೆ ನೆಲ್ಲೂರು ಕೆಮ್ರಾಜೆಯಲ್ಲೂ ಇದೇ ರೀತಿ ನಡೆದಿತ್ತು.

 

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

60 ಸೆಕೆಂಡುಗಳಲ್ಲಿ 10 ಆಸನಗಳ ಪ್ರದರ್ಶಿಸಿದ ಋತ್ವಿ | ಯೋಗದಲ್ಲಿ ಚನ್ನರಾಯಪಟ್ಟಣದ ಬಾಲಕಿ ಸಾಧನೆ
June 19, 2025
11:21 PM
by: The Rural Mirror ಸುದ್ದಿಜಾಲ
ರಾಜ್ಯದ ಮಾವು ಬೆಳೆಗಾರರ ನೆರವಿಗೆ ಮನವಿ | 3 ಲಕ್ಷ ಸಿಬ್ಬಂದಿಗಳಿಗೆ ನಗದುರಹಿತ  ಆರೋಗ್ಯ ಯೋಜನೆ | ರಾಜ್ಯದ ದುರ್ಗಮ ಪ್ರದೇಶಗಳಿಗೆ ಸಂಚಾರಿ ಆರೋಗ್ಯ ಘಟಕ |
June 19, 2025
10:59 PM
by: The Rural Mirror ಸುದ್ದಿಜಾಲ
ಭಾರತದ ಕಾಫಿ ರಫ್ತು ಶೇಕಡ 40 ರಷ್ಟು ವೃದ್ಧಿ | ಒಡಿಶಾ, ಈಶಾನ್ಯ ರಾಜ್ಯಗಳಲ್ಲಿ ಕಾಫಿ ಬೆಳೆಯುವ ಬಗ್ಗೆ ಪ್ರಯೋಗ
June 19, 2025
10:48 PM
by: The Rural Mirror ಸುದ್ದಿಜಾಲ
ಏಕೆ ಕೆಲವು ಹಿಂಡಿ ದನಗಳಿಗೆ ಹಿಡಿಸುವುದಿಲ್ಲ…?
June 19, 2025
9:51 PM
by: ಎ ಪಿ ಸದಾಶಿವ ಮರಿಕೆ

You cannot copy content of this page - Copyright -The Rural Mirror

Join Our Group