ಪ್ರಕೃತಿ ಪರಿಸರದಲ್ಲಿ ಮಳೆ ಬೀಳುತ್ತಿದ್ದಂತೆ ಈ ಸಸ್ಯಗಳು ಕೆಲವೇ ದಿನಗಳಲ್ಲಿ ಹೂಬಿಟ್ಟು ನಳನಳಿಸುತ್ತದೆ ಇದೊಂದು ಪರಾವಲಂಬಿ ಸಸ್ಯ ಇದನ್ನು ಸೀತಾ ಹೂ, ಸೀತೆ ದಂಡೆ ಹೂ, ಸೀತಾರಾಮ ಹೂವು, ದ್ರೌಪದಿ ಹೂ ಎಂದು ಕರೆಸಿಕೊಳ್ಳುವ ಈ ಪುಷ್ಪವು ಆರ್ಕಿಡ್ ಪ್ರಭೇದಕ್ಕೆ ಸೇರಿದೆ ಮಳೆಗಾಲದ ಆರಂಭದಲ್ಲಿಯೇ ಹೂವುಬಿಟ್ಟು ಮೈತುಂಬಿ ಕಂಗೊಳಿಸುವ ಈ ವಿನೂತನ ಹೂವು ಸುಮಾರು ಹತ್ತರಿಂದ ಹದಿನೈದು ದಿನದವರೆಗೂ ತಾಜಾತನದಿಂದ ತನ್ನ ಸೌಂದರ್ಯವನ್ನು ಪ್ರದರ್ಶಿಸುತ್ತದೆ ಒಂದೇ ಗಿಡದಲ್ಲಿ 19 ಮಿಕ್ಕಿ ಅರಳಿದ್ದು ಉತ್ತರ ಕನ್ನಡ ಜಿಲ್ಲೆಯ ಗಣಪತಿ ಹಾಸ್ಪುರ ಎಲ್ಲಾಪುರ ಅವರ ಕೈತೋಟದಲ್ಲಿ ಅರಳಿ ಕಂಗೊಳಿಸುತ್ತಿದೆ ಇನ್ನೊಂದು ಹೂ ಮುಡಿಪು ಸುಬ್ರಹ್ಮಣ್ಯ ಭಟ್ ಅವರ ಮನೆಯ ಅಂಗಳದಲ್ಲಿ ಅರಳಿ ಕಂಗೊಳಿಸಿದ್ದು ಪ್ರಕೃತಿಯ ನೈಜ ಚಿತ್ರಣ ಇದಾಗಿದೆ.
ಬರಹ:- ನಂದನ್ ಕುಮಾರ್ ಪೆರ್ನಾಜೆ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel