ಸುನಾದ ಶಾಲೆಯ ವಾರ್ಷಿಕ ಸಂಗೀತೋತ್ಸವ

February 3, 2020
6:59 AM

ಸುಳ್ಯ: ಭಕ್ತಿರಸದ ಮೂಲಕ ನಮ್ಮೊಳಗಿರುವ ಅರಿಷಡ್ವರ್ಗಗಳನ್ನು ಜಯಿಸಿ ಆ ಭಗವಂತನಲ್ಲಿ ಶರಣಾಗತಿ ಹೊಂದಲು ಇರುವ ಅತಿ ಸರಳ ಮಾರ್ಗ ಸಂಗೀತ. ಸಮಾಜದ ಉನ್ನತಿಗೆ, ಸದ್ಭಾವನೆ ಮತ್ತು ಸಾಮರಸ್ಯದಲ್ಲಿ ಬದುಕಲು ಸಂಗೀತ ವಿದ್ಯೆ ಅನಿವಾರ್ಯ ಎಂದು ಖ್ಯಾತ ಮೃದಂಗ ವಿದ್ವಾನ್ ಸುನಾದ ಕಲಾ ಶಾಲಾ ನಿರ್ದೇಶಕ ಕಾಂಚನ ಎ ಈಶ್ವರ ಭಟ್ ಅಭಿಪ್ರಾಯಪಟ್ಟಿದ್ದಾರೆ.

Advertisement
Advertisement

ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ಸುನಾದ ಸಂಗೀತ ಕಲಾ ಶಾಲೆಯ ಸುಳ್ಯ ಶಾಖೆಯ ವಾರ್ಷಿಕ ಸಂಗೀತೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ತನ್ನ ಮೂಲ ಉದ್ದೇಶವನ್ನು ಮರೆತು ಸಂಗೀತವನ್ನು ಅರ್ಜಿಸುತ್ತಿರುವುದು ಅನುಭವಕ್ಕೆ ಬರುತ್ತಿದೆ. ಸಂಗೀತವನ್ನು ಎಲ್ಲರೂ ಅರ್ಥೈಸಿ ಅನುಸರಿಸಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿಜಯಶ್ರೀ ಈಶ್ವರ ಭಟ್, ನಾರಾಯಣ ಕೇಳತ್ತಾಯ, ಪ್ರಕಾಶ್ ಹಾಸನಡ್ಕ, ಪೂರ್ಣಿಮಾ, ವಿದುಷಿ ವಾಣಿ ಪ್ರಸಾದ್, ಸೌಜನ್ಯ ಪ್ರಶಾಂತ್, ವಿದುಷಿ ಶಿಲ್ಪಾ, ಮಹಾಬಲ ಬಿರ್ಮುಕಜೆ, ವಿದ್ವಾನ್ ಶ್ಯಾಮ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಸುನಾದ ಸಂಗೀತ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು.

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಲಾವಿದರು ಅನೇಕರ ಬದುಕಿಗೆ ಪ್ರೇರಣೆ ನೀಡಬಲ್ಲರು
October 21, 2025
8:52 PM
by: ದ ರೂರಲ್ ಮಿರರ್.ಕಾಂ
ಅ.4 ಚೊಕ್ಕಾಡಿಯಲ್ಲಿ “ನವರಾತ್ರಿ ವೈಭವಂ”
October 3, 2025
2:43 PM
by: The Rural Mirror ಸುದ್ದಿಜಾಲ
ಚಿತ್ರಕಲಾ ಪರಿಷತ್ ನಲ್ಲಿ ಛಾಯಾಚಿತ್ರ ಪ್ರದರ್ಶನ | ಯೂತ್ ಫೋಟೋಗ್ರಾಫಿಕ್ ಸೊಸೈಟಿ ಆಯೋಜನೆ
August 24, 2025
12:44 PM
by: ದ ರೂರಲ್ ಮಿರರ್.ಕಾಂ
ತುಳುವರ ಆಟಿ ತಿಂಗಳು | ಆಟಿಯ ಕೊನೆಗೆ ಆಟಿಗೊಂದು ಸುತ್ತು….
August 13, 2025
7:15 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror