ಸುಬ್ರಹ್ಮಣ್ಯ – ಸಕಲೇಶಪುರ ರೈಲು ಮಾರ್ಗದಲ್ಲಿ ಆತಂಕ ಹಳಿಗೆ ಉರುಳಲು ಸಿದ್ದವಾಗಿದೆ ಬಂಡೆ !

July 20, 2019
8:30 AM

ನೆಟ್ಟಣ: ಮಂಗಳೂರು-ಬೆಂಗಳೂರು ನಡುವಿನ ರೈಲು ಮಾರ್ಗದಲ್ಲಿ  ಸುಬ್ರಹ್ಮಣ್ಯದಿಂದ ಸಕಲೇಶಪುರ ನಡುವಿನ ರೈಲು ಹಳಿಯಲ್ಲಿ   ಮಣಿಬಂಡ ಎಂಬಲ್ಲಿ ಬಂಡೆಯೊಂದು ರೈಲು ಹಳಿ ಮೇಲೆ ಉರುಳಿ ಬೀಳಲು ಸಿದ್ದವಾಗಿದೆ. ಬಂಡೆ ತೆರವು ಕಾಮಗಾರಿಯನ್ನು ಶನಿವಾರ ನಡೆಸಲು ರೈಲ್ವೆ ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದಾರೆ.

Advertisement
Advertisement
Advertisement
Advertisement

ಶನಿವಾರ ಬಂಡೆ ಸ್ಪೋಟಿಸುವ ಕಾಮಗಾರಿ ವೇಳೆ ಮತ್ತಷ್ಟು ಭೂಕುಸಿತ ಆದಲ್ಲಿ ಈ ಮಾರ್ಗದಲ್ಲಿ ಶನಿವಾರ ಹಗಲು ಅಥವಾ ರಾತ್ರಿ ಅವಧಿ ರೈಲು ಓಡಾಟಗಳಲ್ಲಿ ವ್ಯತ್ಯಯಗಳು ಉಂಟಾಗುವ ಸಾಧ್ಯತೆ ಇದೆ. ಸುಬ್ರಹ್ಮಣ್ಯ ರಸ್ತೆ ಮತ್ತು ಸಿರಿಬಾಗಿಲು ನಡುವಿನ  86 ನೇ ಕಿ.ಮೀ ನಲ್ಲಿ ಹಳಿಯ ಮೇಲೆ ಕಳೆದ ಮಳೆಗಾಲ ಆಗಸ್ಟ್ ನಲ್ಲಿ ಭಾರಿ ಭೂಕುಸಿತ ಸಂಭವಿಸಿತ್ತು. ಹಲವು ಕಡೆ ಭೂಕುಸಿತ ಸಂಭವಿಸಿ ಅನಾಹುತ ಸೃಷ್ಟಿಸಿತ್ತು. ಅಂದು ಭೂಕುಸಿತಗೊಂಡ ಸ್ಥಳದಲ್ಲಿ ಈ ಅಪಾಯಕಾರಿ ಬಂಡೆ ಇದೆ. ಈ ಸ್ಥಳದಲ್ಲಿ ಇನ್ನಷ್ಟು ಭೂಕುಸಿತ ನಡೆಯುವ ಸಾಧ್ಯ ತೆಗಳು ಕಂಡುಬಂದಿವೆ. ಶುಕ್ರವಾರ ರಾತ್ರಿ ರೈಲು ಓಡಾಟ ನಡೆಸಿದ ಬಳಿಕವಷ್ಟೆ ಬಂಡೆ ತೆರವು ಕಾಮಗಾರಿ ಕುರಿತು ರೈಲ್ವೆ ಅಧಿಕಾರಿಗಳು ನಿರ್ಧಾರಿಸಲಿದ್ದಾರೆ.

Advertisement

ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದ ತಾಂತ್ರಿಕ ಅಧಿಕಾರಿಗಳು ಈ ಭಾಗದಲ್ಲಿ ಮೊಕ್ಕಂ ಹೂಡಿ ಪರಿಶೀಲನೆ ನಡೆಸುತಿದ್ದಾರೆ.ಅತೀವ ಮಳೆ ಇರುವ ಕಾರಣ ಈ ಮಾರ್ಗದಲ್ಲಿ ರೈಲು ಯಾನದ ಕುರಿತು ತೀವ್ರ ನಿಗಾವಹಿಸಲಾಗಿದೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇರಳದ ಕೆಲವು ಕಡೆ ತಾಪಮಾನ ಏರಿಕೆಯ ಎಚ್ಚರಿಕೆ | 3 ಡಿಗ್ರಿ ಏರಿಕೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ |
February 25, 2025
10:11 PM
by: The Rural Mirror ಸುದ್ದಿಜಾಲ
ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಅಧಿಕ
February 25, 2025
7:20 AM
by: ದ ರೂರಲ್ ಮಿರರ್.ಕಾಂ
ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು
February 25, 2025
7:05 AM
by: The Rural Mirror ಸುದ್ದಿಜಾಲ
ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ
February 24, 2025
12:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror