ಸುಳ್ಯದ ಕಲಾಕ್ಷೇತ್ರಕ್ಕಿನ್ನು ಆಂಗಿಕ ಸ್ಪರ್ಶ..

November 27, 2019
9:48 PM

ಸುಳ್ಯ: ಮಾತಿನಲ್ಲಿ ಹೇಳಲಾಗದ್ದನ್ನು, ಭಾಷೆಯ ಮೂಲಕ ವ್ಯಕ್ತಪಡಿಸಲಾಗದ್ದನ್ನು, ಭಾವನೆಗಳ ಮೂಲಕ ಅಥವಾ ದೇಹ ಭಾಷೆಯ ಮೂಲಕ ಹೇಳಬಹುದು. ಮಾತಿನಲ್ಲಿ ಹೇಳಲಾಗದ ಲಕ್ಷ ಲಕ್ಷ ಸಂದೇಶಗಳನ್ನು ಕಲೆಗಳ ಮೂಲಕ ಕಲಾವಿದರು ತಮ್ಮ ಭಾವನೆಗಳಿಂದ ಮತ್ತು ಆಂಗಿಕವಾಗಿ ಹೇಳುತ್ತಾರೆ. ಅದೇ ಸಂಪದ್ಭರಿತ ಸುಳ್ಯದ ಕಲಾ ಸಾಂಸ್ಕೃತಿಕ ಕ್ಷೇತ್ರಕ್ಕೆ ಮೆರುಗು ಹೆಚ್ಚಿಸಲು ಇನ್ನು ‘ಆಂಗಿಕ’ ಸ್ಪರ್ಶ ದೊರೆಯಲಿದೆ.

Advertisement

ಕಳೆದ ಒಂದೂವರೆ ವರ್ಷದಿಂದ ಸುಳ್ಯದ ಕಲಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ ನೂರಾರು ಯುವ ಪ್ರತಿಭೆಗಳನ್ನು ಬೆಳೆಸುತ್ತಿರುವ ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ, ಕಲಾವಿದ, ನಾಟಕಕಾರ ಲೋಕೇಶ್ ಊರುಬೈಲು ನೇತೃತ್ವದಲ್ಲಿ ಸುಳ್ಯದಲ್ಲಿ ಆರಂಭಗೊಂಡಿರುವ ನೂತನ ಸಂಸ್ಥೆಯೇ ಆಂಗಿಕ. ಮಾತಿನಲ್ಲಿ ಹೇಳಲಾಗದ ನೂರಾರು ಭಾವನೆಗಳನ್ನು ಬಿತ್ತರಿಸಿ ಕಲಾವಿದರ ಪ್ರೌಢಿಮೆ, ಸೌಂದರ್ಯ, ಮೆರುಗು ಹೆಚ್ಚಿಸಲಿದೆ ಈ ಆಂಗಿಕ.

ವೇದಿಕೆ ಮೇಲೆ ಕಲಾ ಸಾಂಸ್ಕೃತಿಕ ವೈಭವ ಪ್ರಸ್ತುತಿಪಡಿಸುವ ಕಲಾವಿದರ ಸೌಂದರ್ಯ ಹೆಚ್ಚಿಸಿವುದರಲ್ಲಿ ಅವರು ಧರಿಸುವ ಆಭರಣ, ವಸ್ತ್ರಗಳು ಪ್ರಮುಖ ಪಾತ್ರ ವಹಿಸುತ್ತದೆ. ಸುಳ್ಯದಲ್ಲಿ ನೂರಾರು ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ಆದರೆ ಕಲಾ ಪ್ರದರ್ಶನದ ಸಂದರ್ಭಗಳಲ್ಲಿ ಧರಿಸುವ ವಸ್ತ್ರ, ಆಭರಣಗಳು ಮತ್ತು ಪರಿಕರಗಳು ಇಲ್ಲಿ ಲಭ್ಯವಿಲ್ಲ. ಆದುದರಿಂದ ಕಲಾವಿದರಿಗೆ ಅಗತ್ಯವಿರುವ ವಸ್ತ್ರಗಳು ಮತ್ತು ಆಭರಣಗಳನ್ನು ಒದಗಿಸುವ ಪ್ರಯತ್ನ ಆಂಗಿಕದ ಮೂಲಕ ನಡೆಸಲಾಗುತ್ತದೆ. ಸುಳ್ಯ ಬಸ್ ನಿಲ್ದಾಣದ ಬಳಿಯ ಕೆ.ಆರ್.ಕಾಂಪ್ಲೆಕ್ಸ್ ನಲ್ಲಿ ಆಂಗಿಕ ಕಾರ್ಯಾರಂಭ ಮಾಡಿದೆ.

 

ಏನೆಲ್ಲ ದೊರೆಯಲಿದೆ: ಜನಪದ, ಸಿನಿಮಾ, ಶಾಸ್ತ್ರೀಯ, ನೃತ್ಯ ಪ್ರಕಾರಗಳ ಎಲ್ಲಾ ವಿಧದ ವೇಷಭೂಷಣಗಳು, ಆಭರಣಗಳು, ಛದ್ಮವೇಷ, ನಾಟಕ, ರಂಗಪರಿಕರಗಳು ಇಲ್ಲಿ ಲಭ್ಯವಿದೆ. ಅಲ್ಲದೆ ವಾರ್ಷಿಕೋತ್ಸವ, ಸಭೆ, ಸಮಾರಂಭಗಳಿಗೆ ನೃತ್ಯ, ನಾಟಕ, ಹಾಡು, ಸಿನಿಮಾ, ಮನರಂಜನೆ, ನಿರ್ದೇಶನ, ನಿರ್ಮಾಣ ಮಾಡಿಕೊಡಲಾಗುತ್ತದೆ. ಸನ್ಮಾನ ಸಮಾರಂಭಗಳಿಗೆ ಬೇಕಾದ ಪೇಟ, ಹಾರ, ಶಾಲು, ಸ್ಮರಣಿಕೆ, ಗುಣಮಟ್ಟದ ಆಕರ್ಷಣೀಯ ಫಲಕಗಳು ಹಾಗು ಸ್ಮರಣಿಕೆಗಳು ಒಂದೇ ಕಡೆ ಲಭ್ಯವಿದೆ. ಎಲ್ಲಾ ಸಭೆ, ಶುಭ ಸಮಾರಂಭಗಳಿಗೆ ಬೇಕಾದ ವೇದಿಕೆ ಅಲಂಕಾರ ಮಾಡಿ ಕೊಡಲಾಗುತ್ತದೆ. ಹಾಗು ಕಲಾತ್ಮಕ ವೇದಿಕೆಯ ನಿರ್ಮಾಣವನ್ನೂ ಮಾಡಿ ಕೊಡಲಾಗುವುದು ಎಂದು ಲೋಕೇಶ್ ಊರುಬೈಲು ಹೇಳುತ್ತಾರೆ.
ಸುಳ್ಯಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಅದಕ್ಕೆ ಬೇಕಾಗುವ ವಸ್ತ್ರ, ಆಭರಣ, ಪರಿಕರಗಳನ್ನು ಹೊಂದಿಸುವುದು ಕಲಾವಿದರಿಗೆ ದೊಡ್ಡ ಸವಾಲೇ ಸರಿ. ಈ ನಿಟ್ಟಿನಲ್ಲಿ ಕಲಾವಿದರಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಒದಗಿಸಿಕೊಡುವ ಪ್ರಯತ್ನ ಆಂಗಿಕದ ಮೂಲಕ ನಡೆಸುವ ಇರಾದೆ ಇದೆ ಎನ್ನುತ್ತಾರೆ ಲೋಕೇಶ್ ಊರುಬೈಲು.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 21-04-2026 | ಕರಾವಳಿ-ಮಲೆನಾಡಿನಲ್ಲಿ ಮಳೆ ಜೋರಾಗಲಿದೆ, ಉತ್ತರ ಒಳನಾಡಿಗೂ ಗುಡುಗು ಮಳೆ..!
April 21, 2026
3:17 PM
by: ಸಾಯಿಶೇಖರ್ ಕರಿಕಳ
ವಿದ್ಯುತ್ ದರ ಶಾಕ್..! ಸಣ್ಣ ಕೈಗಾರಿಕೆಗಳಿಗೆ ಭಾರೀ ಹೊರೆ – ಉಮಾ ರೆಡ್ಡಿ ಎಚ್ಚರಿಕೆ
April 21, 2026
7:35 AM
by: ಮಿರರ್‌ ಡೆಸ್ಕ್
ಮುಳಬಾಗಿಲಿನಲ್ಲಿ ಹೋಟೆಲ್ ಮೇಲೆ ದಾಳಿ : 30 ಲೀಟರ್ ಹಳೆಯ ತುಪ್ಪ ಜಪ್ತಿ, ದಂಡ
April 21, 2026
7:31 AM
by: ಮಿರರ್‌ ಡೆಸ್ಕ್
ರೈತರಿಗೆ ಗುಡ್ ನ್ಯೂಸ್..! ತೊಗರಿ ಖರೀದಿ ಅವಧಿ ಮೇ 15ರವರೆಗೆ ವಿಸ್ತರಣೆ
April 21, 2026
7:24 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror