ಸ್ವಾತಂತ್ರ್ಯಕ್ಕೆ ಮೆರುಗು ಮೂಡುವುದೇ ಜವಾಬ್ದಾರಿಯ ತಳಹದಿಯಲ್ಲಿ…..

August 15, 2019
8:00 AM

ಸ್ವಾತಂತ್ರ್ಯದಿನ ಶುಭಾಶಯ. ಎಲ್ಲರಿಗೂ ಶುಭಾಶಯವನ್ನು ತಿಳಿಸುತ್ತಾ, ಈ ಸಂದರ್ಭ ನಮ್ಮ ಜವಾಬ್ದಾರಿ ಏನು ಎಂಬುದರ ಬಗ್ಗೆಯೂ ಅರಿಯಬೇಕಿದೆ. ಈ ಕಾರಣದಿಂದ ರಾಕೇಶ್ ಕುಮಾರ್ ಕಮ್ಮಜೆ ಅವರು ಲೇಖನವನ್ನು ಬರೆದಿದ್ದಾರೆ. ಈ ಕಡೆಗೆ ನಮ್ಮ ಬೆಳಕು…

Advertisement
Advertisement

ಸ್ವಾತಂತ್ರ್ಯ ಅನ್ನುವುದು ಸಕಲ ಜೀವರಾಶಿಗಳೂ ಸದಾ ಬಯಸುವ ಸಂಗತಿಯೇ ಹೌದು. ಅದರಲ್ಲೂ ಕಳೆದುಕೊಂಡ ಸ್ವಾತಂತ್ರ್ಯವನ್ನು ಮರಳಿ ಪಡೆದುಕೊಂಡವರಿಗೆ ಸ್ವಾತಂತ್ರ್ಯ ಉತ್ಸವವೆನಿಸುವುದರಲ್ಲಿ ಯಾವ ಸಂದೇಹವೂ ಇಲ್ಲ. ನಾವೂ ಹಾಗೆಯೇ!

ಸ್ವಾತಂತ್ರ್ಯ ಎಂಬ ಪದ ಬಿಡುಗಡೆ, ವಿಮೋಚನೆ ಎಂಬ ಅರ್ಥವನ್ನು ಹೊಮ್ಮಿಸುತ್ತದಾದರೂ, ಆ ಪದದ ಜತೆಜತೆಗೇ ಜವಾಬ್ದಾರಿ ಎಂಬ ಅಗೋಚರ ಭಾವವೂ ವ್ಯಕ್ತವಾಗುವುದನ್ನು ಗುರುತಿಸುವಲ್ಲಿ ಎಡವಬಾರದು. ಸ್ವಾತಂತ್ರ್ಯಕ್ಕೆ ಮೆರುಗು ಮೂಡುವುದೇ ಜವಾಬ್ದಾರಿಯ ತಳಹದಿಯಲ್ಲಿ ಎಂಬುದು ಸರ್ವವಿಧಿತ.

ನಮ್ಮ ದೇಶವೀಗ ವಿಶ್ವವಂದ್ಯ ಸ್ಥಾನವನ್ನು ಅಲಂಕರಿಸುವ ಸಾಮರ್ಥ್ಯವನ್ನು ಹೊರಸೂಸುತ್ತಿದೆ. ಅದಕ್ಕೆ ಬೇಕಾದ ಯೋಗ್ಯತೆಗಳೂ ಇಲ್ಲಿವೆ. ಆದರೆ ಇಂತಹ ಸಾರ್ವಭೌಮ ರಾಷ್ಟ್ರದ ಪ್ರಜೆಗಳು ಹೇಗಿರಬೇಕು? ಇತರರಿಗೆ ಮಾದರಿಯಾಗಲಿರುವವರ ಆಚಾರ, ವಿಚಾರ, ವ್ಯವಹಾರಗಳು ಎಂತಿರಬೇಕು? ಈ ಕುರಿತು ಆಲೋಚಿಸಲು ಇದು ಪ್ರಶಸ್ತ ಸಂದರ್ಭವೆನಿಸುತ್ತದೆ. ಹಾಗೆ ನೋಡಿದರೆ ದೇಶವೊಂದು ಉಚ್ರಾಯ ಸ್ಥಿತಿ ಅಥವ ಅಧಃಪತನ ಕಾಣುವುದಕ್ಕೆ ಅಲ್ಲಿನ ಜನರ ಮನಃಸ್ಥಿತಿಗಳೂ ಕಾರಣವಾಗುತ್ತವೆ ಎಂಬುದನ್ನು ಮರೆಯಬಾರದು. ಅಂದಹಾಗೆ, ನನ್ನ ದೇಶಕ್ಕೆ ನನ್ನ ಬಾಧ್ಯಸ್ಥಿಕೆ ಏನು ಎಂಬುದನ್ನು ನೆನಪು ಮಾಡುವುದಕ್ಕೇ ಈ ಸ್ವಾತಂತ್ರ್ಯ ದಿನಾಚರಣೆ ಬರುತ್ತಿದೆಯೇನೋ ಅನಿಸುತ್ತದೆ!

 

Advertisement
ರಾಕೇಶ್ ಕುಮಾರ್ ಕಮ್ಮಜೆ

ರಾಕೇಶ್ ಕುಮಾರ್ ಕಮ್ಮಜೆ

ಮುಖ್ಯಸ್ಥರು , ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜು, ಪುತ್ತೂರು

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಡೀಮ್ಡ್, ಸೆಕ್ಷನ್ 4 ಬಿಕ್ಕಟ್ಟು ಪರಿಹಾರಕ್ಕೆ ಶೀಘ್ರವೇ ಕೇಂದ್ರ, ಸುಪ್ರೀಂಗೆ ಮನವಿ | ಸಚಿವ ಈಶ್ವರ್ ಖಂಡ್ರೆ
June 6, 2025
9:39 PM
by: The Rural Mirror ಸುದ್ದಿಜಾಲ
ಗ್ರಾಮ ಪಂಚಾಯ್ತಿಗೊಂದು ಕೆಪಿಎಸ್ ಶಾಲೆ | ಮುಂದಿನ ದಿನಗಳಲ್ಲಿ 500 ಕೆಪಿಎಸ್ ಶಾಲೆ ಆರಂಭ
June 6, 2025
9:19 PM
by: The Rural Mirror ಸುದ್ದಿಜಾಲ
ಅಸುರಕ್ಷಿತ ಜಾಲತಾಣಗಳಲ್ಲಿ ವಹಿವಾಟು ನಡೆಸದಂತೆ ಸಾರ್ವಜನಿಕರು ಎಚ್ಚರವಾಗಿರಬೇಕು
June 6, 2025
9:10 PM
by: The Rural Mirror ಸುದ್ದಿಜಾಲ
ಮೈಸೂರಿನಲ್ಲಿ 44 ನೂತನ ವಿದ್ಯುತ್‌ ಉಪಸ್ಥಾವರ ಸ್ಥಾಪನೆ
June 6, 2025
8:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group