ಹರಟೆ ವಿಷಯ ಹರಟೆಯೇ ಆಗದಿರಲಿ

July 13, 2019
7:00 PM

ಪುತ್ತೂರು: ಮಾತುಗಾರಿಕೆ ಎಂಬುದು ಒಂದು ಕಲೆ. ಈ ಕಲೆಯ ಮುಂದುವರಿದ ಭಾಗವೇ ಹರಟೆ. ಆದರೆ ಹರಟೆ ಎಂದರೆ ಕೇವಲ ಹಾಸ್ಯವಲ್ಲ. ಬದಲಾಗಿ ಅಲ್ಲಿ ಒಂದು ವಿಷಯದ ಕುರಿತು ಅರ್ಥಗರ್ಭಿತವಾದ ಚರ್ಚೆಯ ಮುಖಾಂತರ ವಿಮರ್ಶಿಸುವುದೇ ಹರಟೆ. ವಿಷಯ ರಹಿತವಾಗಿ ಮಾತನಾಡುವುದು ಹರಟೆಯಾಗುವುದಿಲ್ಲ. ಹರಟೆಯ ಮುಖೇನ ವಿಷಯದ ಕುರಿತ ಜ್ಞಾನವನ್ನು ವ್ಯಕ್ತಿಗೆ ಅಥವಾ ಸಮಾಜಕ್ಕೆ ನೀಡಿದಂತಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ವಾಣಿಜ್ಯ ಪದವಿ ವಿಭಾಗದ ಉಪನ್ಯಾಸಕಿ ರವಿಕಲಾ ಅಭಿಪ್ರಾಯಪಟ್ಟರು.

Advertisement
Advertisement

ಅವರು ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸಿದ “ಮಣಿಕರ್ಣಿಕಾ” ಮಾತುಗಾರರ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ “ಮಿರ್ಚಿ ಮಂಡಕ್ಕಿ ಖಡಕ್ ಚಾಯ್” ವಿಷಯದ ಕುರಿತು ಮಾತನಾಡಿದರು. ಹರಟೆಯಲ್ಲಿ ಒಂದು ವಿಷಯದ ಕುರಿತು ನಗೆ ಚಟಾಕಿಯ ಮೂಲಕ ವಿಮರ್ಶೆ ನಡೆಸುವುದು. ಇದರಲ್ಲಿ ಔಪಚಾರಿಕ ಹಾಗೂ ಅನೌಪಚಾರಿಕ ಎಂಬುದಾಗಿ ಹರಟೆಯನ್ನು ವಿಂಗಡಿಸಬಹುದು. ವಿದ್ಯಾರ್ಥಿಗಳು ಮಾಡುವ ಚರ್ಚೆಗಳು ಸಾಮಾನ್ಯವಾಗಿ ಅನೌಪಚಾರಿಕವಾಗಿರುತ್ತದೆ. ಅದೇ ರೀತಿ ಮೊಬೈಲ್ ಮುಖೇನ ಇಂದು ವ್ಯಾಟ್ಸಪ್ ಮೂಲಕ ಮಾತನಾಡುವುದೂ ಒಂದು ರೀತಿಯ ಹರಟೆ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ದೊರೆತಿರುವ ಈ ವೇದಿಕೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಅಲ್ಲದೆ ವ್ಯಕ್ತಿತ್ವ ವಿಕಸನ ಆಗುವ ದೃಷ್ಟಿಯಿಂದ ಇದು ಸಹಕಾರಿ ಎಂದರು.
ತೃತೀಯ ಬಿಎ ವಿದ್ಯಾರ್ಥಿ ರಾಮಕಿಶನ್ ಕೆ.ವಿ. ವಾರದ ಮಾತುಗಾರ ಬಹುಮಾನ ಪಡೆದರು. ತೃತೀಯ ಬಿಎ ವಿದ್ಯಾರ್ಥಿಗಳು ವಾರದ ಮಾತುಗಾರರ ತಂಡ ಎಂಬ ಬಹುಮಾನ ಪಡೆಯಿತು.
ಪದವಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ, ವೇದಿಕೆಯ ಕಾರ್ಯದರ್ಶಿ ತೇಜಶ್ರೀ ವೆಂಕಟೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಧನ್ಯಾ ವಂದಿಸಿದರು. ಕಾರ್ಯಕ್ರಮವನ್ನು ಜಯಶ್ರೀ ಎ. ನಿರೂಪಿಸಿದರು.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

60 ಸೆಕೆಂಡುಗಳಲ್ಲಿ 10 ಆಸನಗಳ ಪ್ರದರ್ಶಿಸಿದ ಋತ್ವಿ | ಯೋಗದಲ್ಲಿ ಚನ್ನರಾಯಪಟ್ಟಣದ ಬಾಲಕಿ ಸಾಧನೆ
June 19, 2025
11:21 PM
by: The Rural Mirror ಸುದ್ದಿಜಾಲ
ರಾಜ್ಯದ ಮಾವು ಬೆಳೆಗಾರರ ನೆರವಿಗೆ ಮನವಿ | 3 ಲಕ್ಷ ಸಿಬ್ಬಂದಿಗಳಿಗೆ ನಗದುರಹಿತ  ಆರೋಗ್ಯ ಯೋಜನೆ | ರಾಜ್ಯದ ದುರ್ಗಮ ಪ್ರದೇಶಗಳಿಗೆ ಸಂಚಾರಿ ಆರೋಗ್ಯ ಘಟಕ |
June 19, 2025
10:59 PM
by: The Rural Mirror ಸುದ್ದಿಜಾಲ
ಭಾರತದ ಕಾಫಿ ರಫ್ತು ಶೇಕಡ 40 ರಷ್ಟು ವೃದ್ಧಿ | ಒಡಿಶಾ, ಈಶಾನ್ಯ ರಾಜ್ಯಗಳಲ್ಲಿ ಕಾಫಿ ಬೆಳೆಯುವ ಬಗ್ಗೆ ಪ್ರಯೋಗ
June 19, 2025
10:48 PM
by: The Rural Mirror ಸುದ್ದಿಜಾಲ
ಏಕೆ ಕೆಲವು ಹಿಂಡಿ ದನಗಳಿಗೆ ಹಿಡಿಸುವುದಿಲ್ಲ…?
June 19, 2025
9:51 PM
by: ಎ ಪಿ ಸದಾಶಿವ ಮರಿಕೆ

You cannot copy content of this page - Copyright -The Rural Mirror

Join Our Group