ಅಸ್ತಂಗತರಾದ ಗೋಳ್ತಜೆ ಸದಾಶಿವ ಮಾಸ್ಟ್ರು……. ನುಡಿನಮನ

October 2, 2019
9:42 AM

ಧರ್ಮಪತ್ನಿ ಲಕ್ಷ್ಮೀ ಅಮ್ಮ, ಜೇಷ್ಟ ಪುತ್ರ ಡಾಕ್ಟರ್ ಈಶ್ವರಯ್ಯ ಅವರನ್ನೊಳಗೊಂಡಂತೆ ಮೂವರು ಪುತ್ರರು ಮತ್ತು ನಾಲ್ವರು ಪುತ್ರಿಯರು ಮತ್ತು ಅಪಾರ ಬಂಧು, ಅಭಿಮಾನಿ ಬಳಗಕ್ಕೆ ನೆನಪುಗಳ ಮಧುರ ಭಾವಗಳನ್ನು ಬಿಟ್ಟು ತನ್ನ ಎಂಬತ್ತೊಂಬತ್ತನೇ ಹರೆಯದಲ್ಲಿ ಕಲ್ಮಡ್ಕ ಗ್ರಾಮದ ಗೋಳ್ತಜೆ ಸದಾಶಿವಯ್ಯನವರು ಇಹಲೋಕ ಯಾತ್ರೆ ಮುಗಿಸಿದರು.

ಸುಳ್ಯ ತಾಲೂಕಿನ ಶೇಣಿಯಲ್ಲಿ ಶಾಲಾ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಸದಾಶಿವಯ್ಯನವರು ಕಲ್ಮಡ್ಕ ಶಾಲೆಯಲ್ಲಿ ಅದ್ಯಾಪನಾ ಪ್ರವೃತ್ತಿಯನ್ನು ಮುಂದುವರಿಸಿ ನಿವೃತ್ತಿ ಹೊಂದಿ ಅದ್ಯಾಪಕರೆಂದರೆ ಹೇಗಿರಬೇಕೆಂದು ಮಾದರಿಯಾದವರು. ನೇರ ನಡೆ ನುಡಿಯವರಾದ ಸದಾಶಿವಯ್ಯನವರು ಹಿರಿಯ ಕಿರಿಯರೆನ್ನದೇ ಎಲ್ಲರೊಡನೆ ಆತ್ಮೀಯವಾಗಿ ಬೆರೆತು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಅಧ್ಯಾಪನ ವೃತ್ತಿಯಂತೆಯೇ,ಕೃಷಿಯಲ್ಲೂ ಅಪಾರ ಅನುಭವ ಮತ್ತು ಪ್ರೀತಿ ಹೊಂದಿದ್ದರು.ಯುವಕರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಮನೋಧರ್ಮ ಇವರದಾಗಿತ್ತು.ತಮ್ಮ ಇಳಿ ವಯಸ್ಸಿನಲ್ಲೂ ತಮ್ಮೂರು ಕಲ್ಮಡ್ಕದ ಶಾಲೆಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದಲ್ಲಿ ಹಾಜರಿದ್ದು ಮಕ್ಕಳಲ್ಲಿ ಮತ್ತು ಸಭಿಕರಲ್ಲಿ ದೇಶಪ್ರೇಮದ ಜಾಗೃತಿ ಮೂಡಿಸುತ್ತಿದ್ದರು. ಧಾರ್ಮಿಕವಾಗಿ ನೋಡಿದರೆ ಇವರು ಹವ್ಯಕ ಸಮುದಾಯದ ಪರಂಪರಾಗತ ಗುರಿಕ್ಕಾರರು. ಗುರಿಕ್ಕಾರರಾಗಿ ನಿಖರವಾದ ವಿಚಾರಗಳನ್ನು ಮಂಡಿಸಿ ಸಂಪ್ರದಾಯಗಳನ್ನು ಅನುಸರಿಸಿ ಪಾಲಿಸಿ ತಮ್ಮೊಡನೆ ಸಮಾಜವನ್ನು ಕೊಂಡೊಯ್ಯುತ್ತಿದ್ದರು. ಇಂತಹ ವಿಶಿಷ್ಟ ಚೇತನ ಇಂದು ಲೌಕಿಕವಾಗಿ ಮರೆಯಾದರೂ ಅವರ ನಡೆ ನುಡಿ,ಪ್ರೀತಿಯ ಸೆಲೆಗಳು ಸದಾ ಚಿರಾಯು.

ಕವಿ ಗೋಪಾಲಕೃಷ್ಣ ಅಡಿಗರ ಕವಿತೆ……

“ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ
ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ.
ಬೂದಿ ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ ಧನ್ಯವಾಯಿತು
ಹುಟ್ಟು ಸಾವಿನಲ್ಲಿ……….”

….. ಎಂಬಂತೆ ಅವರೆರೆದ ಅಕ್ಷರ ಸಾರ ಸದಾ ಜ್ಞಾನದ ಪೈರಾಗಿ ಅಮರವಾಗಿ ಜಗವ ಬೆಳಗೀತು,ಸುಜ್ಞಾನ ಸೇತುವಾಗಿ ಮತ್ತೊಮ್ಮೆ ಉದಿಸಿ ಬನ್ನೀ ……

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ದೇಶಾದ್ಯಂತ 9.25 ಕೋಟಿ ರೈತ ಐಡಿ ನಿರ್ಮಾಣ | ರಸಗೊಬ್ಬರ ಬ್ಲಾಕ್‌ ಮಾರ್ಕೆಟ್‌ ವಿರುದ್ಧ ಕಟ್ಟುನಿಟ್ಟಾಗಿ ಕ್ರಮಕ್ಕೆ ಕೇಂದ್ರ ಕೃಷಿ ಸಚಿವರ ಸೂಚನೆ
April 4, 2026
7:34 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ
April 3, 2026
9:24 PM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!
April 3, 2026
4:02 PM
by: ಸಾಯಿಶೇಖರ್ ಕರಿಕಳ
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ – ಅರ್ಜಿ ಆಹ್ವಾನ
April 3, 2026
3:55 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror