ಕನ್ನಡಿ

October 15, 2019
2:00 PM
ಒಡೆದು ಹೋದ ಕನ್ನಡಿಗೆ
ಮನೆಯಲ್ಲಿ ಜಾಗವಿಲ್ಲ..
ಇದಕ್ಕೆ ಅವರದು ನೂರಾರು ಕಾರಣಗಳು…
ಅದೇಷ್ಟೋ ಸಲ ಒಡೆದ
ನನ್ನ ಮನಸ್ಸು ಕಂಡು ಅದು ದುಃಖಿಸಿತು….
ನನ್ನ ನಗುವಿಗೆ ಅದು ಜೊತೆಯಾಗಿತ್ತು
ನಲ್ಲನ ಸವಿನೆನಪಲ್ಲಿ ಮೈಮರೆತಾಗ
ಅದು ನಾಚುತ್ತಿತ್ತು……
ಆದರೆ ನಾನೇಕೆ ಹೀಗೆ…..?
ಸಣ್ಣ ಒಡಕು ಮೂಡಿತೆಂದು
ತಿಪ್ಪೆ ಗುಂಡಿಗೆ ಎಸೆದು ಬಿಟ್ಟೆ….
ನನ್ನ ಕಣ್ಣೀರ ಕಂಡು ಅದೆಂದೂ
ನಗಲಿಲ್ಲ..!
ಸೋತು ನಿಂತಾಗ ಹೀಯಾಳಿಸಲಿಲ್ಲ
ನಿಜ….!
ಅದು ನನ್ನ ಪಾಲಿಗೆ,
ವಾಸ್ತವತೆಯ ತಿಳಿಸುವ ಗುರು,
ಸಂಭ್ರಮಕ್ಕೆ ಜೊತೆಯಾಗುವ ಸ್ನೇಹ,
ಕಣ್ಣೀರ ಒರೆಸುವ ಜೊತೆಗಾರ
ಎಲ್ಲವೂ ಆಗಿತ್ತು…..
ಆದರೆ ಇಂದೇಕೆ ಹೀಗೆ..?
ಜೋಪಾನ ಮಾಡಿದ ಕೈಗಳೇ ಜಾರಿದೆ.
ಕನ್ನಡಿ ಚೂರಾಗಿದೆ ಒಡೆದ ನನ್ನ ಮನಸ್ಸಂತೆ !
ನನ್ನ ಮನಸ್ಸಿನ ಗಾಯಕ್ಕೆ
ಪ್ರೀತಿಯ ಮುಲಾಮು ಸಿಗಬಹುದು…
ಆದರೆ ಒಡೆದು ಚೂರಾದ ಕನ್ನಡಿಗೆ..?
ತಿಪ್ಪೆ ಗುಂಡಿಯೇ ಕೊನೆಯೇ..?
       ಅಪೂರ್ವ ಕೊಲ್ಯ
Advertisement

Advertisement
Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಅಮ್ಮನ ಪ್ರೀತಿಗೆ ಎಣೆಯುಂಟೇ?
June 26, 2025
9:29 PM
by: ಡಾ.ಚಂದ್ರಶೇಖರ ದಾಮ್ಲೆ
ಅಡಿಕೆ ಮಾರಾಟದ ದಾರಿಗಳು ಯಾವುದೆಲ್ಲಾ…?
June 26, 2025
6:48 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ | ಕೃಷಿಕರಿಗೆ ಹೇಗೆ ಪ್ರಯೋಜನವಾಗುತ್ತಿದೆ…?
June 26, 2025
6:31 AM
by: ರಮೇಶ್‌ ದೇಲಂಪಾಡಿ
ಹೊಸರುಚಿ | ಬ್ರೇಡ್ ಪಿಜ್ಜಾ
June 25, 2025
8:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group