ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತು ಪೌಳಿ ನವೀಕರಣ: ಹಿತ್ತಾಳೆಯ ದೀಪದಳಿ, ತಾಮ್ರದ ಛಾವಣಿ ನಿರ್ಮಾಣ

June 2, 2019
2:00 PM

ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತು ಪೌಳಿಯನ್ನು ರೂ.14 ಕೋಟಿ ವೆಚ್ಚದಲ್ಲಿ ನವೀಕರಣಗೊಳ್ಳಲಿದೆ. ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಈ ಹಿಂದಿನಂತೆ ಸುತ್ತುಪೌಳಿಯು ನೂತನವಾಗಿ ನಿರ್ಮಾಣಗೊಳ್ಳಲಿದೆ.

Advertisement
Advertisement
Advertisement

ಕುಕ್ಕೆ ದೇವಳದ ನಿಧಿಯ ರೂ.14ಕೋಟಿ ವೆಚ್ಚದಲ್ಲಿ ಸುತ್ತುಪೌಳಿ ರಚಿತವಾಗಲಿದ್ದು  ಸುತ್ತುಪೌಳಿ, ಗರುಡ ಮಂಟಪ, ಪಲ್ಲ ಮಂಟಪ, ಗೋಡೆ, ಪಂಚಾಂಗ ಇತ್ಯಾದಿಗಳನ್ನು ನೂತನವಾಗಿ ರಚನೆ ಮಾಡಲಾಗುವುದು. ಕ್ಷೇತ್ರ ಸಂಪ್ರದಾಯ, ನಿಯಮ, ಧಾರ್ಮಿಕ ವಿಧಿ ವಿಧಾನಗಳಿಗೆ ತೊಂದರೆಯಾಗದಂತೆ ಶ್ರೀ ದೇವಳದ ಪ್ರಧಾನ ಅರ್ಚಕರು ಮತ್ತು ವಾಸ್ತುಶಿಲ್ಪಿಗಳು, ಆಗಮ ಪಂಡಿತರು ಸಲಹೆ ಮೇರೆಗೆ ಕಾಮಗಾರಿ ಆರಂಭಿಸಲಾಗುವುದು. ಶಿಲ್ಪಿ ದಿನೇಶ್ ಆಚಾರ್ಯ ಅವರು ತಯಾರಿಸಿದ ಅಂದಾಜು ಪಟ್ಟಿ ಪ್ರಕಾರ ನೀಲನಕ್ಷೆ ಪ್ರಕಾರವಾಗಿ ಕಾಮಗಾರಿ ನೆರವೇರಲಿದೆ.

Advertisement

ಹಿತ್ತಾಳೆಯ ದೀಪದಳಿ:
ಸುತ್ತುಪೌಳಿ, ಗರುಡ ಮಂಟಪ, ಪಲ್ಲ ಮಂಟಪ, ಗೋಡೆ, ಪಂಚಾಂಗ ಇತ್ಯಾದಿಗಳನ್ನು ಕನ್ಯಾಕುಮಾರಿಯ ಕಪ್ಪು ಕಲ್ಲಿನಿಂದ ನಿರ್ಮಾಣ ಮಾಡಲಾಗುವುದು.ಸುತ್ತು ಪೌಳಿಯ ಸುತ್ತಲೂ ಮರದ ಕೆತ್ತನೆಗಳ ವಿಶೇಷ ಅಲಂಕಾರ ಮಾಡಲಾಗುವುದು. ಸುತ್ತಲೂ ದೀಪದಳಿಯನ್ನು ತೇಗದ ಮರದಿಂದ ನಿರ್ಮಿಸಲಾಗುವುದು.ಈ ದೀಪ ದಳಿಗಳು ವಿಶೇಷ ಕಲಾಕೆತ್ತನೆಗಳಿಂದ ಕೂಡಿರುತ್ತದೆ.ಇದಕ್ಕೆ ಹಿತ್ತಾಳೆಯ ಹೊದಿಕೆ ಇರುತ್ತದೆ. ದೀಪದಳಿಯಲ್ಲಿ ಶ್ರೀ ದೇವರ ಉತ್ಸವದ ಸಂದರ್ಭ ಹಣತೆಗಳನ್ನು ಉರಿಸಲು ಬೇಕಾದ ಸೂಕ್ತ ವ್ಯವಸ್ಥೆ ಮಾಡಲಾಗುವುದು.ಎಣ್ಣೆ ಇತ್ಯಾದಿಗಳು ಹೊರಗಡೆ ಚೆಲ್ಲದಂತೆ ಆಧುನಿಕ ತಂತ್ರಜ್ಞಾನದ ಮೂಲಕ ಸೂಕ್ತ ವ್ಯವಸ್ಥೆಯನ್ನು ಮಾಡಲಾಗುವುದು.

ತಾಮ್ರದ ಹೊದಿಕೆಯ ಛಾವಣಿ:

Advertisement

ಸುತ್ತು ಪೌಳಿಯ ಸುತ್ತಲೂ ಸಾಗುವಾನಿ ಮರವನ್ನು ಉಪಯೋಗಿಸಿಕೊಂಡು ಛಾವಣೆ ನಿರ್ಮಿಸಲಾಗುವುದು.ಇದರ ಸುತ್ತಲೂ 22 ಗೇಜಿನ ತಾಮ್ರದ ಹಾಳೆಗಳನ್ನು ಅಳವಡಿಸಲಾಗುವುದು.ಇದರಲ್ಲಿ ಕೂಡಾ ಆರ್ಷಕ ಕೆತ್ತನೆಗಳನ್ನು ಮಾಡಲಾಗುತ್ತಿದೆ. ಒಟ್ಟು 1167 ಚದರ ಮೀಟರ್ ತಾಮ್ರದ ತಗಡನ್ನು ಉಪಯೋಗಿಸಿಕೊಂಡು ಸುತ್ತುಪೌಳಿಯ ಛಾವಣಿಯನ್ನು ಆಕರ್ಷಕವಾಗಿ ನಿರ್ಮಿಸಲಾಗುವುದು. ಸುತ್ತುಪೌಳಿಗೆ ಎಲ್‍ಇಡಿ ಲೈಟ್‍ಗಳನ್ನು ಅಲ್ಲಲ್ಲಿ ಇರಲಿದೆ. ಕಾಮಗಾರಿಯ ಸಮಯದಲ್ಲಿ ಭಕ್ತರಿಗೆ ಶ್ರೀ ದೇವರ ದರುಶನಕ್ಕೆ ಯಾವುದೇ ತೊಂದರೆಯಾಗದಂತೆ ಸೂಕ್ತವಾದ ಬ್ಯಾರಿಕೇಡ್ ಇತ್ಯಾದಿಗಳನ್ನು ತಾತ್ಕಾಲಿಕವಾಗಿ ರಚನೆ ಮಾಡಲಾಗುವುದು.

 

Advertisement

“ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತು ಪೌಳಿಯನ್ನು ರೂ.14 ಕೋಟಿ ವೆಚ್ಚದಲ್ಲಿ ನವೀಕರಿಸಲಾಗುವುದು.ಸಂಪ್ರದಾಯದ ಪ್ರಕಾರ ಈ ಹಿಂದಿನಂತೆ ಸುತ್ತುಪೌಳಿಯು ನೂತನವಾಗಿ ನಿರ್ಮಾಣಗೊಳ್ಳಲಿದೆ. ಕುಕ್ಕೆ ದೇವಳದ ನಿಧಿಯನ್ನು ಉಪಯೋಗಿಸಿಕೊಂಡು ರೂ.14ಕೋಟಿ ವೆಚ್ಚದಲ್ಲಿ ಸುತ್ತುಪೌಳಿ ನಿರ್ಮಾಣಗೊಳ್ಳಲಿದೆ. ಸುತ್ತುಪೌಳಿ, ಗರುಡ ಮಂಟಪ, ಪಲ್ಲ ಮಂಟಪ, ಗೋಡೆ, ಪಂಚಾಂಗ ಇತ್ಯಾದಿಗಳನ್ನು ನೂತನವಾಗಿ ರಚನೆ ಮಾಡಲಾಗುವುದು. ಕಾಮಗಾರಿಯ ಸಮಯದಲ್ಲಿ ಭಕ್ತರಿಗೆ ಶ್ರೀ ದೇವರ ದರುಶನಕ್ಕೆ ಯಾವುದೇ ತೊಂದರೆಯಾಗದಂತೆ ಸೂಕ್ತವಾದ ಬ್ಯಾರಿಕೇಡ್ ಇತ್ಯಾದಿಗಳನ್ನು ತಾತ್ಕಾಲಿಕವಾಗಿ ರಚನೆ ಮಾಡಲಾಗುವುದು”  ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದ್ದಾರೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ಪ್ರಸ್ತಾಪ | ಗ್ಯಾರಂಟಿಗಳಿಂದ ಬಂದ ಮರ್ಯಾದಿ ಮದ್ಯದಂಗಡಿ ಪರವಾನಿಗೆ ಮೂಲಕ ಕಳೆದುಕೊಳ್ಳದಿರಿ | ಸರ್ಕಾರಕ್ಕೆ ಮಹಿಳಾ ಸಂಘಟನೆಗಳ ಮನವಿ
October 2, 2023
6:37 PM
by: The Rural Mirror ಸುದ್ದಿಜಾಲ
#SwachhBharat | ತಿಪ್ಪೆಕಾಳಿ ರಂಗನಾಥ್ ನೈಜ ಸ್ವಚ್ಛತಾ ಸೇನಾನಿ | ಗಾಂಧಿಯ ಕನಸು ನನಸು ಮಾಡಲು ಟೊಂಕಕಟ್ಟಿ ನಿಂತ ವ್ಯಾಪಾರಿ |
October 2, 2023
6:08 PM
by: The Rural Mirror ಸುದ್ದಿಜಾಲ
ಮತ್ತೆ ಚುರುಕುಗೊಂಡ ಮುಂಗಾರು | ಮಲೆನಾಡು ಕರಾವಳಿಯಲ್ಲಿ ಭಾರೀ ಮಳೆ | ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಉರುಳಿದ ಮರಗಳು, ಟ್ರಾಫಿಕ್ ಜಾಮ್​​ |
September 30, 2023
8:13 PM
by: The Rural Mirror ಸುದ್ದಿಜಾಲ
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಸಲಹಾ ಸಮಿತಿ | ಸಾಧುಕೋಕಿಲ, ಪುರುಷೋತ್ತಮ ಬಿಳಿಮಲೆ ಸಹಿತ ಹಲವು ಮಂದಿ ಸದಸ್ಯರ ಆಯ್ಕೆ |
September 30, 2023
7:39 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror