ಜೀವರಕ್ಷಕ ಔಷಧಿ ಮನೆಗೆ ತಲುಪಿಸಿದ ಅಟೋ ಚಾಲಕ | ಲಾಕ್ಡೌನ್ ಒತ್ತಡದಲ್ಲಿ ಅಟೋ ಚಾಲಕನ “ಪ್ರಾಮಾಣಿಕ” ಸೇವೆ|

April 13, 2020
2:26 PM

ಮಂಗಳೂರು: ಪ್ರಾಮಾಣಿಕತೆ ಎನ್ನುವುದು  ಮನುಷ್ಯನ ಹುಟ್ಟಿನಲ್ಲೇ ಬರಬೇಕಾದ ಗುಣ. ಈಚೆಗೆ ಪ್ರಾಮಾಣಿಕತೆಯೂ ಸುದ್ದಿಯಾಗುತ್ತದೆ. ಆದರೆ ಇದು ಹಾಗಲ್ಲ, ಲಾಕ್ಡೌನ್ ನಡುವೆ, ಎಲ್ಲಾ ಒತ್ತಡದ ನಡುವೆ ತನ್ನ ಅಟೋದಲ್ಲಿ  ಪ್ರಯಾಣಿಸಿದ ಪ್ರಯಾಣಿಕನ ಜೀವರಕ್ಷಕ ಔಷಧಿ ಮನೆಗೆ ತಲುಪಿಸಿದ ಪ್ರಾಮಾಣಿಕ ಸೇವೆ. ಇದು ನಡೆದದ್ದು ಮೂಡಬಿದರೆಯಲ್ಲಿ.

Advertisement

ವ್ಯಕ್ತಿಯೋರ್ವರು ತಮ್ಮ ಔಷಧಿ ಹಾಗೂ ವೈದ್ಯಕೀಯ ದಾಖಲೆಗಳನ್ನು ಮನೆಗೆ ಹೋಗುವ ತುರಾತುರಿಯಲ್ಲಿ ರಿಕ್ಷಾದಲ್ಲೇ ಬಿಟ್ಟು ಹೋಗಿದ್ದು, ಇದನ್ನು ನಂತರ ಗಮನಿಸಿದ ಚಾಲಕ ವೈದ್ಯಕೀಯ ದಾಖಲೆಗಳನ್ನು ಹಿಂತಿರುಗಿಸಿದ್ದಾರೆ. ಇತ್ತೀಚೆಗೆ ಆಂಜಿಯೋಪ್ಲಾಸ್ಟಿ ಆದ ವ್ಯಕ್ತಿ ತಮ್ಮ ಔಷಧಿ ಹಾಗೂ ವೈದ್ಯಕೀಯ ದಾಖಲೆಗಳನ್ನು ರಿಕ್ಷಾದಲ್ಲಿ ಮರೆತು ಹೋಗಿದ್ದರು. ಈ ಔಷಧಿಗಳು ಜೀವರಕ್ಷಕ ಔಷಧಿಯಾಗಿದ್ದು  ಲಾಕ್ಡೌನ್ ನಡುವೆ  ಪರಿಶ್ರಮದಿಂದ ರೋಗಿಯು ಖರೀದಿ ಮಾಡಿ ಅವಸರದಲ್ಲಿ ಮನೆಗೆ ಹೋಗುವ ಸಂದರ್ಭ ರಿಕ್ಷಾದಲ್ಲೇ ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ರಿಕ್ಷಾ ಚಾಲಕ ಯೂಸುಫ್ ಕೂಡಲೇ ಅದರಲ್ಲಿ ನಮೂದಿಸಿದ ವೈದ್ಯರ ಮೊಬೈಲಿಗೆ(ಡಾ.ಪದ್ಮನಾಭ ಕಾಮತ್) ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ವಿಷಯವನ್ನು ತಿಳಿದ ಕೂಡಲೇ  ಆಸ್ಪತ್ರೆಯ ಹೌಸ್ ಕೀಪಿಂಗ್ ಸಹಾಯಕಿ ಭಾರತಿ ಅವರು ತಕ್ಷಣ ರೋಗಿಯ ಮೊಬೈಲ್ ನಂಬರನ್ನು ದಾಖಲೆಯಿಂದ ಪರಿಶೀಲಿಸಿ ಎರಡೂ ಪಂಗಡದವರಿಗೆ ತಿಳಿಸಿರುತ್ತಾರೆ .  ಅಟೋ ಚಾಲಕ ಯೂಸುಫ್ ಅವರು ರೋಗಿಯ ಮೊಬೈಲ್ ನಂಬರ್ ಪಡೆದುಕೊಂಡು ಅವರ ವಿಳಾಸಕ್ಕೆ ವೈದ್ಯಕೀಯ ದಾಖಲೆಗಳನ್ನು ಹಿಂತಿರುಗಿಸಿ ಪ್ರಾಮಾಣಿಕ ಸೇವೆ ಮಾಡಿದ್ದಾರೆ.

 

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 22-04-2026 | ಎ.25ರಿಂದ ಮತ್ತೆ ಮಳೆ – ಯಾವ ಭಾಗಕ್ಕೆ ಏನು ಮುನ್ಸೂಚನೆ?
April 22, 2026
2:27 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-04-2026 | ಕರಾವಳಿ-ಮಲೆನಾಡಿನಲ್ಲಿ ಮಳೆ ಜೋರಾಗಲಿದೆ, ಉತ್ತರ ಒಳನಾಡಿಗೂ ಗುಡುಗು ಮಳೆ..!
April 21, 2026
3:17 PM
by: ಸಾಯಿಶೇಖರ್ ಕರಿಕಳ
ವಿದ್ಯುತ್ ದರ ಶಾಕ್..! ಸಣ್ಣ ಕೈಗಾರಿಕೆಗಳಿಗೆ ಭಾರೀ ಹೊರೆ – ಉಮಾ ರೆಡ್ಡಿ ಎಚ್ಚರಿಕೆ
April 21, 2026
7:35 AM
by: ಮಿರರ್‌ ಡೆಸ್ಕ್
ಮುಳಬಾಗಿಲಿನಲ್ಲಿ ಹೋಟೆಲ್ ಮೇಲೆ ದಾಳಿ : 30 ಲೀಟರ್ ಹಳೆಯ ತುಪ್ಪ ಜಪ್ತಿ, ದಂಡ
April 21, 2026
7:31 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror