ನಗರ ಪಂಚಾಯತ್ ಚುನಾವಣೆ : ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಕ್ರ‌ಮ

May 11, 2019
1:14 PM
Advertisement

ಸುಳ್ಯ: ನಗರ ಪಂಚಾಯತ್ ಚುನಾವಣೆಗೆ ಸಂಬಂಧಿಸಿ ಚುನಾವಣಾ ನೀತಿ ಸಂಹಿತೆ ಮೆ.31 ರವರೆಗೆ ಜಾರಿಯಲ್ಲಿದ್ದು ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಕಟ್ಟು ನಿಟ್ಟಿನ ಕ್ರ‌ಮ ಕೈಗೊಳ್ಳಲಾಗುವುದು ಎಂದು ಸುಳ್ಯ ನಗರ ಪಂಚಾಯತ್ ಚುನಾವಣಾಧಿಕಾರಿಗಳಾದ ದೇವರಾಜ್ ಮುತ್ಲಾಜೆ ಮತ್ತು ಎನ್.ಮಂಜುನಾಥ್ ತಿಳಿಸಿದ್ದಾರೆ.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ.29ರಂದು ಚುನಾವಣೆ ಮತ್ತು 31ರಂದು ಮತ ಎಣಿಕೆ ನಡೆಯಲಿದೆ. ಪ್ರತಿ ಅಭ್ಯರ್ಥಿಗೆ ಖರ್ಚಿನ ಮಿತಿ ಒಂದು ಲಕ್ಷ ರೂ ಮಿತಿಗೊಳಿಸಲಾಗಿದೆ. ಪ್ರತಿ ದಿನ ಖರ್ಚಿನ ವಿವರಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಸಾರ್ವಜನಿಕ ಕಾರ್ಯಕ್ರಮಗಳಿಗೆ, ಅಭ್ಯರ್ಥಿಯ ಭಾವಚಿತ್ತ, ಬ್ಯಾನರ್ ಅಳವಡಿಕೆಗೆ ಖಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು ಎಂದು ವಿವರಿಸಿದರು. ಇತರ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಚಟುವಟಿಕೆಗೆ, ಚುನಾವಣಾ ಪ್ರಚಾರಕ್ಕೆ ಅವಕಾಶ ಇಲ್ಲ ಎಂದರು.

Advertisement
Advertisement

ಮತದಾನ ಬೆಳಗ್ಗೆ  7 ರಿಂದ ಸಂಜೆ 5 :

ನಗರ ಪಂಚಾಯತ್ ಚುನಾವಣೆಗೆ ಇವಿಎಂ ಬಳಕೆ ಮಾಡಲಾಗುವುದು. ಆದರೆ ವಿವಿ ಪ್ಯಾಟ್ ಬಳಕೆ ಮಾಡುವುದಿಲ್ಲ. ಬೆಳಿಗ್ಗೆ ಏಳರಿಂದ ಸಂಜೆ ಐದರ ವರೆಗೆ ಚುನಾವಣೆ ನಡೆಯಲಿದೆ. 20 ವಾರ್ಡ್ ಗಳಲ್ಲಿ 20 ಮತಗಟ್ಟೆ ಗಳನ್ನು ಸಿದ್ಧಪಡಿಸಲಾಗಿದೆ. 27 ಇವಿಎಂಗಳನ್ನು ಸಿದ್ಧಪಡಿಸಲಾಗಿದೆ. ಮತಯಂತ್ರದಲ್ಲಿ ಅಭ್ಯರ್ಥಿಯ ಹೆಸರು, ಭಾವಚಿತ್ರ ಮತ್ತು ಚಿಹ್ನೆ ಇರಲಿದೆ. ನೋಟಾ ಕೂಡ ಇರಲಿದೆ ಎಂದರು.

Advertisement

ನಾಮಪತ್ರ-16 ಕೊನೆ ದಿನ :

ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೆ.16 ಕೊನೆಯ ದಿನವಾಗಿದೆ. ಮೊದಲ ಎರಡು ದಿನ ಯಾವುದೇ ನಾಮಪತ್ತ ಸಲ್ಲಿಕೆಯಾಗಿಲ್ಲ. 87 ಮಂದಿ ಅರ್ಜಿಗಳನ್ನು ಪಡೆದಿದ್ದಾರೆ. ಮೆ.17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮೆ.20 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಎಂದು ಅವರು ವಿವರಿಸಿದರು. ನೀತಿ ಸಂಹಿತೆ ಸಂಬಂಧಿಸಿ ಯಾವುದೇ ದೂರು ಬಂದಿಲ್ಲ ಎಂದರು.

Advertisement

ಸುದ್ದಿಗೋಷ್ಠಿಯಲ್ಲಿ ಸಹಾಯಕ ಚುನಾವಣಾಧಿಕಾರಿ ರವಿಚಂದ್ರ, ಸೆಕ್ಟರ್ ಅಧಿಕಾರಿ ಸತೀಶ್ ಕೊಯಿಂಗಾಜೆ ಉಪಸ್ಥಿತರಿದ್ದರು

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಇಂದು ರಾಷ್ಟ್ರೀಯ ಪಕ್ಷಿ ದಿನ ಹಾಗೂ ಪಕ್ಷಿತಜ್ಞ ಸಲೀಂ ಅಲಿ ಯವರ ಜನ್ಮದಿನ
November 12, 2023
3:09 PM
by: The Rural Mirror ಸುದ್ದಿಜಾಲ
#NalinKumarKateel | ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ – ನಳಿನ್‌ ಕುಮಾರ್‌ ಸ್ಪಷ್ಟನೆ | ಸೋಲಿನ ಕಾರಣಗಳನ್ನು ಹಿರಿಯರಿಗೆ ಹೇಳಿದ್ದೇನೆ |
June 24, 2023
1:16 PM
by: ದ ರೂರಲ್ ಮಿರರ್.ಕಾಂ
ಇನ್ನೂ ಬಾರದ ವರುಣ | ಮಳೆಗಾಗಿ ನಾಳೆ KRSನಲ್ಲಿ ವಿಶೇಷ ಹೋಮ | ವರುಣನ ಕೃಪೆಗೆ ಕಾದು ಕುಳಿತ ರೈತ |
June 12, 2023
11:29 AM
by: The Rural Mirror ಸುದ್ದಿಜಾಲ
ವೆದರ್‌ ಮಿರರ್‌ | 07-06-2023 | ವಿವಿದೆಡೆ ತುಂತುರು ಮಳೆ | ಜೂ.13 ಚಂಡಮಾರುತ ಪ್ರಭಾವದ ಬಳಿಕವೇ ಮುಂಗಾರು ಚುರುಕು |
June 7, 2023
11:14 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror