ನೀರಿಗಾಗಿ ಗ್ರಾಮಸ್ಥರೇ ಇಳಿದು ಕೆಲಸ ಮಾಡಿದರು..!

June 4, 2019
1:00 PM

ಗುತ್ತಿಗಾರು: ನೀರಿಲ್ಲ ಎಂದು ಗ್ರಾಮ ಪಂಚಾಯತ್ ಬರಬೇಕು ಎಂದು ಕಾಯಲಿಲ್ಲ. ಪಂಚಾಯತ್ ನಲ್ಲಿ ವ್ಯವಸ್ಥೆ ಏನಿದು ಎಂದು ಕೇಳಿದರು, ತಾವೇ ಕೆಲಸಕ್ಕೆ ಮುಂದಾದರು ಹೀಗೆ ಮಾದರಿಯಾದ್ದು  ಗುತ್ತಿಗಾರು ಗ್ರಾಮದ ಕಮಿಲದ ಯುವಕರು.

Advertisement
Advertisement
Advertisement

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲದಲ್ಲಿ  ಸುಮಾರು 10 ರಿಂದ 15 ಮನೆಗಳಿಗೆ ಬೇಸಗೆಯಲ್ಲಿ  ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ. ಈಗಲ್ಲ ಕಳೆದ ಕೆಲವು ವರ್ಷಗಳಿಂದ ಈ ಸಮಸ್ಯೆ ಇದೆ. ಇದಕ್ಕಾಗಿ  ಪಂಚಾಯತ್ ವತಿಯಿಂದ ಕೊಳವೆಬಾವಿ ತೋಡಲಾಗಿದೆ, ದುರದೃಷ್ಟವಶಾತ್ ಅದರಲ್ಲಿ ಸರಿಯಾಗಿ ನೀರಿಲ್ಲ. ಹೀಗಾಗಿ ಸಮೀಪದಲ್ಲೇ ಇರುವ ಹೊಳೆಗೆ ಒಪನ್ ವೆಲ್ ನಿರ್ಮಾಣ ಮಾಡಿ ಪಂಪ್ ಸಂಪರ್ಕವೂ ಆಗಿದೆ. ಎತ್ತರದಲ್ಲಿ ನೀರಿನ ಟ್ಯಾಂಕ್ ಕೂಡಾ ಇದೆ. ಆದರೆ ಹೊಳೆಯಲ್ಲೂ ನೀರಿನ ಮಟ್ಟ ಇಳಿದಿದೆ. ಹೀಗಾಗಿ ಈಗ ನೀರಿಲ್ಲ. ಕೆಲವು ಮನೆಯವರು ದೂರದಿಂದ ನೀರು ಹೊತ್ತು ತರುತ್ತಾರೆ. ಕೆಲವು ಬಾರಿ ಸಂಬಂಧಿತರ ಗಮನಕ್ಕೆ ತಂದರು. ಆದರೆ ಆಗಲಿಲ್ಲ.  ಕೆಲವು ವರ್ಷಗಳಿಂದ ಇರುವ ಈ ಸಮಸ್ಯೆಯನ್ನು ಯಾರ ಬಳಿ ಹೇಳುವುದು  ಎನ್ನುವುದು  ತಿಳಿಯದೇ ಮುಗ್ದ ಜನರು ನೀರು ಹೊರುತ್ತಲೇ ಇದ್ದರು.

Advertisement

 

Advertisement

ಹೀಗಾಗಿ ಸ್ಥಳೀಯ ಯುವಕರು ಕೆಲಸಕ್ಕೆ ಮುಂದಾದರು. ಈ ಸಂದರ್ಭ ಸ್ಥಳಿಯ ಪಂಚಾಯತ್ ಸದಸ್ಯ ರಘುವೀರ್ ಜೊತೆ ಮಾತನಾಡಿದರು. ನೀರಿನ ಸಮಸ್ಯೆ ಬಗ್ಗೆ ಮಾತನಾಡಿದರು. ತಕ್ಷಣವೇ ಗ್ರಾಮ ಪಂಚಾಯತ್ ಸಿಬಂದಿಗಳ ಜೊತೆಗೂ ಮಾತನಾಡಿ, ನಾವೇ ಕೆಲಸ ಮಾಡುತ್ತೇವೆ, ಅನುದಾನಗಳು ಇದ್ದರೆ ಕೊಡಿ, ಕೆಲಸ ಮಾಡಿಸುತ್ತೇವೆ ಎಂದರು. ಅದರ ಜೊತೆಗೇ ಕೆಲಸವೂ ಶುರು ಮಾಡಿದರು. ನಂತರ ಪಂಚಾಯತ್ ಪಿಡಿಒ ಸ್ಥಳಕ್ಕೆ ಆಗಮಿಸಿದರು. ಗ್ರಾಪಂ ಸದಸ್ಯ ರಘುವೀರ್ ಜೊತೆಗಿದ್ದರು. ಜೊತೆಗೆ ಸ್ಥಳೀಯ ಗ್ರಾಪಂ ಸದಸ್ಯ  ಜಯಪ್ರಕಾಶ್ ಮೊಗ್ರ ಅವರೂ ಬಂದರು.

 

Advertisement

 

Advertisement

ಯುವಕರ ತಂಡ ಕೆಲಸ ಮಾಡಿತು. ಅನುದಾನಗಳನ್ನು ನೀಡುವ ಭರವಸೆಯನ್ನು ಎಲ್ಲಾ ಪಂಚಾಯತ್ ಸದಸ್ಯರು ನೀಡಿದರು, ಪಿಡಿಒ ಅವರೂ ಅನುದಾನ ಒದಗಿಸುವ ಭರವಸೆ ನೀಡಿದರು.

 

Advertisement

 

Advertisement

ಒಂದು ಊರಿನ ಅಭಿವೃದ್ಧಿ ಹಾಗೂ ಜನರ ಸಮಸ್ಯೆ ನಿವಾರಣೆಗೆ ಯುವಕರೇ ರಚನಾತ್ಮಕವಾಗಿ ಕೆಲಸ ಮಾಡಿದರೆ ಹೇಗೆ ಕಾರ್ಯಗಳು ನಡೆಯುತ್ತದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಎಲ್ಲದಕ್ಕೂ ರಾಜಕೀಯ ಬೆರೆಸುವುದು ಹಾಗೂ ಯಾರೋ ಇಂತಹ  ಒಳ್ಳೆಯ ಕಾರ್ಯದ ಮೈಲೇಜ್ ಪಡೆಯುತ್ತಾರೆ ಎಂದು ಹೇಳುತ್ತಾ ಕೂತರೆ ಕೆಲಸಗಳು ನಡೆಯದು. ಹೊಂಡ ಗುಂಡಿ ಇರುವ ರಸ್ತೆ, ನೀರಿಲ್ಲದೇ ಪರದಾಡುವ ಜನರ ಸಂಖ್ಯೆ ಹೆಚ್ಚಾದೀತು. ಊರು ಅಭಿವೃದ್ಧಿಯಾಗಲು ರಾಜಕೀಯ ರಹಿತವಾದ ಇಂತಹ ರಚನಾತ್ಮಕ ಕಾರ್ಯಗಳು ಹೆಚ್ಚು ನಡೆಯಬೇಕಾಗಿದೆ. ಇದಕ್ಕಾಗಿ ಕಮಿಲದ ಯುವಕರು ಮಾದರಿಯಾಗಿದ್ದಾರೆ.

 

Advertisement

ಕಳೆದ ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಸ್ಥಳೀಯ ಮುಖಂಡರು ನೀರಿನ ಸಮಸ್ಯೆ ನಿವಾರಣೆಗೆ ಪ್ರಯತ್ನ ಮಾಡಿದ್ದಾರೆ. ಆದರೆ ಈಗ ನೀರಿಲ್ಲದೆ ಎಲ್ಲೆಲ್ಲಿಂದಲೋ ತರಬೇಕಾದ ಸ್ಥಿತಿ ಇದೆ ಎಂದು ಹೇಳುತ್ತಾರೆ ಕಮಿಲದ ನಿವಾಸಿ ವಾಡ್ಯಪ್ಪ.

 

Advertisement

 

 

Advertisement

ಕಮಿಲದ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತವಾದ ಪರಿಹಾರ ಬೇಕಾಗಿದೆ. ಕೊಳವೆಬಾವಿಯಲ್ಲಿ ನೀರಿಲ್ಲ. ಹೀಗಾಗಿ ಒಂದು ವ್ಯವಸ್ಥೆ ಬೇಕಾಗಿದೆ ಎಂದು ಹೇಳುತ್ತಾರೆ ಕಮಿಲದ ನಿತ್ಯಾನಂದ ಕಾಂತಿಲ.

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಳಗೊಂಡ ರಬ್ಬರ್‌ ಬಳಕೆ | ಬೆಳೆಗಾರರಿಗೆ ಧಾರಣೆ ಏರಿಕೆಯ ನಿರೀಕ್ಷೆ |
March 25, 2024
11:10 PM
by: ದ ರೂರಲ್ ಮಿರರ್.ಕಾಂ
ಕಾಳಸರ್ಪ ‘ಯೋಗಾಯೋಗ : ಜ್ಯೋತಿಷ್ಯ ಶಾಸ್ತ್ರ, ಮನೋವಿಜ್ಞಾನಿಗಳು ಹೇಳುವುದು ಒಂದೇ : ಭಯಪೀಡಿತರಾಗ ಬೇಡಿ
March 18, 2024
12:12 PM
by: The Rural Mirror ಸುದ್ದಿಜಾಲ
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆಯ್ಕೆ ಗೊಂದಲ | ಪಂಜ ಸೇರಿದಂತೆ ದಕ ಜಿಲ್ಲೆಯ ಮೂರು ದೇವಸ್ಥಾನಗಳ ಆಯ್ಕೆಗೆ ತಾತ್ಕಾಲಿಕ ತಡೆ |
March 17, 2024
10:43 AM
by: ದ ರೂರಲ್ ಮಿರರ್.ಕಾಂ
ಇಂದು ರಾಷ್ಟ್ರೀಯ ಪಕ್ಷಿ ದಿನ ಹಾಗೂ ಪಕ್ಷಿತಜ್ಞ ಸಲೀಂ ಅಲಿ ಯವರ ಜನ್ಮದಿನ
November 12, 2023
3:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror