ಸುಳ್ಯ: ಎಲ್ಲರೂ ಆಗಸ ದಿಟ್ಟಿಸಿ ನೋಡುತ್ತಿದ್ದಾರೆ. ಬಾನು ಕಪ್ಪಾಗಿದೆ. ಮಳೆ ಬರಲಿ… ಮಳೆ ಬರಲಿ… ಮಳೆ ಬಂದರೆ ಸಾಕು ಎನ್ನುವ ನಿರೀಕ್ಷೆ ಹೆಚ್ಚಾಗಿದೆ. ಸುಬ್ರಹ್ಮಣ್ಯ, ಮಡಿಕೇರಿ ಪ್ರದೇಶದಲ್ಲಿ ಮೋಡ ತುಂಬಿದ್ದು ಇಡೀ ಆಗಸ ಕಪ್ಪಾಗಿದೆ. ಮಳೆ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

ಸಜಿಪದಲ್ಲಿ ಸುರಿದ ಮಳೆ
ಕುಡಿಯಲೂ ನೀರಿಲ್ಲ. ತೋಟಕ್ಕೂ ನೀರಿಲ್ಲ. ಅಲ್ಲೆಲ್ಲೋ ಮಳೆ ಬಂತು ನಮ್ಮಲ್ಲಿ ಬರಲೇ ಇಲ್ಲ ಎಂಬ ಕೂಗು, ವಿಷಾದ ಹೆಚ್ಚಾಗುತ್ತಿದೆ. ಇಂದಂತೂ ಮಳೆ ಬಂದೇ ಬರುತ್ತದೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ಸುಬ್ರಹ್ಮಣ್ಯ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಹೆಚ್ಚಾಗಿದೆ. ಉತ್ತಮ ಮಳೆ ಬರುವ ಲಕ್ಷಣಗಳು ಕಾಣಿಸುತ್ತಿದೆ.
ಮಧ್ಯಾಹ್ನ ಪುತ್ತೂರು, ಸಜಿಪ ಸೇರಿದಂತೆ ವಿವಿಧ ಕಡೆ ಮಳೆ ಬಂದರೆ ನಂತರ ಉಜಿರೆ ಪ್ರದೇಶದಲ್ಲಿ ಮಳೆ ಆರಂಭವಾಗಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಬಾನು ಕಪ್ಪಾಗಿದೆ….. ಮಳೆ ಬರಲಿ ಮಳೆ….!"