ಮುಚ್ಚುವ ಭೀತಿಯಿಂದ ಪಾರಾದ ಅಚ್ರಪ್ಪಾಡಿ ಶಾಲೆಗೆ ದಾನಿಗಳಿಂದ ನೆರವು

June 5, 2019
11:30 AM

ಗುತ್ತಿಗಾರು: ಅಚ್ರಪ್ಪಾಡಿ ಕಿ.ಪ್ರಾ.ಶಾಲೆ ಕೆಲ ವರ್ಷಗಳ ಹಿಂದೆ ವಿದ್ಯಾರ್ಥಿಗಳ ಕೊರತೆ ಅನುಭವಿಸಿ ಮುಚ್ಚುವ ಹಂತಕ್ಕೆ ತಲುಪಿತ್ತು. ಇದನ್ನು ಮನಗಂಡ ಊರವರು ಶಾಲೆಯನ್ನು ಉಳಿಸಲು ಪ್ರಯತ್ನಿಸಿ 7 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಇಂದು 21 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ.

ಇದೀಗ ಶಾಲೆಗೆ ಕೊಡುಗೈ ದಾನಿಯಾಗಿರುವ ಸೀ ಫುಡ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಜಿ ಜಿ. ಇಬ್ರಾಹಿಂ ( ಉಂಬಾಯಿಚ್ಚ) ವಿದ್ಯಾರ್ಥಿಗಳಿಗೆ ಸುಮಾರು 12  ಸಾವಿರ ಮೌಲ್ಯದ ಪುಸ್ತಕ, ಬ್ಯಾಗ್,ಕೊಡೆ ಹಾಗೂ ಲೇಖನಿ ಸಾಮಾಗ್ರಿಗಳನ್ನು ಕೊಡುಗೆಗಯಾಗಿ ನೀಡಿದ್ದಾರೆ. ಇವರು ಹಲವಾರು ಶಾಲೆ , ಸಂಘಸಂಸ್ಥೆ, ಬಡವರಿಗೆ ಸಹಾಯ ಮಾಡಿ ಸೀ ಫುಡ್ ಉದ್ಯಮದ ಜತೆಗೆ ಸಾಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿ ಶ್ವೇತಾ, ಗ್ರಾ.ಪಂ.ಸದಸ್ಯ ಶಿವಪ್ರಕಾಶ್ ಅಡ್ಡನಪಾರೆ, ಹರೀಶ್ ಅಡ್ಡನಪಾರೆ, ಎಸ್.ಡಿ.ಎಂ.ಸಿ. ಸದಸ್ಯೆ ಪ್ರಶಿತಾ ಶಿವಪ್ರಕಾಶ್ ಉಪಸ್ಥಿತರಿದ್ದರು.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಂಬಾರ ಮಂಡಳಿಯ ದರ ಪಟ್ಟಿಯಲ್ಲಿ ಶಿರಸಿಯ ಕಾಳುಮೆಣಸು ನಮೂದಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ
March 13, 2025
11:10 PM
by: The Rural Mirror ಸುದ್ದಿಜಾಲ
ಹೆತ್ತವರವನ್ನು ನೋಡಿಕೊಳ್ಳದ ಮಕ್ಕಳ ದಾನಪತ್ರ ರದ್ದುಗೊಳಿಸುವ ಅವಕಾಶ ಕಾನೂನಿನಲ್ಲಿದೆ | ಸಚಿವ ಕೃಷ್ಣಭೈರೇಗೌಡ
March 13, 2025
11:05 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 13-03-2025 | ಕೆಲವು ಕಡೆ ತುಂತುರು- ಸಾಮಾನ್ಯ ಮಳೆ ಸಾಧ್ಯತೆ |
March 13, 2025
1:56 PM
by: ಸಾಯಿಶೇಖರ್ ಕರಿಕಳ
ಸೂಚನೆಯೇ ಇಲ್ಲದೆ ನಿನ್ನೆಯ ಮಳೆ ಸುರಿದದ್ದು ಹೇಗೆ..? | ಕರಾವಳಿ ಜಿಲ್ಲೆಯಲ್ಲಿ ಸುರಿದ ಬೇಸಿಗೆ ಮಳೆ ಎಷ್ಟು…? | ಮೊದಲ ಮಳೆ 100 ಮಿಮೀ ದಾಟಿತ್ತು…! |
March 13, 2025
11:58 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror