ಸುಳ್ಯ: ಸ್ವಚ್ಛ ರಾಜ ಮಾರ್ಗ ಕಲ್ಪನೆಯಡಿ ಯುವಬ್ರಿಗೇಡ್ ಸುಳ್ಯ ವತಿಯಿಂದ ರಸ್ತೆ ಬದಿ ಸ್ವಚ್ಛತಾ ಆಂದೋಲನವನ್ನು ನಡೆಸಲಾಯಿತು.
ಉಬರಡ್ಕ ಕ್ರಾಸ್ ನ ವಿಷ್ಣು ವೃತ್ತ ದಿಂದ ಪರಿವಾರ ಕಾನ ವರೆಗೆ ರಾಜ್ಯ ಹೆದ್ದಾರಿಯ ಬದಿಗಳಲ್ಲಿ ಸ್ವಚ್ಛತಾ ಆಂದೋಲನ ನಡೆಯಿತು.
ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ನ 30 ಕ್ಕೂ ಅಧಿಕ ಸದಸ್ಯರು ಭಾಗವಹಿಸಿದ್ದರು
ಮತ್ತು ಈ ಸಂದರ್ಭದಲ್ಲಿ ಪದ್ಮ ಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಮತ್ತಿತರರು ಕೈ ಜೋಡಿಸಿದ್ದರು.
ಸ್ವಚ್ಛತೆಯ ಸಮಯದಲ್ಲಿ ಪ್ಲಾಸ್ಟಿಕ್, ಕೋಳಿ ಯ ಕೊಳೆತ ತ್ಯಾಜ್ಯ, ಕೊಳೆತ ತರಕಾರಿ ಸೇರಿದಂತೆ ಮೂರು ಲೋಡ್ ತ್ಯಜ್ಯ, ಸುಮಾರು 1000 ಮದ್ಯ ದ ಬಾಟಲಿ ಗಳನ್ನು ಸಂಗ್ರಹಿಸಲಾಯಿತು. ಯುವಾ ಬ್ರಿಗೇಡ್ ಮತ್ತು ಸ್ವಚ್ಛತಾ ಆಂದೋಲನ ಸಮಿತಿಯ ಕಾರ್ಯಕರ್ತರು ಕೈ ಜೋಡಿಸಿ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕಲೆ, ಸಾಹಿತ್ಯ, ಧಾರ್ಮಿಕ, ಕೃಷಿ, ವಿಶೇಷ ಲೇಖನ , ಅಂಕಣ, ವಿಶೇಷ ವರದಿಗಳು , ರಾಜಕೀಯ ವಿಶ್ಲೇಷಣೆ, ದಿನದ ಫೋಕಸ್ ಸ್ಟೋರಿ, ದಿನದ ಚಿತ್ರ, ವಾರದ ವ್ಯಕ್ತಿ , ಜಿಲ್ಲೆ, ರಾಜ್ಯ, ರಾಷ್ಟ್ರೀಯ ಪ್ರಮುಖ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಯುವಬ್ರಿಗೇಡ್ ಸುಳ್ಯ ವತಿಯಿಂದ ಸ್ವಚ್ಛತಾ ಆಂದೋಲನ"