ಸುಳ್ಯ ಸರಕಾರಿ ಆಸ್ಪತ್ರೆ ರಸ್ತೆಯನ್ನೊಮ್ಮೆ ನೋಡಿ ಸರ್…!

August 5, 2019
4:00 PM

ಸುಳ್ಯ: ಸುಳ್ಯ ಸರಕಾರಿ ‌ತಾಲೂಕು ಆಸ್ಪತ್ರೆ ರಸ್ತೆ ಪರಿಸ್ಥಿತಿ ಇದು..!. ಸರ್ ಪ್ಲೀಸ್ ಇದನ್ನೊಮ್ಮೆ ನೋಡ್ತೀರಾ ? ಯಾವಾಗಲಾದರೊಮ್ಮೆ ಇದನ್ನೊಮ್ಮೆ ದುರಸ್ತಿ ಮಾಡಿಸ್ತೀರಾ ? ಹೀಗೆ ಪ್ರಶ್ನೆ ಕೇಳ್ತಿದಾರೆ ಜನ…!

Advertisement

ಸುಳ್ಯದ ಮುಖ್ಯ ರಸ್ತೆ ಯಿಂದ ಆಸ್ಪತ್ರೆ ಗೆ ಬರುವ ರಸ್ತೆಯನ್ನು ನೋಡಿದರೆ ಆಸ್ಪತ್ರೆಯ ಮುಂಭಾಗವೇ ಕಿತ್ತು ಹೋಗಿದೆ. 90% ಆಸ್ಪತ್ರೆ ಬರುವ ಜನಸಾಮಾನ್ಯರ ದೈಹಿಕ ಕ್ಷೀಣ ಪರಿಸ್ಥಿತಿಯಲ್ಲಿ ಈ ಇಳಿಜಾರು ಅವೈಜ್ಞಾನಿಕ ರಸ್ತೆ ಏರುವುದು ಇಳಿಯುವುದೇ ಕಠಿಣ, ಅದರ ನಡುವೆ ಕಿತ್ತು ಹೋದ ರಸ್ತೆ ಬಡಜನತೆಯ ಶಾಪಕ್ಕೆ ತುತ್ತಾಗಬೇಕಿದೆ ನಗರ ಆಡಳಿತ  ಅದಲ್ಲದೇ ಹಲವಾರು ಸಮಸ್ಯೆ ಗಳಿವೆ ತಿಳಿಸಿದರೆ ಮುಗಿಯದ ಗೋಳು . ಜನಪ್ರಿಯ ಶಾಸಕರು ಸಂಸದರು . ಅದಲ್ಲದೇ ‌ಉಸ್ತುವಾರಿಸಚಿವರು ಹಲವಾರು ಬಾರಿ ಸುಳ್ಯ ಕ್ಕೆ ಭೇಟಿ ನೀಡುವಾಗ ತಮ್ಮ ಧರ್ಮದ, ತಮ್ಮ ಪಕ್ಷದ ಕಾರ್ಯಕ್ರಮಗಳೇ ಹೆಚ್ಚಾಯಿತೇ?

ಜನಸಾಮಾನ್ಯರಿಗೆ ಉಪಯೋಗವಾಗುವ ಆಸ್ಪತ್ರೆ ತಮ್ಮ ದೃಷ್ಟಿ ಗೆ ಕಾಣದಾಯಿತೆ? ಕಣ್ಣಿದ್ದು‌‌ ಕರುಡರಾದರೇ? ರಾಷ್ಟ್ರೀಯ ಪಕ್ಷಗಳ ಸ್ವಯಂ ಘೋಷಿತ ನಾಯಕರು ಗಳೇ ತಮಗೂ ನಾಚಿಕೆ ಮಾನ ಮರ್ಯಾದೆ ಜವಾಬ್ದಾರಿ, ಕರ್ತವ್ಯ ಇಲ್ಲದಾಯಿತೆ?

ಎಷ್ಟೋ ಬಡಜನರ ದೇವಾಲಯ ಆಸ್ಪತ್ರೆ ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲಾಗದ ಈ ನಾಚಿಕೆ ಗೇಡಿನ ಸಾಂಪ್ರದಾಯಿಕ ಪಕ್ಷ ರಾಜಕೀಯ ಜನ ಸಾಮಾನ್ಯರಿಗೆ ಅಗತ್ಯವಿದೆಯೇ?

ಕಾಂಕ್ರೀಟ್ ರಸ್ತೆ ಮಾಡಿ ಶಾಶ್ವತ ಪರಿಹಾರಕ್ಕೆ ಆಸ್ಪತ್ರೆ ಭೇಟಿ ನೀಡುವ ಸುಳ್ಯದ ಬಡನತೆಯ ಕರುಳಿನ ರೋಧನವಾಗಿದೆ ಖಂಡಿತವಾಗಿಯೂ ಈ ನಿರ್ಲಕ್ಷ್ಯ, ಸಾಮಾಜಿಕ ಆರ್ಥಿಕ ಹಿಂದುಳಿದ ಜನರ ಮೇಲೆ ಶೋಷಣೆಯ ಪ್ರತೀಕವಾಗಿದೆ.

  • ದೀಕ್ಷಿತ್ ಕುಮಾರ್ ಜಯನಗರ
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 22-04-2026 | ಎ.25ರಿಂದ ಮತ್ತೆ ಮಳೆ – ಯಾವ ಭಾಗಕ್ಕೆ ಏನು ಮುನ್ಸೂಚನೆ?
April 22, 2026
2:27 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-04-2026 | ಕರಾವಳಿ-ಮಲೆನಾಡಿನಲ್ಲಿ ಮಳೆ ಜೋರಾಗಲಿದೆ, ಉತ್ತರ ಒಳನಾಡಿಗೂ ಗುಡುಗು ಮಳೆ..!
April 21, 2026
3:17 PM
by: ಸಾಯಿಶೇಖರ್ ಕರಿಕಳ
ವಿದ್ಯುತ್ ದರ ಶಾಕ್..! ಸಣ್ಣ ಕೈಗಾರಿಕೆಗಳಿಗೆ ಭಾರೀ ಹೊರೆ – ಉಮಾ ರೆಡ್ಡಿ ಎಚ್ಚರಿಕೆ
April 21, 2026
7:35 AM
by: ಮಿರರ್‌ ಡೆಸ್ಕ್
ಮುಳಬಾಗಿಲಿನಲ್ಲಿ ಹೋಟೆಲ್ ಮೇಲೆ ದಾಳಿ : 30 ಲೀಟರ್ ಹಳೆಯ ತುಪ್ಪ ಜಪ್ತಿ, ದಂಡ
April 21, 2026
7:31 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror