Advertisement
ಯಕ್ಷಗಾನ : ಮಾತು-ಮಸೆತ

ಅಂತಃಕರಣ ವೃತ್ತಿಯು ಅಧೋಮುಖಿಯಾಗಿದ್ದುದು ಊಧ್ರ್ವಮುಖಿಯಾಗಬೇಕು

Share

ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಬ್ರಹ್ಮ’
ಪ್ರಸಂಗ : ಬ್ರಹ್ಮಕಪಾಲ

(ತನಗೆ ಉದ್ಯೋಗ ನೀಡಬೇಕೆಂದು ಶಾರದೆ ಬಿನ್ನವಿಸಿಕೊಂಡಾಗ ಬ್ರಹ್ಮನು ವಿದ್ಯಾಧಿಕಾರದ ಪಟ್ಟ ನೀಡಲು ಮುಂದಾಗುತ್ತಾನೆ)

“… ವಿದ್ಯಾಧಿದೇವತೆಯ ಪಟ್ಟ ಅದು ಬುದ್ಧಿಯ ಮೇಲೆ. ವ್ಯವಸಾಯಾತ್ಮಕವಾದ ಬುದ್ಧಿಯ ಸ್ಥಾನದಲ್ಲಿ ಶಾರದೆ ಪ್ರಕಾಶಿಸುತ್ತಾಳೆ. ಯೋಗಶಾಸ್ತ್ರದ ಪ್ರಕಾರ ‘ಸಹಸ್ರಾರ’ ಎಂಬ ಸ್ಥಾನವೊಂದು ನೆತ್ತಿಯಲ್ಲಿದೆ. ಅಲ್ಲಿ ಅವಳು ವಾಸ ಮಾಡುತ್ತಾಳೆ. ಬ್ರಹ್ಮನ ಸ್ಥಾನವೂ ಕಮಲವೇ. ಶಾರದೆಯ ಸ್ಥಾನವೂ ಕಮಲವೇ. ಆದರೆ ಅದು ನಾಭೀಕಮಲ. ನಿನ್ನ (ಶಾರದೆ) ಪೀಠ ಅದಲ್ಲ. ಸಹಸ್ರಾರ ಚಕ್ರದ ಕಮಲ. ಶಾರದೆಯಾದ ನಿನಗೆ ಇದನ್ನು ಅರ್ಥೈಸಲು ಕಷ್ಟವಾಗದು.

ಈ ದೇಹೇಂದ್ರಿಯಗಳಿಗಿಂತ ಮನಸ್ಸು ಶ್ರೇಷ್ಠವಾದುದು. ಮನಸ್ಸಿಗಿಂತಲೂ ಬುದ್ಧಿ ಉತ್ಕೃಷ್ಟವಾದುದು. ಈ ದೇಹೇಂದ್ರಿಯಗಳೆಲ್ಲಾ ಮನಸ್ಸಿನಲ್ಲಿ ನೆಲೆಸಬೇಕು. ಈ ಕರ್ಮೇಂದ್ರಿಯ, ಜ್ಞಾನೇಂದ್ರಿಯಗಳು ಶಬ್ದ, ಸ್ಪರ್ಶ, ರೂಪ, ರಸ, ಗಂಧಾದಿ ವಿಷಯಗಳನ್ನು ಸವಿಯುತ್ತವೆ. ಆಮೇಲೆ ದಾಹಗೊಳ್ಳುತ್ತದೆ. ಈ ದಾಹಗೊಳ್ಳುತ್ತಿರುವ ವೃತ್ತಿ ಮನಸ್ಸಿನಲ್ಲಿ ಲೀನವಾಗಬೇಕು. ಈ ಹತ್ತು ಇಂದ್ರಿಯಗಳು ಹನ್ನೊಂದನೆಯ ಇಂದ್ರಿಯಾಧ್ಯಕ್ಷನಲ್ಲಿ ಕೇಂದ್ರೀಕೃತವಾದರೆ, ಈ ಶುದ್ಧವಾದಂತಹ ಯಾವತ್ತೂ ಏಕಾದಶೀ ಸ್ಥಾನದಿಂದ, ಈ ಎಲ್ಲಾ ಶಬ್ದ, ಸ್ಪರ್ಶ, ರೂಪ, ರಸ, ಗಂಧಾದಿಗಳನ್ನು ಅರಗಿಸಿಕೊಂಡು, ಈ ಅಂತಃಕರಣ ವೃತ್ತಿಯು ಅಧೋಮುಖಿಯಾಗಿದ್ದುದು ಊಧ್ರ್ವಮುಖಿಯಾಗಬೇಕು. ಆವಾಗ ಅದಕ್ಕೆ ‘ಚಿತ್ತ’ ಅಂತ ಹೆಸರು.
ಈ ಚಿತ್ತವೃತ್ತಿ ಎಲ್ಲಾ ವಾಸನೆಗಳನ್ನು ಕೂಡಿಸಿಕೊಂಡು ಬುದ್ಧಿಯಲ್ಲಿ ರಮಿಸಬೇಕು. ಆಗ ಅದು ಶುದ್ಧ ಅದ್ವೈತವೇ ಆಗಿಬಿಟ್ಟರೆ ಕೊನೆಗೆ ಉಳಿದದ್ದು ‘ಜ್ಞಾನ’ ಮಾತ್ರ. ಆದ್ದರಿಂದ ಇಂತಹ ‘ಜ್ಞಾನ’ ಕೊನೆಯಲ್ಲಿ ಸಹಸ್ರಾರದಲ್ಲಿದ್ದ ಶಾರದೆಯಲ್ಲಿ ಮುಳುಗಿಹೋಗುವಾಗ ದೃಕ್ ಇಲ್ಲ; ದೃಶ್ಯ ಇಲ್ಲ. ದರ್ಶನವೂ ಇಲ್ಲ….”

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಅಂಡಮಾನಿಗೆ ಮುಂಗಾರು ಶೀಘ್ರ ಪ್ರವೇಶ ಸಾಧ್ಯತೆ : ಕೇರಳಕ್ಕೆ ಮುಂಗಾರು ಬೇಗನೆ ಆಗಮನದ ಸೂಚನೆ

ಮೇ 15 ರ ಸುಮಾರಿಗೆ ಮುಂಗಾರು ಅಂಡಮಾನ್ ಸಮುದ್ರ ಪ್ರವೇಶಿಸುವ ಸಾಧ್ಯತೆ ಇದೆ.…

13 hours ago

ಹವಾಮಾನ ವರದಿ | 14-05-2026 | ಮೇ 20-25 ರೊಳಗೆ ಕೇರಳಕ್ಕೆ ಮುಂಗಾರು ಪ್ರವೇಶ ಸಾಧ್ಯತೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಮುಂದುವರಿದಿದೆ. ಮೇ 20-25ರೊಳಗೆ…

13 hours ago

ಹವಾಮಾನ ವರದಿ | 13-05-2026| ಕರ್ನಾಟಕದಲ್ಲಿ ಇನ್ನೂ ಕೆಲ ದಿನ ಗುಡುಗು ಸಹಿತ ಮಳೆ| ಮೇ 20-25ರೊಳಗೆ ಮುಂಗಾರು ಪ್ರವೇಶ ಸಾಧ್ಯತೆ!

ಕರ್ನಾಟಕದಲ್ಲಿ 14.05.2026ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯ ಪ್ರಕಾರ ಕರಾವಳಿ, ಮಲೆನಾಡು…

2 days ago

ಹವಾಮಾನ ವರದಿ | 12-05-2026 | ಮೇ 20ರ ಸುಮಾರಿಗೆ ಕರಾವಳಿಯಲ್ಲಿ ಮುಂಗಾರು ಮಾದರಿಯ ಮಳೆ ಸಾಧ್ಯತೆ..! |

ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲು ಮುಂದುವರಿದರೂ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ…

3 days ago

ರೋಸ್ಟೆಡ್‌ ಅಡಿಕೆ- ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ | “ರೋಸ್ಟೆಡ್‌ ಅಡಿಕೆ” ವರ್ಗೀಕರಣಕ್ಕೆ ಮುದ್ರೆ, ಜಪ್ತಿ ಸರಕುಗಳಿಗೆ ಮಾರ್ಗಸೂಚಿ

‘ರೋಸ್ಟೆಡ್‌ ಅಡಿಕೆ’ ವರ್ಗೀಕರಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅಲಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ತಾತ್ಕಾಲಿಕ…

3 days ago