Advertisement
ಯಕ್ಷಗಾನ : ಮಾತು-ಮಸೆತ

ಅಂತಃಕರಣ ವೃತ್ತಿಯು ಅಧೋಮುಖಿಯಾಗಿದ್ದುದು ಊಧ್ರ್ವಮುಖಿಯಾಗಬೇಕು

Share

ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಬ್ರಹ್ಮ’
ಪ್ರಸಂಗ : ಬ್ರಹ್ಮಕಪಾಲ

(ತನಗೆ ಉದ್ಯೋಗ ನೀಡಬೇಕೆಂದು ಶಾರದೆ ಬಿನ್ನವಿಸಿಕೊಂಡಾಗ ಬ್ರಹ್ಮನು ವಿದ್ಯಾಧಿಕಾರದ ಪಟ್ಟ ನೀಡಲು ಮುಂದಾಗುತ್ತಾನೆ)

“… ವಿದ್ಯಾಧಿದೇವತೆಯ ಪಟ್ಟ ಅದು ಬುದ್ಧಿಯ ಮೇಲೆ. ವ್ಯವಸಾಯಾತ್ಮಕವಾದ ಬುದ್ಧಿಯ ಸ್ಥಾನದಲ್ಲಿ ಶಾರದೆ ಪ್ರಕಾಶಿಸುತ್ತಾಳೆ. ಯೋಗಶಾಸ್ತ್ರದ ಪ್ರಕಾರ ‘ಸಹಸ್ರಾರ’ ಎಂಬ ಸ್ಥಾನವೊಂದು ನೆತ್ತಿಯಲ್ಲಿದೆ. ಅಲ್ಲಿ ಅವಳು ವಾಸ ಮಾಡುತ್ತಾಳೆ. ಬ್ರಹ್ಮನ ಸ್ಥಾನವೂ ಕಮಲವೇ. ಶಾರದೆಯ ಸ್ಥಾನವೂ ಕಮಲವೇ. ಆದರೆ ಅದು ನಾಭೀಕಮಲ. ನಿನ್ನ (ಶಾರದೆ) ಪೀಠ ಅದಲ್ಲ. ಸಹಸ್ರಾರ ಚಕ್ರದ ಕಮಲ. ಶಾರದೆಯಾದ ನಿನಗೆ ಇದನ್ನು ಅರ್ಥೈಸಲು ಕಷ್ಟವಾಗದು.

ಈ ದೇಹೇಂದ್ರಿಯಗಳಿಗಿಂತ ಮನಸ್ಸು ಶ್ರೇಷ್ಠವಾದುದು. ಮನಸ್ಸಿಗಿಂತಲೂ ಬುದ್ಧಿ ಉತ್ಕೃಷ್ಟವಾದುದು. ಈ ದೇಹೇಂದ್ರಿಯಗಳೆಲ್ಲಾ ಮನಸ್ಸಿನಲ್ಲಿ ನೆಲೆಸಬೇಕು. ಈ ಕರ್ಮೇಂದ್ರಿಯ, ಜ್ಞಾನೇಂದ್ರಿಯಗಳು ಶಬ್ದ, ಸ್ಪರ್ಶ, ರೂಪ, ರಸ, ಗಂಧಾದಿ ವಿಷಯಗಳನ್ನು ಸವಿಯುತ್ತವೆ. ಆಮೇಲೆ ದಾಹಗೊಳ್ಳುತ್ತದೆ. ಈ ದಾಹಗೊಳ್ಳುತ್ತಿರುವ ವೃತ್ತಿ ಮನಸ್ಸಿನಲ್ಲಿ ಲೀನವಾಗಬೇಕು. ಈ ಹತ್ತು ಇಂದ್ರಿಯಗಳು ಹನ್ನೊಂದನೆಯ ಇಂದ್ರಿಯಾಧ್ಯಕ್ಷನಲ್ಲಿ ಕೇಂದ್ರೀಕೃತವಾದರೆ, ಈ ಶುದ್ಧವಾದಂತಹ ಯಾವತ್ತೂ ಏಕಾದಶೀ ಸ್ಥಾನದಿಂದ, ಈ ಎಲ್ಲಾ ಶಬ್ದ, ಸ್ಪರ್ಶ, ರೂಪ, ರಸ, ಗಂಧಾದಿಗಳನ್ನು ಅರಗಿಸಿಕೊಂಡು, ಈ ಅಂತಃಕರಣ ವೃತ್ತಿಯು ಅಧೋಮುಖಿಯಾಗಿದ್ದುದು ಊಧ್ರ್ವಮುಖಿಯಾಗಬೇಕು. ಆವಾಗ ಅದಕ್ಕೆ ‘ಚಿತ್ತ’ ಅಂತ ಹೆಸರು.
ಈ ಚಿತ್ತವೃತ್ತಿ ಎಲ್ಲಾ ವಾಸನೆಗಳನ್ನು ಕೂಡಿಸಿಕೊಂಡು ಬುದ್ಧಿಯಲ್ಲಿ ರಮಿಸಬೇಕು. ಆಗ ಅದು ಶುದ್ಧ ಅದ್ವೈತವೇ ಆಗಿಬಿಟ್ಟರೆ ಕೊನೆಗೆ ಉಳಿದದ್ದು ‘ಜ್ಞಾನ’ ಮಾತ್ರ. ಆದ್ದರಿಂದ ಇಂತಹ ‘ಜ್ಞಾನ’ ಕೊನೆಯಲ್ಲಿ ಸಹಸ್ರಾರದಲ್ಲಿದ್ದ ಶಾರದೆಯಲ್ಲಿ ಮುಳುಗಿಹೋಗುವಾಗ ದೃಕ್ ಇಲ್ಲ; ದೃಶ್ಯ ಇಲ್ಲ. ದರ್ಶನವೂ ಇಲ್ಲ….”

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ತೆಂಗು–ಅಡಿಕೆ ನಡುವೆ ಏಲಕ್ಕಿ, ಮೆಣಸು, ಅರಿಶಿಣ | ತುಮಕೂರಿನಲ್ಲೂ ಬೆಳೆಗಾರರು ಪರ್ಯಾಯ ಆದಾಯದ ಕಡೆಗೆ ಹೆಜ್ಜೆ

ತೆಂಗು–ಅಡಿಕೆ ತೋಟಗಳ ನಡುವೆ ಅರಿಶಿಣ, ಏಲಕ್ಕಿ, ಮೆಣಸು ಬೆಳೆದು ತುಮಕೂರು ಜಿಲ್ಲೆಯ ರೈತರು…

1 day ago

ಮಳೆ ಕೊರತೆ ನೀಗಿಸಲು ಕರ್ನಾಟಕದಲ್ಲಿ ಮೋಡ ಬಿತ್ತನೆ

ಮುಂಗಾರು ಮಳೆಯ ಕೊರತೆ ಎದುರಿಸುತ್ತಿರುವ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಹೆಚ್ಚಿಸಲು ಸರ್ಕಾರ…

1 day ago

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ

ಕಸ್ತೂರಿ ರಂಗನ್ ವರದಿ ಜಾರಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ…

1 day ago

ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?

ಭಾರತದ 126 ಪ್ರಮುಖ ನಗರಗಳ ಹವಾಮಾನ ಸಿದ್ಧತೆಯನ್ನು ಅಳೆಯಲಾಗಿದ್ದರೂ, 2021ರ ಮೌಲ್ಯಮಾಪನದಲ್ಲಿ ರಾಷ್ಟ್ರೀಯ…

2 days ago

ಭಾರತದ ಕಾಫಿಗೆ ಜಾಗತಿಕ ಬೇಡಿಕೆ ಹೆಚ್ಚಳ : ‘ಇಂಡಿ ಕಾಫಿ’ಗೆ ಹೊಸ ಬ್ರ್ಯಾಂಡ್‌ ಒತ್ತು

ಭಾರತದ ಕಾಫಿ ರಫ್ತು ಗಳಿಕೆ 2021-22ರ ಸುಮಾರು 1 ಶತಕೋಟಿ ಡಾಲರ್‌ನಿಂದ 2025-26ರಲ್ಲಿ…

2 days ago

ಕಸವೆಂದು ಎಸೆಯುವ ಮೀನಿನ ಮುಳ್ಳು–ಹುರುಪೆಯಲ್ಲಿ ‘ಸಂಜೀವಿನಿ’!

ಮೀನಿನ ಮುಳ್ಳು ಮತ್ತು ಹುರುಪೆಯನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಹಲ್ಲುಗಳ ಪುನರ್ ನಿರ್ಮಾಣ ಹಾಗೂ…

2 days ago