ಜಾಲ್ಸೂರು: ಕರ್ನಾಟಕ ಅರೆಭಾಷೆ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರಿಗೆ ಯುವಜನ ವಿಕಾಸ ಕೇಂದ್ರ ಯುವಕ ಮಂಡಲ(ರಿ) ಕನಕಮಜಲು ಇದರ ಪೂರ್ವಾಧ್ಯಕ್ಷರುಗಳು, ಎಲ್ಲಾ ಸದಸ್ಯರುಗಳು ಅವರ ಮನೆಗೆ ಭೇಟಿ ನೀಡಿ ಶುಭ ಹಾರೈಸಿದರು.
ಯುವಕ ಮಂಡಲದ ಪೂರ್ವಾಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರಿಗೆ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀಧರ ಕುತ್ಯಾಳ ಹಾಗೂ ಯುವಕ ಮಂಡಲದ ಪೂರ್ವಾಧ್ಯಕ್ಷರಾದ ನೇತ್ರಕುಮಾರ್ ಪೆರೋಳಿ ಹೂಹಾರ ಹಾಕುವ ಮೂಲಕ ಹಾಗೂ ಯುವಕ ಮಂಡಲದ ಅಧ್ಯಕ್ಷರಾದ ಜಯಪ್ರಸಾದ್ ಕಾರಿಂಜ ಹುಗುಚ್ಛ ನೀಡಿ ಅಭಿನಂದಿಸಿದರು. ಕಾರ್ಯದರ್ಶಿ ಬಾಲಚಂದ್ರ ನೆಡಿಲು, ಪದಾಧಿಕಾರಿಗಳಾದ ಚಂದ್ರಶೇಖರ ನೆಡಿಲು, ಚಂದ್ರಶೇಖರ ಕುದ್ಕುಳಿ, ಜಗನ್ನಾಥ ಮಾಣಿಮಜಲು, ಈಶ್ವರ ಕೊರಂಬಡ್ಕ, ಹರಿಪ್ರಸಾದ್ ಮಾಣಿಕೊಡಿ, ರಕ್ಷಿತ್ ಅಕ್ಕಿಮಲೆ, ರವಿಚಂದ್ರ ಕಾಪಿಲ, ದಿನಕರ ಕಾಪಿಲ, ಸತೀಶ್ ಬೊಮ್ಮೆಟ್ಟಿ, ಚೇತನ್ ಮಣಿಮಾಜಲು, ಹೇಮಂತ್ ಮಠ, ಕಿಶನ್ ದೇವರಗುಂಡ, ಸಂತೋಷ್ ನೆಡಿಲು, ಗಂಗಾಧರ ಮಾಣಿಕೊಡಿ, ದಿವಾಕರ ಕಾಳಪ್ಪಜ್ಜನಮನೆ, ವಿಶ್ವನಾಥ ಮಾಣಿಕೊಡಿ, ಅಶ್ವಥ್ ಅಡ್ಕಾರ್, ಹರ್ಷಿತ್ ಉಗ್ಗಮೂಲೆ ಹಾಗೂ ಮತಿತರರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಮುಂದಿನ 10 ದಿನಗಳವರೆಗೆ ಜೋರು ಮಳೆಯ ಸಾಧ್ಯತೆಗಳು ಕಾಣುತ್ತಿಲ್ಲ. ಕರಾವಳಿಯಲ್ಲಿ ಜುಲೈ…
ಅಮರನಾಥ ಯಾತ್ರೆ ಆರಂಭವಾದ ಕೆಲವೇ ದಿನಗಳಲ್ಲಿ ಹಿಮ ಶಿವಲಿಂಗವು 90%ಕ್ಕೂ ಹೆಚ್ಚು ಕರಗಿರುವುದಾಗಿ…
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧ ವಿಧಿಸಿರುವ ಆಸ್ಟ್ರೇಲಿಯಾದ ಕ್ರಮವನ್ನು ಪ್ರಧಾನಿ…
ಎಲ್ ನಿನೊ ಪರಿಣಾಮದಿಂದ 2027ರಲ್ಲಿ ಎಣ್ಣೆ ಸಾರ್ಡಿನ್ ಮೀನುಗಳ ಉತ್ಪಾದನೆ ಕುಸಿಯುವ ಸಾಧ್ಯತೆ…
ದೇಶದ ಬಹುತೇಕ ಭಾಗಗಳಿಂದ ಮಳೆ ಮೋಡಗಳು ಕಡಿಮೆಯಾಗಲು ಪಶ್ಚಿಮ ಪೆಸಿಫಿಕ್ನ ಪ್ರಬಲ ಚಂಡಮಾರುತ…
ಜುಲೈ ಮೊದಲ ವಾರದ ಚೇತರಿಕೆಯ ಬಳಿಕ ದೇಶದ ಮುಂಗಾರು ಮತ್ತೆ ದುರ್ಬಲಗೊಂಡಿದ್ದು, ಮಳೆ…