ಸುದ್ದಿಗಳು

ಅಡಿಕೆ ಖರೀದಿಯ ಬಗ್ಗೆ ಕ್ಯಾಂಪ್ಕೋ ಅಧಿಕೃತ ಘೋಷಣೆ | ಎ.13 ರಿಂದ ಆಯ್ದ ಶಾಖೆಗಳಲ್ಲಿ ಅಡಿಕೆ ಖರೀದಿ | ಸದ್ಯಕ್ಕೆ ಅಡಿಕೆ ಬೆಳೆಗಾರರಿಗೆ ಇದೇ ಆತ್ಮವಿಶ್ವಾಸ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪುತ್ತೂರು: ಅಡಿಕೆ ಖರೀದಿ ನಡೆಸುವ ಬಗ್ಗೆ ಕ್ಯಾಂಪ್ಕೋ  ಘೋಷಣೆ ಮಾಡಿದೆ. ಎ.13 ರಿಂದ ಆಯ್ದ ಶಾಖೆಗಳಲ್ಲಿ  ಅಡಿಕೆ ಖರೀದಿ ನಡೆಸಲಿದೆ. ಆದರೆ ಕೆಲವೊಂದು ನಿಯಮಗಳನ್ನು ಅಳವಡಿಸಲಾಗಿದೆ. ದೇಶವೇ ಲಾಕ್ಡೌನ್ ಆಗಿರುವ ಸಂದರ್ಭದಲ್ಲಿ ಅಡಿಕೆ ಮಾರುಕಟ್ಟೆಯೇ ದೇಶದಲ್ಲಿ  ಬಂದ್ ಆಗಿರುವ ಈ ಹಂತದಲ್ಲಿ,  ಅಡಿಕೆ ಬಗ್ಗೆ ಗಾಸಿಪ್ ಗಳೇ ಹೆಚ್ಚಾಗಿರುವ ಈ ಹೊತ್ತಿನಲ್ಲಿ ಕ್ಯಾಂಪ್ಕೋ ಅಡಿಕೆ ಬೆಳೆಗಾರರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದೆ ಎನ್ನುವುದು ಬೆಳೆಗಾರರು ಗಮನದಲ್ಲಿರಿಸಿ ಹೆಜ್ಜೆ ಇಡಬೇಕಾಗಿದೆ.

Advertisement
Advertisement

ಅಡಿಕೆ ಖರೀದಿ ಬಗ್ಗೆ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮಾಹಿತಿ ನೀಡಿ, ಆಯ್ದ ಶಾಖೆಗಳಲ್ಲಿ  ಅಡಿಕೆ ಖರೀದಿ ಮಾಡಲಾಗುತ್ತದೆ.ಎ.13 ರಿಂದಲೇ ಅಡಿಕೆ ಖರೀದಿ ಮಾಡಲಾಗುತ್ತದೆ. ಪ್ರತಿದಿನ 20 ಸದಸ್ಯರಿಗೆ ಮಾತ್ರ ಅವಕಾಶವಿದ್ದು ಒಬ್ಬ ಸದಸ್ಯರಿಗೆ ಒಂದು ತಿಂಗಳಲ್ಲಿ ಗರಿಷ್ಠ 1 ಕ್ವಿಂಟಾಲ್ ಅಥವಾ ರೂ.25,000 ಮೌಲ್ಯದ ಅಡಿಕೆ ಮಾರಾಟಕ್ಕೆ ಅವಕಾಶ. ಮುಂದೆ ಇತರ ಕಡೆಗಳಲ್ಲಿ ಅಡಿಕೆ ಖರೀದಿ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಬೆಳೆಗಾರರು  ಆಯಾ ಶಾಖಾಧಿಕಾರಿಗಳ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಟೋಕನ್ ಪಡೆದುಕೊಳ್ಳತಕ್ಕದ್ದು. ಬೆಳಿಗ್ಗೆ ಗಂಟೆ 9.00 ರಿಂದ ಮಧ್ಯಾಹ್ನ 2.00 ರ ವರೆಗೆ ಅಡಿಕೆ ಖರೀದಿ ನಡೆಯುತ್ತದೆ.  ಸದಸ್ಯರು ಆಯಾ ಶಾಖೆಗಳಿಗೆ ಬರುವಾಗ ಕ್ಯಾಂಪ್ಕೊ ಸದಸ್ಯತ್ವದ ಗುರುತು ಚೀಟಿ, ಕ್ಯಾಂಪ್ಕೊ ಕಾರ್ಡು, ಪಹಣಿ ಪತ್ರವನ್ನು ತಮ್ಮೊಂದಿಗೆ ಇಟ್ಟುಕೊಳ್ಳುವುದರ ಜತೆಗೆ ಕಡ್ಡಾಯವಾಗಿ  ಮಾಸ್ಕ್  ಹಾಕಿಕೊಂಡು ಕನಿಷ್ಠ 3 ಅಡಿಗಳ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳತಕ್ಕದ್ದು. ಕ್ಯಾಂಪ್ಕೋ ಸದಸ್ಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಎಸ್.ಆರ್.ಸತೀಶ್ಚಂದ್ರ ಮಾಹಿತಿ ನೀಡಿದ್ದಾರೆ.

ಅಡಿಕೆ ಖರೀದಿಸುವ ಶಾಖೆಗಳ ವಿವರ :

ಅಡ್ಯನಡ್ಕ
ಕೊಕ್ಕೊ : ಗುರುವಾರ
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ದಿನೇಶ್ ಕುಮಾರ್ PH : 8277355840

Advertisement

ಪುತ್ತೂರು
ಕೊಕ್ಕೊ : ಶುಕ್ರವಾರ
ಅಡಿಕೆ : ಸೋಮವಾರ, ಬುಧವಾರ, ಗುರುವಾರ.
ಸಂಪರ್ಕ : ರಾಜೇಶ್ PH.8317494942

ವಿಟ್ಲ
ಕೊಕ್ಕೊ : ಗುರುವಾರ
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ರಾಜೇಶ್ ಎಂ PH.9947680655

ಸುಳ್ಯ
ಕೊಕ್ಕೊ : ಗುರುವಾರ
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಶ್ಯಾಮ್ PH. 6360053860

ನಿಂತಿಕಲ್ಲು
ಅಡಿಕೆ ಮಾತ್ರ
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಶ್ರೀನಿಧಿ : PH.
9663715920

(ಸೂಚನೆ : ದಿನಕ್ಕೆ ಗರಿಷ್ಠ 10 ಟೋಕನ್ ಪಡೆಯಲು ಮಾತ್ರ ಅವಕಾಶ)

Advertisement

ಕಡಬ
ಕೊಕ್ಕೊ : ಗುರುವಾರ
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಮಹೇಶ್ ಚಂದ್ರ PH. 9483790435.

ಉಪ್ಪಿನಂಗಡಿ
ಅಡಿಕೆ ಮಾತ್ರ
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಕೃಪೇಶ್ ರೈ PH.9481759830.

ಬೆಳ್ತಂಗಡಿ
ಕೊಕ್ಕೊ : ಸೋಮವಾರ
ಅಡಿಕೆ : ಮಂಗಳವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಉದಯ ಕುಮಾರ್ PH. 9880903258.

ಆಲಂಕಾರು
ಅಡಿಕೆ ಮಾತ್ರ :
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಧನುಷ್ PH.9972321421.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮುಂದಿನ 4-5 ದಿನಗಳಲ್ಲಿ ದೇಶದ ವಾಯುವ್ಯ ಭಾಗಗಳಲ್ಲಿ ತೀವ್ರ ತಾಪಮಾನ | ದಕ್ಷಿಣದಲ್ಲಿ ಉತ್ತಮ ಮಳೆ |

ಜೂನ್‌ 12 ರಿಂದ 15 ರವರೆಗೆ ಕರ್ನಾಟಕದಲ್ಲಿ  ಮತ್ತು ಜೂನ್ 13 ರಿಂದ…

4 hours ago

ಈರುಳ್ಳಿ ಮತ್ತು ಕೆಂಪುಮೆಣಸಿನಕಾಯಿ ಬೆಳೆಗಳಿಗೆ ವಿಮಾ ಸೌಲಭ್ಯ ಅಧಿಸೂಚನೆ

ಗದಗ ಜಿಲ್ಲೆಯಲ್ಲಿ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ…

4 hours ago

11 ವರ್ಷಗಳಲ್ಲಿ ಭಾರತದ ಕಡು ಬಡವರ ಸಂಖ್ಯೆ ತಗ್ಗಿದೆ – ಸಚಿವ ಪ್ರಹ್ಲಾದ್ ಜೋಶಿ

ಕಳೆದ 11 ವರ್ಷಗಳಲ್ಲಿ ಭಾರತದ ಕಡು ಬಡವರ ಸಂಖ್ಯೆ ಶೇಕಡ 21.1 ರಿಂದ…

4 hours ago

25 ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್ ಹೆದ್ದಾರಿಗಳ ನಿರ್ಮಾಣ -ಸಚಿವ ನಿತಿನ್‌ ಗಡ್ಕರಿ

ಬಂದರು ಸಂಪರ್ಕಕ್ಕಾಗಿ ಮತ್ತು ಧಾರ್ಮಿಕ ಪ್ರವಾಸೋದ್ಯಮಕ್ಕಾಗಿ 3 ಸಾವಿರ ಕಿಲೋ ಮೀಟರ್‌ಗಿಂತ  ಹೆಚ್ಚಿನ…

4 hours ago

ಧನ, ಧಾನ್ಯ, ಸಂಪತ್ತಿಗಾಗಿ ಇಂತಹ ಕೆಲಸಗಳನ್ನು ಮಾಡಿ…

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

4 hours ago

ಪ್ರೋಟಾನ್ ಥೆರಪಿ ಮೂಲಕ ಕ್ಯಾನ್ಸರ್ ಗೆ ಚಿಕಿತ್ಸೆ | ಕಿದ್ವಾಯಿ ಆಸ್ಪತ್ರೆಯಲ್ಲಿ ಸೌಲಭ್ಯ ಜಾರಿಗೆ ಪ್ರಸ್ತಾವನೆ

ಅತ್ಯಾಧುನಿಕವಾದ ಪ್ರೋಟಾನ್ ರೇಡಿಯೋ ಥೆರಪಿ ಮೂಲಕ ಕ್ಯಾನ್ಸರ್ ಶುಶ್ರೂಷೆಗೆ ಅಗತ್ಯ ಆರ್ಥಿಕ ನೆರವು…

14 hours ago