ಗುತ್ತಿಗಾರು: ಮೋಟಾರ್ ಬೈಕ್ ಮಾದರಿಯ ಅಡಿಕೆ ಮರ ಏರುವ ಯಂತ್ರದ ಪ್ರಾತ್ಯಕ್ಷಿಕೆ ಗುತ್ತಿಗಾರು ಗ್ರಾಮದ ಕಮಿಲ ಬಳಿಯ ಪುಚ್ಚಪ್ಪಾಡಿ ಕೃಷ್ಣಮೂರ್ತಿ ಅವರ ಅಡಿಕೆ ತೋಟದಲ್ಲಿ ನಡೆಯಿತು. ಅಡಿಕೆ ಬೆಳೆಗಾರರು ಮರ ಏರುವ ಯಂತ್ರದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು. ಭಾರತೀಯ ಕಿಸಾನ್ ಸಂಘ ಗುತ್ತಿಗಾರು-ನಾಲ್ಕುರು ಇದರ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ 100 ಕ್ಕೂ ಅಧಿಕ ಅಡಿಕೆ ಬೆಳೆಗಾರರು ಆಗಮಿಸಿದ್ದರು.
ಬಂಟ್ವಾಳದ ಸಜಿಪಮೂಡ ಗ್ರಾಮದ ಕೃಷಿಕ ಗಣಪತಿ ಭಟ್ ಅವರು ನಿರ್ಮಾಣ ಮಾಡಿರುವ ಮೋಟಾರು ಚಾಲಿತ ಅಡಿಕೆ ಮರ ಏರುವ ಯಂತ್ರದ ಪ್ರಾತ್ಯಕ್ಷಿಕೆ ನಡೆಯಿತು. ಈ ಸಂದರ್ಭ ರಾಜಾರಾಮ ಕಾಡೂರು ಮಾಹಿತಿ ನೀಡಿದರು. ಅಡಿಕೆ ಬೆಳೆಗಾರರು ಮರ ಏರಿ ಯಂತ್ರದ ಕ್ಷಮತೆ ಹಾಗೂ ಆವಿಷ್ಕಾರವನ್ನು ಕೊಂಡಾಡಿದರು.
ಕೃಷಿ ಯಂತ್ರದ ಅಭಿವೃದ್ಧಿ ಕಡೆಗೆ ಆಸಕ್ತರಾಗಿರುವ ಗಣಪತಿ ಭಟ್ ಅವರು ಈಗಾಗಲೇ ಸುಮಾರು 50 ಲಕ್ಷ ರೂಪಾಯಿಯಷ್ಟು ಖರ್ಚು ಮಾಡಿದ್ದಾರೆ. ಇದೀಗ ಅಡಿಕೆ ಮರ ಏರುವ ಯಂತ್ರ ಯಶಸ್ಸಾಗಿದೆ. ಅಡಿಕೆ ಬೆಳೆಗಾರರ ಮನ ಗೆದ್ದಿದೆ.
ಬಳಿಕ ಮಾತನಾಡಿದ ಗಣಪತಿ ಭಟ್,
ಕಳೆದ 2 ವರ್ಷಗಳ ನಿರಂತರ ಪ್ರಯತ್ನದಿಂದ ಈ ಮಾದರಿ ತಯಾರಾಗಿದೆ. ಈ ಹಿಂದೆ ಹಲವು ಯಂತ್ರಗಳ ರಚನೆ ಮಾಡಿದ್ದಾಗಿ ಹೇಳಿದ್ದಾರೆ. ಮುಂದೆ ತೆಂಗಿನ ಮರ ಏರುವ ಯಂತ್ರ ಹಾಗೂ ಅಡಿಕೆ ಮರ ಏರುವ ಈ ಮಾದರಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶ ಕೂಡಾ ಇದೆ ಎಂದು ಹೇಳುತ್ತಾರೆ.
ಅಡಿಕೆ ಮರ ಏರುವ ಯಂತ್ರದ ಪ್ರಾತ್ಯಕ್ಷಿಕೆಯ ವಿಡಿಯೋ ಇಲ್ಲಿದೆ….
ನಾಗಾಲ್ಯಾಂಡ್ನಲ್ಲಿ ರಬ್ಬರ್ ಕೃಷಿ ಸುಮಾರು 29,794 ಹೆಕ್ಟೇರ್ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್ನಲ್ಲಿ ಸೂಕ್ತ…
ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…
ಸೆ.8ರಿಂದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ.…
ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…
ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…
ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…