ಅಧಿಕಾರಿಗಳ ಗೈರು : ಪಂಜದಲ್ಲಿ ಗ್ರಾಮ ಸಭೆ ಮುಂದೂಡಿಕೆ

July 17, 2019
12:43 PM

ಪಂಜ: ವಿವಿಧ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಾತಿಯ ಕಾರಣದಿಂದ ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆ ಮುಂದೂಡಿದ ಘಟನೆ ಬುಧವಾರ ಪಂಜದಲ್ಲಿ ನಡೆದಿದೆ.

Advertisement
Advertisement

ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆ ಬುಧವಾರ ಆಯೋಜನೆಗೊಂಡಿತ್ತು. ಆರಂಭದಲ್ಲಿ ಜನರ ಕೋರಂ ಇಲ್ಲದ ಕಾರಣ ತಡವಾಗಿ ಗ್ರಾಮ ಸಭೆ ಆರಂಭವಾಯಿತು. ನಂತರ ಜನರು ಬಮದರೂ ಅಧಿಕಾರಿಗಳ ಕೊರತೆ ಕಂಡುಬಂತು. ಈ ಸಂದರ್ಭ ಜನರು ಗ್ರಾಪಂ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಪಿ ಡಿ ಒ ಅವರು ವಿವಿಧ ಇಲಾಖೆಗೆ ಸಂಪರ್ಕ ಮಾಡಿ ಅಧಿಕಾರಿಗಳನ್ನು  ಕರೆಯಿಸಿದರೂ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ , ಮೆಸ್ಕಾಂ, ಪಶುಸಂಗೋಪನಾ ಇಲಾಖಾ ಅಧಿಕಾರಿಗಳು ಗೈರಾಗಿದ್ದರು. ಹೀಗಾಗಿ ಗ್ರಾಮಸ್ಥರೇ ವರದಿ ನೀಡಿ ಬಳಿಕ ಸಭೆಯಿಂದ ಹೊರನಡೆದರು. ಹೀಗಾಗಿ ಗ್ರಾಮ ಸಬೆ ಮುಂದೂಡಲಾಯಿತು.

Advertisement

ಗ್ರಾಮ ಸರಕಾರ ಇತ್ತೀಚೆಗೆ ವೈಫಲ್ಯವಾಗುತ್ತಿದೆ. ಅಧಿಕಾರ ಹಳ್ಳಿಯಲ್ಲೇ ಇದೆ. ಪ್ರತೀ ಹಂತದಲ್ಲೂ ಗ್ರಾಮ ಸಭೆಯ ನಿರ್ಣವೇ ಅಂತಿಮವಾಗುತ್ತದೆ. ಹೀಗಾಗಿ  ಅಧಿಕಾರ ಜನರಲ್ಲೇ ಇದೆ. ಈ ಕಾರಣದಿಂದ ಗ್ರಾಮ ಸಭೆ, ಗ್ರಾಮ ಪಂಚಾಯತ್ ಆಡಳಿತ ಬಲವಾಗಬೇಕು. ಇಲಾಖೆಗಳು, ಅಧಿಕಾರಿಗಳು ಗ್ರಾಮ ಸಭೆ, ಗ್ರಾಮ ಸರಕಾರವನ್ನು ನಿರ್ಲಕ್ಷ್ಯ  ಮಾಡುವ ಬಗ್ಗೆ ಸುಳ್ಯನ್ಯೂಸ್.ಕಾಂ ಇಂದು ಫೋಕಸ್ ಸ್ಟೋರಿ ಮಾಡಿತ್ತು. ಇದಕ್ಕೆ ಪಂಜದ ವರದಿಯೂ ಸಾಕ್ಷಿಯಾಯಿತು.

 

Advertisement

ಈ ವರದಿಯ ಲಿಂಕ್ ಇಲ್ಲಿದೆ…

https://theruralmirror.com/?p=6965

Advertisement

 

 

Advertisement

 

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸುಸ್ಥಿರ ಕೃಷಿ ತರಬೇತಿ ಕಾರ್ಯಗಾರ | ಯುವ ಕೃಷಿಕರಿಗೆ ಕೃಷಿ ಬಗ್ಗೆ ಮಾಹಿತಿ
May 16, 2024
5:58 PM
by: The Rural Mirror ಸುದ್ದಿಜಾಲ
ಕೆರೆಯಲ್ಲಿ ಸಾಕಿದ್ದ ಮೀನುಗಳ ಮಾರಣಹೋಮ | ಬೃಹತ್‌ ಗಾತ್ರ ಮೀನು ಸಾವು | ಅಪಾರ ನಷ್ಟ |
May 16, 2024
5:43 PM
by: The Rural Mirror ಸುದ್ದಿಜಾಲ
ಮೇ 31ಕ್ಕೆ ದೇಶದಲ್ಲಿ ಮುಂಗಾರು ಪ್ರವೇಶ ಸಾಧ್ಯತೆ | ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಮಳೆ |
May 16, 2024
5:23 PM
by: The Rural Mirror ಸುದ್ದಿಜಾಲ
ಭಾರತ ಚಂದ್ರನಂಗಳದಲ್ಲಿದೆ | ನಮ್ಮ ಮಕ್ಕಳು ಚರಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ | ಪಾಕ್ ಸಂಸದ ಪಾಕ್‌ ಆಡಳಿತ ವಿರುದ್ಧ ಕಿಡಿ
May 16, 2024
5:06 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror