ಪಂಜ: ವಿವಿಧ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಾತಿಯ ಕಾರಣದಿಂದ ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆ ಮುಂದೂಡಿದ ಘಟನೆ ಬುಧವಾರ ಪಂಜದಲ್ಲಿ ನಡೆದಿದೆ.
ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆ ಬುಧವಾರ ಆಯೋಜನೆಗೊಂಡಿತ್ತು. ಆರಂಭದಲ್ಲಿ ಜನರ ಕೋರಂ ಇಲ್ಲದ ಕಾರಣ ತಡವಾಗಿ ಗ್ರಾಮ ಸಭೆ ಆರಂಭವಾಯಿತು. ನಂತರ ಜನರು ಬಮದರೂ ಅಧಿಕಾರಿಗಳ ಕೊರತೆ ಕಂಡುಬಂತು. ಈ ಸಂದರ್ಭ ಜನರು ಗ್ರಾಪಂ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಪಿ ಡಿ ಒ ಅವರು ವಿವಿಧ ಇಲಾಖೆಗೆ ಸಂಪರ್ಕ ಮಾಡಿ ಅಧಿಕಾರಿಗಳನ್ನು ಕರೆಯಿಸಿದರೂ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ , ಮೆಸ್ಕಾಂ, ಪಶುಸಂಗೋಪನಾ ಇಲಾಖಾ ಅಧಿಕಾರಿಗಳು ಗೈರಾಗಿದ್ದರು. ಹೀಗಾಗಿ ಗ್ರಾಮಸ್ಥರೇ ವರದಿ ನೀಡಿ ಬಳಿಕ ಸಭೆಯಿಂದ ಹೊರನಡೆದರು. ಹೀಗಾಗಿ ಗ್ರಾಮ ಸಬೆ ಮುಂದೂಡಲಾಯಿತು.
ಗ್ರಾಮ ಸರಕಾರ ಇತ್ತೀಚೆಗೆ ವೈಫಲ್ಯವಾಗುತ್ತಿದೆ. ಅಧಿಕಾರ ಹಳ್ಳಿಯಲ್ಲೇ ಇದೆ. ಪ್ರತೀ ಹಂತದಲ್ಲೂ ಗ್ರಾಮ ಸಭೆಯ ನಿರ್ಣವೇ ಅಂತಿಮವಾಗುತ್ತದೆ. ಹೀಗಾಗಿ ಅಧಿಕಾರ ಜನರಲ್ಲೇ ಇದೆ. ಈ ಕಾರಣದಿಂದ ಗ್ರಾಮ ಸಭೆ, ಗ್ರಾಮ ಪಂಚಾಯತ್ ಆಡಳಿತ ಬಲವಾಗಬೇಕು. ಇಲಾಖೆಗಳು, ಅಧಿಕಾರಿಗಳು ಗ್ರಾಮ ಸಭೆ, ಗ್ರಾಮ ಸರಕಾರವನ್ನು ನಿರ್ಲಕ್ಷ್ಯ ಮಾಡುವ ಬಗ್ಗೆ ಸುಳ್ಯನ್ಯೂಸ್.ಕಾಂ ಇಂದು ಫೋಕಸ್ ಸ್ಟೋರಿ ಮಾಡಿತ್ತು. ಇದಕ್ಕೆ ಪಂಜದ ವರದಿಯೂ ಸಾಕ್ಷಿಯಾಯಿತು.
ಈ ವರದಿಯ ಲಿಂಕ್ ಇಲ್ಲಿದೆ…
https://theruralmirror.com/?p=6965
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವೆಡೆ ಶನಿವಾರ ಸಂಜೆ ಅಕಾಲಿಕ ಮಳೆಯಾಗಿದ್ದು,…
ಕರ್ನಾಟಕದಲ್ಲಿ ಫೆಬ್ರುವರಿ 27ರವರೆಗೆ ಬಿಸಿಲಿನ ಜೊತೆಗೆ ತುಂತುರು ಮತ್ತು ಗುಡುಗು ಮಳೆಯ ಮುನ್ಸೂಚನೆ.…
ಮಲೆನಾಡಿನಲ್ಲಿ ಅಡಿಕೆ ರೈತರು ಮಿಶ್ರ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಹವಾಮಾನ ಬದಲಾವಣೆ, ಬೆಲೆ…
ನಂದಿನಿ ಹಾಲು ಮತ್ತು ಉತ್ಪನ್ನಗಳು ಸೇವನೆಗೆ ಸಂಪೂರ್ಣ ಸುರಕ್ಷಿತವೆಂದು ಕೆಎಂಎಫ್ ಸ್ಪಷ್ಟನೆ ನೀಡಿದೆ.…
ರೈತರಿಗೆ ಗನ್ ಪರವಾನಗಿ ಹಾಗೂ ನವೀಕರಣ ಪ್ರಕ್ರಿಯೆಯನ್ನು ಸುಲಭಗೊಳಿಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ…
ಮಂಗಳೂರಿನ ಅಡಿಕೆ ಮಾರುಕಟ್ಟೆಯು ಪ್ರಸ್ತುತ ಕೇವಲ ಬೆಲೆ ಏರಿಳಿತದ ಕೇಂದ್ರವಾಗಿ ಉಳಿದಿಲ್ಲ; ಬದಲಾಗಿ…