ಸುಳ್ಯ: ರಾಜಕೀಯ ಮಾಡಿ, ಆದರೆ ಅಭಿವೃದ್ಧಿಯಲ್ಲಿ ಅಲ್ಲ. ಎಲ್ಲಾ ಶಕ್ತಿ ಪ್ರದರ್ಶನ ಮಾಡಿ ತೋರಿಸಿ ಅಭಿವೃದ್ಧಿ ಕಾರ್ಯದಲ್ಲಿ…!. ಇದು ಯಾಕೆ ಹೇಳ್ತಾರೆ ಎಂದರೆ ಅಜ್ಜಾವರ ಗ್ರಾಮದ ಕಾಂತಮಂಗಲವಾಗಿ ಕೊಂಬರಡ್ಕ , ಪಳ್ಳತ್ತಡ್ಕವಾಗಿ ಮೇನಾಲ ಸೇರುವ ರಸ್ತೆಯನ್ನು ನೋಡಿ.
ಕಳೆದ ಅನೇಕ ವರ್ಷಗಳಿಂದ ಈ ರಸ್ತೆ ಅವ್ಯವಸ್ಥೆ ಇದೆ. ಹಾಗಿದ್ದರೂ ಅಭಿವೃದ್ಧಿಯಾಗಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.ಅಜ್ಜಾವರ ಗ್ರಾಮದ ಕಾಂತಮಂಗಲವಾಗಿ ಕೊಂಬರಡ್ಕ , ಪಳ್ಳತ್ತಡ್ಕವಾಗಿ ಮೇನಾಲ ಸೇರುವ ರಸ್ತೆ ಹಾಗೂ ಮುಳ್ಯ ಕಜೆ ಯಾಗಿ ಪೇರಾಲು ಸೇರುವ ರಸ್ತೆ ತೀರಾ ಅವ್ಯವಸ್ಥೆಯಿಂದ ಕೂಡಿದೆ. ಸಾವಿರಾರು ಮಂದಿ ದಿನವೂ ಓಡಾಡ್ತಾರೆ ಈ ರಸ್ತೆಯಲ್ಲಿ. ಆದರೆ ಅಭಿವೃದ್ಧಿ ಮಾತ್ರಾ ಆಗಿಲ್ಲ. ಹಾಗೆಂದು ಈ ರಸ್ತೆ ಅಭಿವೃದ್ಧಿಯಾಗಿಲ್ಲ ಎಂದರೆ ರಾಜಕೀಯ ಸೇರುತ್ತದೆ. ಅಷ್ಟು ಅನುದಾನ ನೀಡಿದೆ, ಇಷ್ಟು ಅನುದಾನ ನೀಡಿದೆ ಎಂದು ರಾಜಕೀಯ ಮಾಡಿ ಮಾತನಾಡುವ ಧ್ವನಿಯನ್ನೇ ಕುಗ್ಗಿಸಲಾಗುತ್ತದೆ ಎಂದು ಸ್ಥಳೀಯರು ವಿಷಾದದಿಂದ ಹೇಳುತ್ತಾರೆ. ಈಗಲೂ ಮತ್ತೆ ಕೇಳುತ್ತಾರೆ, ರಸ್ತೆ ಯಾವಾಗ ದುರಸ್ತಿಯಾಗುತ್ತದೆ…..??
ಯಾವುದಾದರೂ ಒಂದು ರಸ್ತೆಗೆ 50 ಮೀಟರ್ ಕಾಂಕ್ರೀಟ್ ಆದರೆ ತಕ್ಷಣವೇ ಬ್ಯಾನರ್ ಬೀಳುತ್ತದೆ, ಈ ರಸ್ತೆಗೂ ಒಂದು ಬ್ಯಾನರ್ ಹಾಕಿಸಬೇಕು ಎಂದು ಕೆಲವು ಮಂದಿ ಕುಹಕ ಮಾಡುತ್ತಾರೆ. ಬ್ಯಾನರ್ ಪ್ರಿಯರು ಇದನ್ನೂ ಗಮನಿಸಬೇಕು…!
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಮಹಾರಾಷ್ಟ್ರದ…
ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನ ಹಾಗೂ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ …
ಬೆಳೆಗಾರರು ಸಹಕಾರಿ ಸಂಸ್ಥೆಗಳು ಮತ್ತು ಬೆಳೆಗಾರದ್ದೇ ಆದ ಇತರ ಸಂಸ್ಥೆಗಳ ಮೂಲಕ ವ್ಯವಹಾರ…
ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ ಜಾರಿಯಾಗಿ ವರ್ಷಗಳು ಕೆಲವು ಉರುಳಿದವು. ಇಂದಿಗೂ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ…