Advertisement
ಅಂಕಣ

ಅವಳು ಬದುಕುತ್ತಿದ್ದಾಳೆ

Share
ಅವಳು ಬದುಕುತಿದ್ದಾಳೆ
ಅವಳಿಗಾಗಿ ಅಲ್ಲ…..
ಕಷ್ಟದ ಕದ ತೆರೆದಿದೆ
ಸಹನೆಯ ಕಟ್ಟೆಯೊಡೆದಿದೆ..
ಈ ಬದುಕು ಅವಳಿಗಾಗಿ ಅಲ್ಲ…!
ಕರಿಮಣ್ಣ ಹಗಲಿರುಳು ಹದ ಮಾಡುತಿಹಳು
ಹೊನ್ನ ಬೆಳೆಯ ಕಾಣುವಾಸೆಯಲಿ
ಆಸರೆಗೊಂದು ಸೂರು,ಹಸಿವಿಗಾಗಿ ಅನ್ನ
ಇನ್ನೇನು ಕಂಡವಳಲ್ಲ ಅವಳು
ನಿಜ!ಈ ಬದುಕು ಅವಳಿಗಾಗಿ ಅಲ್ಲ
ತುಸು ವಿಶ್ರಾಂತಿಯಿರದ ಬದುಕಲಿ ನೆಮ್ಮದಿಯು ಕನಸು
ಮರೆಮಾಚಿಹಳು ಸೆರಗಿನ ಮರೆಯಲ್ಲಿ ಕಣ್ಣೀರು
ಕಾಲಿಗೆ ಚಕ್ರ ಕಟ್ಟಿಕೊಂಡವಳಂತೆ
ಹಗಲಿರುಳ ದುಡಿಮೆಯೇ ಅವಳ ಬದುಕು..
ನಿಜ!ಅವಳ ಬದುಕು ಅವಳಿಗಾಗಿ ಅಲ್ಲ..
ತನ್ನೊಡನೆ ಸಪ್ತಪದಿಯ ತುಳಿದಾತ.
ಕಷ್ಟದಲಿ ಜೊತೆಯಿರುವೆನೆಂದು ವಚನ ಗೈದಾತ
ಸುಖವ ಅರಸಿ ಬಂದಾಕೆಗೆ ಕಷ್ಟದ ಬಾಗಿಲನು ತೆರೆದಾತ ಅವನೊಬ್ಬ ಹೆಂಡಕುಡುಕ
ನಿಜ!ಈ ಬದುಕು ಅವಳಿಗಾಗಿ ಅಲ್ಲ
ಅವರಿವರ ಚುಚ್ಚುಮಾತಿಗೆ ಕಿವಿಮುಚ್ಚಿ
ಗಂಡನ ಕುಡುಕತನದಾಟಕ್ಕೆ ಸೋತು ಕುಸಿಯದೆ
ಸೆರಗ ಮರೆಯಲ್ಲಿ ಮಕ್ಕಳ ಮರೆಮಾಚಿ ಸನ್ಮಾರ್ಗದಿ ನಡೆಸಿದಾಕೆ
ನಿಜ!ಈ ಬದುಕು ಅವಳಿಗಾಗಿ ಅಲ್ಲ
ತಂದೆಯಾದವ ಜವಬ್ಧಾರಿ ಮರೆತಾಗ
ಹೆಂಡಕುಡಿವುದೊಂದೇ ನಿತ್ಯ ಕಾಯಕ ಎಂದಾಗ
ತನ್ನುದರದ ಕುಡಿಗಳಿಗಾಗಿ ಬದುಕ ಸವೆಸಿದಾಕೆ…
ತನ್ನ ಕನಸುಗಳ ಕೊಂದು ಬದುಕಿದಾಕೆ
ನಿಜ! ಅವಳ ಬದುಕು  ಅವಳಿಗಾಗಿ ಅಲ್ಲ…..
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಮಾರ್ಚ್ ಆರಂಭದಲ್ಲೇ ರಾಜ್ಯದ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚಳ

ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…

5 hours ago

ಅಡಿಕೆ ಎಲೆಚುಕ್ಕಿ ರೋಗ | ಸರ್ಕಾರದಿಂದ ಪ್ರತ್ಯೇಕ ಪರಿಹಾರ ಇಲ್ಲ | ಡಿಸೀಸ್‌ ಫಾರ್ಕಾಸ್ಟ್‌ ಮಾಡಲು ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಬೊಟ್ಯಾಡಿ ಒತ್ತಾಯ |

ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್‌ ಫಾರ್ಕಾಸ್ಟ್ ಅಂದರೆ ಯಾವ…

12 hours ago

ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ  ವರದಿಯ ಅನ್ವಯ, ಉತ್ತರ ಕನ್ನಡ…

13 hours ago

ಹವಾಮಾನ ವರದಿ | 04-03-2025 | ಮಾ.8 ರವರೆಗೆ ಮಳೆ ಲಕ್ಷಣ ಇಲ್ಲ | ಬಿಸಿಲಿನ ವಾತಾವರಣ ಮುಂದುವರಿಕೆ |

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…

15 hours ago

ಹವಾಮಾನ ವರದಿ | 03-03-2025 | ಬಿಸಿಲಿನ ವಾತಾವರಣ ಮುಂದುವರಿಕೆ | ಮಾ.6 ರ ನಂತರ ಅಲ್ಲಲ್ಲಿ ತುಂತುರು ಮಳೆ ನಿರೀಕ್ಷೆ |

ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…

2 days ago

ಚಿಕ್ಕಮಗಳೂರಿನ ಅರಣ್ಯದಲ್ಲಿ ಕಾಡ್ಗಿಚ್ಚು | 20 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ

ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…

2 days ago