ಅವಳು ಬದುಕುತ್ತಿದ್ದಾಳೆ

July 10, 2019
11:00 AM
ಅವಳು ಬದುಕುತಿದ್ದಾಳೆ
ಅವಳಿಗಾಗಿ ಅಲ್ಲ…..
ಕಷ್ಟದ ಕದ ತೆರೆದಿದೆ
ಸಹನೆಯ ಕಟ್ಟೆಯೊಡೆದಿದೆ..
ಈ ಬದುಕು ಅವಳಿಗಾಗಿ ಅಲ್ಲ…!
ಕರಿಮಣ್ಣ ಹಗಲಿರುಳು ಹದ ಮಾಡುತಿಹಳು
ಹೊನ್ನ ಬೆಳೆಯ ಕಾಣುವಾಸೆಯಲಿ
ಆಸರೆಗೊಂದು ಸೂರು,ಹಸಿವಿಗಾಗಿ ಅನ್ನ
ಇನ್ನೇನು ಕಂಡವಳಲ್ಲ ಅವಳು
ನಿಜ!ಈ ಬದುಕು ಅವಳಿಗಾಗಿ ಅಲ್ಲ
ತುಸು ವಿಶ್ರಾಂತಿಯಿರದ ಬದುಕಲಿ ನೆಮ್ಮದಿಯು ಕನಸು
ಮರೆಮಾಚಿಹಳು ಸೆರಗಿನ ಮರೆಯಲ್ಲಿ ಕಣ್ಣೀರು
ಕಾಲಿಗೆ ಚಕ್ರ ಕಟ್ಟಿಕೊಂಡವಳಂತೆ
ಹಗಲಿರುಳ ದುಡಿಮೆಯೇ ಅವಳ ಬದುಕು..
ನಿಜ!ಅವಳ ಬದುಕು ಅವಳಿಗಾಗಿ ಅಲ್ಲ..
ತನ್ನೊಡನೆ ಸಪ್ತಪದಿಯ ತುಳಿದಾತ.
ಕಷ್ಟದಲಿ ಜೊತೆಯಿರುವೆನೆಂದು ವಚನ ಗೈದಾತ
ಸುಖವ ಅರಸಿ ಬಂದಾಕೆಗೆ ಕಷ್ಟದ ಬಾಗಿಲನು ತೆರೆದಾತ ಅವನೊಬ್ಬ ಹೆಂಡಕುಡುಕ
ನಿಜ!ಈ ಬದುಕು ಅವಳಿಗಾಗಿ ಅಲ್ಲ
ಅವರಿವರ ಚುಚ್ಚುಮಾತಿಗೆ ಕಿವಿಮುಚ್ಚಿ
ಗಂಡನ ಕುಡುಕತನದಾಟಕ್ಕೆ ಸೋತು ಕುಸಿಯದೆ
ಸೆರಗ ಮರೆಯಲ್ಲಿ ಮಕ್ಕಳ ಮರೆಮಾಚಿ ಸನ್ಮಾರ್ಗದಿ ನಡೆಸಿದಾಕೆ
ನಿಜ!ಈ ಬದುಕು ಅವಳಿಗಾಗಿ ಅಲ್ಲ
ತಂದೆಯಾದವ ಜವಬ್ಧಾರಿ ಮರೆತಾಗ
ಹೆಂಡಕುಡಿವುದೊಂದೇ ನಿತ್ಯ ಕಾಯಕ ಎಂದಾಗ
ತನ್ನುದರದ ಕುಡಿಗಳಿಗಾಗಿ ಬದುಕ ಸವೆಸಿದಾಕೆ…
ತನ್ನ ಕನಸುಗಳ ಕೊಂದು ಬದುಕಿದಾಕೆ
ನಿಜ! ಅವಳ ಬದುಕು  ಅವಳಿಗಾಗಿ ಅಲ್ಲ…..
Advertisement
Advertisement

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
ಎಲ್ಲರೂ ಒಂದಾಗಿ ಬಾಳುವ, ಮೇಳು-ಕೀಳು ಮದ -ಮತ್ಸರ ಬಿಟ್ಟು ಬದುಕುವ | ಎಲ್ಲಾರೂ ಮಾಡುವುದು ಹೊಟ್ಟೆಗಾಗಿ…ಗೇಣು ಬಟ್ಟೆಗಾಗಿ |
April 20, 2024
4:21 PM
by: The Rural Mirror ಸುದ್ದಿಜಾಲ
ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |
April 18, 2024
3:00 PM
by: ಮಹೇಶ್ ಪುಚ್ಚಪ್ಪಾಡಿ
ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆ | ರಾಮನವಮಿ ಪ್ರಯುಕ್ತ ಬರೆಯುತ್ತಾರೆ ವಿವೇಕಾನಂದ. ಎಚ್. ಕೆ.
April 17, 2024
4:37 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror