ಆಚರಣೆಯ ಮೆರುಗು ಹೆಚ್ಚಿಸುವ ನವರಾತ್ರಿ ವೇಷಗಳು

October 7, 2019
2:08 PM

ಸುಳ್ಯ: ನವರಾತ್ರಿ ಎಂದೊಡನೆ ಮನಸಿಗೆ ಓಡೋಡಿ ಬರುವುದು ಶುದ್ಧ ಶಾಸ್ತ್ರೀಯ ಸಂಗೀತದ ಇಂಪು, ಚೆಂಡೆ, ವಾದ್ಯಗಳ ಅಬ್ಬರ, ನವರಾತ್ರಿ ವೇಷಗಳ ವರ್ಣ ವೈವಿಧ್ಯ. ನವರಾತ್ರಿ ಸಂಗೀತೋತ್ಸವಗಳ ಮೂಲಕ ಶಾಸ್ತ್ರೀಯ ಸಂಗೀತದ ಇಂಪು ಮನಸನ್ನು ಪುಳಕಿತಗೊಳಿಸಿದರೆ, ಚೆಂಡೆ ವಾದ್ಯಗಳ ಅಬ್ಬರದೊಂದಿಗೆ ಆರ್ಭಟಿಸುವ ರಾಕ್ಷಸ ವೇಷಗಳು, ವೈವಿಧ್ಯ ಕುಣಿತಗಳೊಂದಿಗೆ ತಂಡೋಪ ತಂಡವಾಗಿ ತಿರುಗಾಟ ನಡೆಸುವ ಹುಲಿ, ಸಿಂಹ, ಕರಡಿಯ ನವರಾತ್ರಿ ವೇಷಗಳು ದಸರಾ ಆಚರಣೆಯ ಮೆರುಗನ್ನು ಹೆಚ್ಚಸುತ್ತದೆ.

ನವರಾತ್ರಿ ಆರಂಭದಿಂದಲೂ ನಗರ, ಗ್ರಾಮದ ಬೀದಿಗಳಲ್ಲಿ ವೈವಿಧ್ಯಮಯ ಹುಲಿ, ಸಿಂಹ, ಕರಡಿ ವೇಷಗಳ ಕುಣಿತಗಳು ಜನಾಕರ್ಷಣೆಯನ್ನು ಪಡೆಯುತ್ತವೆ. ಜೊತೆಗೆ ಬೇಟೆಗಾರನ ವೇಷ, ಹಾಸ್ಯಗಾರನ ವೇಷಗಳು ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ. ಒಂದೆರಡು ರಾಕ್ಷಸ, ಹುಲಿ, ಕರಡಿ, ಸಿಂಹ ವೇಷಗಳು, ಚೆಂಡೆ ವಾದನಕಾರರು ಸೇರಿದ ಚಿಕ್ಕ ಚಿಕ್ಕ ತಂಡಗಳು ಒಂದೆಡೆಯಾದರೆ, 10- 15 ಹುಲಿ, ಸಿಂಹ, ಕರಡಿ ವೇಷಗಳನ್ನೊಳಗೊಂಡ ದೊಡ್ಡ ತಂಡಗಳೂ ಕಂಡು ಬರುತ್ತಾರೆ. ಪಾರಂಪರಿಕ ನವರಾತ್ರಿ ವೇಷಗಳು ತುಳುನಾಡಿನ ದಸರಾ ಆಚರಣೆಯ ಅವಿಭಾಜ್ಯ ಅಂಗ.

 

ಗ್ರಾಮ, ನಗರ ಬೀದಿಗಳಲ್ಲಿ, ಮನೆ ಮನೆಗಳಲ್ಲಿ ಹುಲಿ, ಕರಡಿ, ಸಿಂಹಗಳ ವೈವಿಧ್ಯ ವೇಷಗಳ ಮೈ ನವಿರೇಳಿಸುವ ಕುಣಿತಗಳು, ರಾಕ್ಷಸ ವೇಷದ ಅಬ್ಬರ ದಸರಾ ಆಚರಣೆಯ ವೈಭವವನ್ನು ಹೆಚ್ಚಿಸುತ್ತದೆ. ಒಂಭತ್ತು ದಿನಗಳ ಕಾಲ ವೇಷ ಧರಿಸಿ ನಾಡಿನಾದ್ಯಂತ ಸಂಚರಿಸಿ ಹಬ್ಬವನ್ನು ಸಂಪನ್ನಗೊಳಿಸುವ ನವರಾತ್ರಿ ವೇಷಗಳು ವಿಜಯದಶಮಿ ದಿನದಂದು ತಿರುಗಾಟವನ್ನು ಕೊನೆಗೊಳಿಸುತ್ತಾರೆ. ಶಾರದೋತ್ಸವ, ದಸರಾ ಮೆರವಣಿಗೆಗಳಲ್ಲಿಯೂ ಭಾಗವಹಿಸಿದ ಬಳಿಕ ವೇಷವನ್ನು ತೆಗೆಯುವರು. ಹರಕೆ ಹೇಳಿ ನವರಾತ್ರಿ ವೇಷ ಹಾಕುವವರೂ ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪಾರಂಪರಿಕ ನವರಾತ್ರಿ ವೇಷಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲದೆ ವೇಷ ಭೂಷಣಗಳಲ್ಲಿಯೂ ಬದಲಾವಣೆ ಕಾಣುತ್ತಿದೆ ಎನ್ನುತ್ತಾರೆ ಹಿರಿಯರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ
September 10, 2026
10:59 AM
by: ದ ರೂರಲ್ ಮಿರರ್.ಕಾಂ
ದೇಶಾದ್ಯಂತ ಮುಂಗಾರು ಬಿತ್ತನೆ 1,086 ಲಕ್ಷ ಹೆಕ್ಟೇರ್ ದಾಟಿದೆ – ಕರ್ನಾಟಕದಲ್ಲಿ ಭತ್ತ, ದ್ವಿದಳ ಧಾನ್ಯ ಕೃಷಿ ಕುಸಿತ
September 8, 2026
10:02 PM
by: ದ ರೂರಲ್ ಮಿರರ್.ಕಾಂ
ಜಾನುವಾರುಗಳ ಮೇವಿನ ಕೊರತೆಗೆ ಅಜೋಲಾ ಪರಿಹಾರ – ರಾಜ್ಯದಲ್ಲಿ 12 ಸಾವಿರ ಘಟಕಗಳ ಸ್ಥಾಪನೆಗೆ ಚಾಲನೆ
September 8, 2026
9:38 PM
by: ದ ರೂರಲ್ ಮಿರರ್.ಕಾಂ
‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?
September 8, 2026
9:43 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror