Advertisement
MIRROR FOCUS

ಆಚರಣೆಯ ಮೆರುಗು ಹೆಚ್ಚಿಸುವ ನವರಾತ್ರಿ ವೇಷಗಳು

Share

ಸುಳ್ಯ: ನವರಾತ್ರಿ ಎಂದೊಡನೆ ಮನಸಿಗೆ ಓಡೋಡಿ ಬರುವುದು ಶುದ್ಧ ಶಾಸ್ತ್ರೀಯ ಸಂಗೀತದ ಇಂಪು, ಚೆಂಡೆ, ವಾದ್ಯಗಳ ಅಬ್ಬರ, ನವರಾತ್ರಿ ವೇಷಗಳ ವರ್ಣ ವೈವಿಧ್ಯ. ನವರಾತ್ರಿ ಸಂಗೀತೋತ್ಸವಗಳ ಮೂಲಕ ಶಾಸ್ತ್ರೀಯ ಸಂಗೀತದ ಇಂಪು ಮನಸನ್ನು ಪುಳಕಿತಗೊಳಿಸಿದರೆ, ಚೆಂಡೆ ವಾದ್ಯಗಳ ಅಬ್ಬರದೊಂದಿಗೆ ಆರ್ಭಟಿಸುವ ರಾಕ್ಷಸ ವೇಷಗಳು, ವೈವಿಧ್ಯ ಕುಣಿತಗಳೊಂದಿಗೆ ತಂಡೋಪ ತಂಡವಾಗಿ ತಿರುಗಾಟ ನಡೆಸುವ ಹುಲಿ, ಸಿಂಹ, ಕರಡಿಯ ನವರಾತ್ರಿ ವೇಷಗಳು ದಸರಾ ಆಚರಣೆಯ ಮೆರುಗನ್ನು ಹೆಚ್ಚಸುತ್ತದೆ.

ನವರಾತ್ರಿ ಆರಂಭದಿಂದಲೂ ನಗರ, ಗ್ರಾಮದ ಬೀದಿಗಳಲ್ಲಿ ವೈವಿಧ್ಯಮಯ ಹುಲಿ, ಸಿಂಹ, ಕರಡಿ ವೇಷಗಳ ಕುಣಿತಗಳು ಜನಾಕರ್ಷಣೆಯನ್ನು ಪಡೆಯುತ್ತವೆ. ಜೊತೆಗೆ ಬೇಟೆಗಾರನ ವೇಷ, ಹಾಸ್ಯಗಾರನ ವೇಷಗಳು ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ. ಒಂದೆರಡು ರಾಕ್ಷಸ, ಹುಲಿ, ಕರಡಿ, ಸಿಂಹ ವೇಷಗಳು, ಚೆಂಡೆ ವಾದನಕಾರರು ಸೇರಿದ ಚಿಕ್ಕ ಚಿಕ್ಕ ತಂಡಗಳು ಒಂದೆಡೆಯಾದರೆ, 10- 15 ಹುಲಿ, ಸಿಂಹ, ಕರಡಿ ವೇಷಗಳನ್ನೊಳಗೊಂಡ ದೊಡ್ಡ ತಂಡಗಳೂ ಕಂಡು ಬರುತ್ತಾರೆ. ಪಾರಂಪರಿಕ ನವರಾತ್ರಿ ವೇಷಗಳು ತುಳುನಾಡಿನ ದಸರಾ ಆಚರಣೆಯ ಅವಿಭಾಜ್ಯ ಅಂಗ.

 

ಗ್ರಾಮ, ನಗರ ಬೀದಿಗಳಲ್ಲಿ, ಮನೆ ಮನೆಗಳಲ್ಲಿ ಹುಲಿ, ಕರಡಿ, ಸಿಂಹಗಳ ವೈವಿಧ್ಯ ವೇಷಗಳ ಮೈ ನವಿರೇಳಿಸುವ ಕುಣಿತಗಳು, ರಾಕ್ಷಸ ವೇಷದ ಅಬ್ಬರ ದಸರಾ ಆಚರಣೆಯ ವೈಭವವನ್ನು ಹೆಚ್ಚಿಸುತ್ತದೆ. ಒಂಭತ್ತು ದಿನಗಳ ಕಾಲ ವೇಷ ಧರಿಸಿ ನಾಡಿನಾದ್ಯಂತ ಸಂಚರಿಸಿ ಹಬ್ಬವನ್ನು ಸಂಪನ್ನಗೊಳಿಸುವ ನವರಾತ್ರಿ ವೇಷಗಳು ವಿಜಯದಶಮಿ ದಿನದಂದು ತಿರುಗಾಟವನ್ನು ಕೊನೆಗೊಳಿಸುತ್ತಾರೆ. ಶಾರದೋತ್ಸವ, ದಸರಾ ಮೆರವಣಿಗೆಗಳಲ್ಲಿಯೂ ಭಾಗವಹಿಸಿದ ಬಳಿಕ ವೇಷವನ್ನು ತೆಗೆಯುವರು. ಹರಕೆ ಹೇಳಿ ನವರಾತ್ರಿ ವೇಷ ಹಾಕುವವರೂ ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪಾರಂಪರಿಕ ನವರಾತ್ರಿ ವೇಷಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲದೆ ವೇಷ ಭೂಷಣಗಳಲ್ಲಿಯೂ ಬದಲಾವಣೆ ಕಾಣುತ್ತಿದೆ ಎನ್ನುತ್ತಾರೆ ಹಿರಿಯರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 11-04-2026 | ದಕ್ಷಿಣದಲ್ಲಿ ಮಳೆ, ಉತ್ತರದಲ್ಲಿ ಬಿಸಿ… ಮುಂದೇನು?

ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಚಟುವಟಿಕೆ ಆರಂಭವಾಗಿದೆ. ಏಪ್ರಿಲ್ 15…

8 hours ago

ಜನನ-ಮರಣ ನೋಂದಣಿ 21 ದಿನಗಳೊಳಗೆ ಕಡ್ಡಾಯ ನೋಂದಣಿ – ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ

ಜನನ-ಮರಣ ಘಟನೆಗಳನ್ನು 21 ದಿನಗಳೊಳಗೆ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಸೂಚನೆ.

15 hours ago

ಹವಾಮಾನ ವರದಿ | 10-04-2026 | ಕರ್ನಾಟಕ ಹವಾಮಾನ ಅಪ್ಡೇಟ್‌- ಎಪ್ರಿಲ್ 15 ನಂತರ ಮಳೆ …! ಬಿಸಿಲಿನ ಬಿಸಿ ಮುಂದುವರಿಕೆ

ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ಮುಂದುವರಿಯುತ್ತಿದ್ದು, ಮಳೆಯ ಚಟುವಟಿಕೆ ಕಡಿಮೆಯಾಗಿದೆ. ಏಪ್ರಿಲ್ 15…

1 day ago

ಹವಾಮಾನ ವರದಿ | 09-04-2026 | ಕರ್ನಾಟಕದಲ್ಲಿ ಮಳೆ ಸಾಧ್ಯತೆ | ಕರಾವಳಿ–ಮಲೆನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ..!

ರಾಜ್ಯದಲ್ಲಿ ಇಂದಿನಿಂದ ಮಳೆಯ ಚಟುವಟಿಕೆ ಮತ್ತೆ ಆರಂಭವಾಗಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಗುಡುಗು…

2 days ago

ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ : ಕರಾವಳಿಯಲ್ಲಿ ಒಣಹವೆ ಮುಂದುವರಿಕೆ!

ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆಯ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ…

3 days ago

ಆಟೋ ಗ್ಯಾಸ್ ಕೊರತೆ ವದಂತಿ- ರಾಜ್ಯ ಸರ್ಕಾರದಿಂದ ಸ್ಪಷ್ಟನೆ..!

ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ ಎಂಬುದು ಕೇವಲ ವದಂತಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.…

3 days ago