ಬೆಳ್ಳಾರೆ : ಮುಹಿಯುದ್ದೀನ್ ಜುಮಾ ಮಸೀದಿ ಅತ್ತಿಕ್ಕರಮಜಲು ಇದರ ಅಂಗ ಸಂಸ್ಥೆಯಾದ ಮಿನ್ನತುಲ್ ಹುದಾ ಇದರ ಪಂಚವಾರ್ಷಿಕ ಪ್ರಯುಕ್ತ ಮಯ್ಯತ್ ಪರಿಪಾಲನ ದ್ವಿದಿನ ಪ್ರಭಾಷಣ ದ ಸಮಾಪನ ದಿನವು ನವಂಬರ್ 19 ರಂದು ನಡೆಯಿತು .
ಸಮಾಪನ ದಿನದ ಕಾರ್ಯಕ್ರಮ ದ ಅಧ್ಯಕ್ಷ ತೆಯನ್ನು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಪಿ ಇಸ್ಹಾಕ್ ಸಾಹೇಬ್ ವಹಿಸಿದ್ದರು. ಮಸೀದಿಯ ಖತೀಬ ಯಾಸರ್ ಅರಫಾತ್ ಕೌಸರಿ ಉದ್ಘಾಟಿಸಿದರು. ಇರ್ಷಾದ್ ಫೈಝಿ ಪಾಲ್ತಾಡ್ ಪ್ರಾಸ್ತಾವಿಕ ಭಾಷಣ ಮಾಡಿದರು .
ದ್ವಿದಿನ ಪ್ರಭಾಷಣ ಸಮಾಪನ ದಿನದಂದು ಕೇರಳದ ಪ್ರಸಿದ್ದ ವಾಗ್ಮಿ ಉಸ್ತಾದ್ ವಲಿಯುದ್ದೀನ್ ಫೈಝಿ ಪ್ರಭಾಷಣ ಮಾಡಿದರು. ಪ್ರಸಕ್ತ ಕಾಲದಲ್ಲಿ ಮಯ್ಯತ್ ಪರಿಪಾಲನೆ ವಿಷಯ ನಾವೆಲ್ಲರೂ ಅರಿಯಬೇಕಾದ ವಿಷಯವಾಗಿದೆ.ನಮ್ಮ ಜೀವನದ ತಿಳಿಯಲೇಬೇಕಾದ ಅಂಶವಾಗಿದೆ. ಆದುದರಿಂದ ನಾವು ಇದರ ಕುರಿತು ಗಂಭೀರವಾಗಿ ಪರಿಗಣಿಸಿ ಬದುಕಿದರೆ ಜೀವನ ಸಾರ್ಥಕ ಎಂದು ಅವರು ಹೇಳಿದರು.
ತಾ.ಪಂ ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ , ಹಮೀದ್ ಹಾಜಿ ಸುಳ್ಯ , ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಆಡಳಿತ ಮಂಡಳಿ ಉಪಾಧ್ಯಕ್ಷ ಯು ಹೆಚ್ ಅಬೂಬಕ್ಕರ್, ಕೋಶಾಧಿಕಾರಿ ಹಾಜಿ ಕೆ ಮಮ್ಮಾಲಿ , ಸದಸ್ಯ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ,ಝುಬೈರ್ ಮುಸ್ಲಿಯಾರ್ , ಝಕರಿಯಾ ಅಹ್ಸನಿ , ಅಬ್ದುಲ್ ರಹ್ಮಾನ್ ಅಲೆಕ್ಕಾಡಿ ,ಹನೀಫ್ ಸಾಹೇಬ್ ಪಾಜಪಳ್ಳ , ಶರೀಫ್ ಫ್ರಂಟ್ ಲೈನ್ , ಸುಳ್ಯ ವಿಖಾಯ ಚೇರ್ಮನ್ ಜಮಾಲುದ್ದೀನ್ ಕೆ ಎಸ್ , ಇಸ್ಮಾಯಿಲ್ ಪಡ್ಪಿನಂಗಡಿ , ಮಹಮೂದ್ ಶಾಹಿನ್ ಮಾಲ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಕೆ ಎಂ ಇಕ್ಬಾಲ್ ಬಾಳಿಲ ಸ್ವಾಗತಿಸಿದರು .
ಈ ವರ್ಷ ಅಡಿಕೆ ಇಳುವರಿ ಕುಸಿತವಾಗಿದೆ ಎಂದು ಶೇ.71 ರಷ್ಟು ರೈತರು ಅಭಿಪ್ರಾಯ…
ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.…
ನವದೆಹಲಿಯಲ್ಲಿ ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ GCWAS-2026 ಆರಂಭವಾಗಿದೆ. ನೀತಿ,…
ದೇಶದಲ್ಲಿ ಉತ್ಪಾದನೆಯಾಗುವ ಗೇರುಹಣ್ಣಿನ ಕೇವಲ 1% ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿರುವ ಹಿನ್ನೆಲೆ ಪುತ್ತೂರಿನಲ್ಲಿ…
ದಕ್ಷಿಣ ಕನ್ನಡದಲ್ಲಿ ಶೇ.48ಕ್ಕೂ ಹೆಚ್ಚು ಕರಾವಳಿ ಕಡಲ್ಕೊರೆತಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದ ಲೋಕಸಭೆಯಲ್ಲಿ…
ಅಡಿಕೆ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುತ್ತಿರುವ ಕೊಕ್ಕೋಗೆ ಬೆಲೆ ಕುಸಿತ ದೊಡ್ಡ ಸವಾಲಾಗಿದೆ. ಮೌಲ್ಯವರ್ಧನೆ…