MIRROR FOCUS

ಇದು ‘ಕುಂಡಿಗೆ’ ಆಮಂತ್ರಣ..! , ಇದು ಆಂದೋಳನದ ಭಾಗ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪುತ್ತೂರು: ಒಂದು ಆಂದೋಳನವು ಬದುಕಿನ ಭಾಗವಾದಾಗ ಅದು ಅನುಭವವಾಗುತ್ತದೆ, ಅನುಭಾವವಾಗುತ್ತದೆ. ಬದುಕಿನ ಭಾಗವಾಗುವ ಆಂದೋಳನಗಳಲ್ಲಿ ಹೋರಾಟದ ಕಿಚ್ಚಿಲ್ಲ, ಬಣ್ಣಗಳಿಲ್ಲ, ಧ್ವಜಗಳಿಲ್ಲ, ಘೋಷಣೆಗಳಿಲ್ಲ. ಅಲ್ಲಿರುವುದು ಸಾತ್ವಿಕತೆ ಒಂದೇ!

Advertisement
Advertisement

ಬಂಟ್ವಾಳ ತಾಲೂಕಿನ ಕೇಪು ಉಬರು ‘ಹಲಸು ಸ್ನೇಹಿ ಕೂಟ’ವು ದಶಕದೀಚೆಗೆ ಊಟದ ಬಟ್ಟಲನ್ನು ವಿಷಮುಕ್ತಗೊಳಿಸುವ ಆಂದೋಳನವನ್ನು ಸದ್ದಿಲ್ಲದೆ ಮಾಡಿದೆ, ಮಾಡುತ್ತಿದೆ. ಕೂಟದ ತೆಕ್ಕೆಗೆ ಬಂದ ಕುಟುಂಬಗಳ ಊಟದ ಮೇಜುಗಳಲ್ಲಿ ಸಾವಯವ ಉತ್ಪನ್ನಗಳಿಗೆ ಸ್ಥಾನ, ಮಾನ. ಹಲಸು, ಮಾವು, ಸಿರಿಧಾನ್ಯ, ತರಕಾರಿ, ಸೊಪ್ಪು.. ಹೀಗೆ ಅನ್ಯಾನ್ಯ ಒಳಸುರಿಗಳು ಖಾದ್ಯಗಳ ಮೂಲವಸ್ತುಗಳು.
ತರಬೇತಿ, ಪ್ರಾತ್ಯಕ್ಷಿಕೆ, ಮೇಳ ಮೊದಲಾದ ಪ್ರಕ್ರಿಯೆಗಳಿಂದ ಹಲಸು ಸ್ನೇಹಿ ಕೂಟವು ಸುಮನಸಿಗರ ಒಂದು ತಂಡವಾಗಿ ರೂಪುಗೊಂಡಿದೆ. ಹಸಿರು ಎನ್ನುವುದು ಕೇವಲ ಪ್ರಕೃತಿ, ಆಹಾರ ಇಷ್ಟಕ್ಕೆ ಸೀಮಿತವಾಗಿಲ್ಲ. ಅದರ ಅರಿವನ್ನು ಬಿಂಬಿಸುವ ಹಲವಾರು ‘ಕೆಣಿ’ಗಳನ್ನೂ ಅನುಷ್ಠಾನಗೊಳಿಸಿದೆ. ಈ ರೀತಿಯ ಕೆಣಿಗಳು ಮನದೊಳಗೆ ಗಾಢವಾಗಿ ಇಳಿದ ಪರಿಣಾಮಗಳ ಫಲಿತಾಂಶ ಇಲ್ಲಿದೆ ನೋಡಿ.


ಇದು ರಾಧಾಕೃಷ್ಣ ಶರ್ಮ ಮುಳಿಯ ಇವರ ವಿವಾಹದ ಆಮಂತ್ರಣ. ಬಾಳೆಯ ಕುಂಡಿಗೆಯ (ಪೂಂಬೆ) ದಳಗಳಾಕೃತಿಯ ವಿನ್ಯಾಸ. ಮೂರು ಎಸಳುಗಳ ಆರು ಪುಟಗಳಲ್ಲಿ ಮದುವೆಯ ವಿವರಗಳು. ಬಂಟ್ವಾಳದ ಕಲಾವಿದ ಮೌನೀಶ ಮಲ್ಯರ ವಿನ್ಯಾಸ. ಅಧ್ಯಾಪಕ ಅರವಿಂದ ಕುಡ್ಲರ ಸಂಯೋಜನೆ. ಮುಳಿಯ ಶರ್ಮ ಮನೆಮಂದಿಯ ಕಲ್ಪನೆ.
ಫಕ್ಕನೆ ಮೇಲ್ನೋಟಕ್ಕೆ ನೋಡುವಾಗ ಆಮಂತ್ರಣ ಪತ್ರಿಕೆಯ ವಿನ್ಯಾಸದಲ್ಲಿ ಹೊಸತು ಕಾಣದಿರಬಹುದು. ಆದರೆ ಹಸಿರು, ಕೃಷಿಯು ಮನದೊಳಗೆ ಇಳಿದು ‘ನಾವು ಅದೇ’ ಆದಾಗ ಇಂತಹ ಯೋಚನೆಗಳು, ಯೋಚನೆಗಳು ರೂಪುಗೊಳ್ಳುತ್ತವೆ.
ರಾಧಾಕೃಷ್ಣರ ತಂದೆ ಮುಳಿಯ ವೆಂಕಟಕೃಷ್ಣ ಶರ್ಮ. ಇವರು ತಮ್ಮ ಹಿರಿಯ ಮಗನ ವಿವಾಹದ ಆಮಂತ್ರಣವನ್ನು ಹಲಸಿನ ವಿನ್ಯಾಸದಲ್ಲಿ ಅಚ್ಚು ಹಾಕಿಸಿದ್ದರು. ಈ ಮೂಲಕವಾದರೂ ಹಲಸು, ಕುಂಡಿಗೆಗಳು ಮತ್ತೊಮ್ಮೆ ಅನ್ನದ ಬಟ್ಟಲಲ್ಲಿ ಸ್ಥಾನ ಪಡೆದುಕೊಳ್ಳಲಿ, ಅಲ್ವಾ.


ಇಂತಹ ಆಮಂತ್ರಣ ಪತ್ರಿಕೆಯನ್ನು ಒಂದು ಕಲೆಯಾಗಿ, ಆಂದೋಳನದ ಉಪಾಧಿಯಾಗಿ ನೋಡುವ ಮನಸ್ಸುಗಳು ಬೇಕಾಗಿವೆ!

( ನಿರೂಪಣೆ : ನಾ.ಕಾರಂತ ಪೆರಾಜೆ )

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶ | ಇಂದಿನಿಂದಲೇ ಮುಂಗಾರು ಆರಂಭ | 8 ದಿನ ಮುಂಚಿತವಾಗಿ ಆರಂಭವಾದ ಮಳೆಗಾಲ |

ಕಳೆದ 16 ವರ್ಷಗಳ ದಾಖಲೆಗಳ ಪ್ರಕಾರ ನಿಗದಿತ ದಿನಕ್ಕಿಂತ ಮೊದಲೇ ಈ ಬಾರಿ…

5 hours ago

ಉತ್ತಮ ಮಳೆಯಿಂದ ಹಸಿರಾದ ವನ್ಯಜೀವಿ ತಾಣ | ಚಾಮರಾಜನಗರ ಜಿಲ್ಲೆಯ ಹಲವೆಡೆ ಹಸಿರು ಸಂಭ್ರಮ

ಉತ್ತಮ ಮಳೆಗೆ ಅರಣ್ಯ ಪ್ರದೇಶವೆಲ್ಲ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ, ಮಳೆ ಹನಿಗಳಿಗೆ ಮೈಯೊಡ್ಡಿದ…

10 hours ago

50 ಕೋಟಿಗೂ ಹೆಚ್ಚು ಜನರು ಕೃಷಿ ಕ್ಷೇತ್ರದಲ್ಲಿದ್ದಾರೆ , ಜಿಡಿಪಿಗೆ ಕೃಷಿಯ ಕೊಡುಗೆ ಶೇಕಡಾ 18

ರಾಜ್ಯದ ಅಡಿಕೆ ಬೆಳೆ ಅತ್ಯಂತ ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕ ಇಲ್ಲ.…

11 hours ago

ಅಡಿಕೆ ಹಾಳೆ ರಫ್ತು ನಿರ್ಬಂಧದ ಸಂಕಷ್ಟದಿಂದ ಪಾರಾಗಲು ಕೈಗೊಳ್ಳಬಹುದಾದ ಪರಿಹಾರೋಪಾಯಗಳು

ನಿಷೇಧವು ಶಾಶ್ವತವಲ್ಲ, ಮತ್ತು ವೈಜ್ಞಾನಿಕ, ತಾಂತ್ರಿಕ, ಮತ್ತು ವಾಣಿಜ್ಯ ರಾಜತಾಂತ್ರಿಕ ಮಾರ್ಗದಿಂದ ಈ…

11 hours ago

ಅಡಿಕೆ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿ | ವರವೋ ಶಾಪವೋ?

ಆಹಾರ ಧಾನ್ಯಗಳನ್ನು ಬೆಳೆಸುತ್ತಿದ್ದ ಕೃಷಿಕರು ಅಡಿಕೆ ಕೃಷಿಗೆ ಪರಿವರ್ತನೆ ಆಗಿ ಆಹಾರಕ್ಕಾಗಿ ಪರಾವಲಂಬಿಗಳು…

12 hours ago

ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿ

ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿಗೆ ಬೇಕಾಗುವ ಸಾಮಗ್ರಿಗಳು: ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ…

13 hours ago