ಸುಳ್ಯ: ಡಿ 29 ಇಬ್ಬನಿ ಸುಳ್ಯ ಸಾದರ ಪಡಿಸಿರುವ ಇಬ್ಬನಿ ಇಯರ್ ಎಂಡ್ ಟ್ರೋಫಿ ಸೀಸನ್ 2ರ ಅಂಡರ್ ಆರ್ಮ್ ಕ್ರಿಕೆಟ್ ಲೀಗ್ ಪಂದ್ಯಾಕೂಟ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಮೈದಾನದಲ್ಲಿ ಜರಗಿತು.
ಸುಳ್ಯ ವಿಧಾನ ಸಭಾ ವ್ಯಾಪ್ತಿಯ 96 ಆಟಗಾರರನ್ನು ಆಯ್ಕೆ ಮಾಡಿ ಐಪಿಯಲ್ ಮಾದರಿಯಲ್ಲಿ ಹರಾಜು ಮಾಡಿ 8 ಮಾಲಕರಿಗೆ ನೀಡಲಾಗಿತ್ತು. ಈ ಒಂದು ಪಂದ್ಯಾಕೂಟದಲ್ಲಿ ಬಿ.ಎಂ ರಫೀಕ್ ಮಾಲಿಕತ್ವದ ಬಿ.ಎಂ.ಎ ಚಾಲೆಂಜರ್ಸ್ ತಂಡವು 2019ರ ಇಬ್ಬನಿ ಇಯರ್ ಎಂಡ್ ಟ್ರೋಫಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ದ್ವಿತೀಯ ಸ್ಥಾನವನ್ನು ರಝಾಕ್ ಕೆ.ಎಂ ಮಾಲಿಕತ್ವದ ಫ್ರೆಂಡ್ಸ್ ಜಟ್ಟಿಪಳ್ಳ ತಂಡವು ತೃಪ್ತಿಪಟ್ಟುಕೊಂಡಿದೆ.
ಪಂದ್ಯಾಕೂಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಜಯಿಸಿದ ಕ್ರೀಡಾಪಟು ಸಂಶೀರ್ ಸುಳ್ಯ ಅವರು ಗಣ್ಯ ಆತಿಥಿಗಳಾಗಿ ವೇದಿಕೆಗೆ ಮೆರುಗು ನೀಡಿದರು. ಈ ಪಂದ್ಯಾಕೂಟದಲ್ಲಿ ರಾಮಚಂದ್ರ ಪೆಲ್ತಡ್ಕ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನವೀನ್ ಕುಮಾರ್ ಕಜೆ, ಅಬ್ದುಲ್ ಕಲಾಂ ಸುಳ್ಯ, ರಷೀದ್ ಜಟ್ಟಿಪಳ್ಳ, ತಾಜ್ ಅಬೂಬಕ್ಕರ್ ಜನಪ್ರಿಯ, ಶರೀಫ್ ಜಟ್ಟಿಪಳ್ಳ, ಫೈಝಲ್ ಕಟ್ಟೆಕ್ಕಾರ್, ಹಂಝ ಕಾತೂನ್ , ಶಿಹಾಬ್ ಷಾ ಜಟ್ಟಿಪಳ್ಳ, ಉಪಸ್ಥಿತರಿದ್ದರು ಇಬ್ಬನಿ ಅಧ್ಯಕ್ಷ ಖಾದರ್ ಜಟ್ಟಿಪಳ್ಳ ಸ್ವಾಗತಿಸಿ ವಂಧಿಸಿದರು.
ರಾಜ್ಯದಲ್ಲಿ ಮಾರಾಟವಾಗುವ 15 ಬಗೆಯ ಔಷಧಗಳು ಹಾಗೂ ಸೌಂದರ್ಯ ವರ್ಧಕಗಳು ಪ್ರಾಮಾಣಿಕೃತ ಗುಣಮಟ್ಟದಲ್ಲಿ…
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಮ್-4 ಮಿಷನ್…
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕೊಡಗಿನಲ್ಲಿ…
ಭಾರತದ ವೈಜ್ಞಾನಿಕ ಸಾಧನೆಯ ಗೌರವವನ್ನು ಮತ್ತಷ್ಟು ಎತ್ತರಕ್ಕೇರಿಸುವ ಮಾನವ ಸಹಿತವಾದ ಗಗನಯಾನದ ನೌಕೆ…
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಮಹಾರಾಷ್ಟ್ರದ…
ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನ ಹಾಗೂ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ …