ಯಕ್ಷಗಾನ : ಮಾತು-ಮಸೆತ

ಇವಳು ಹೆಣ್ಣಲ್ಲ. ಜಗತ್ತಿನ ತಾಯಿ ಇವಳು…..

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಶೇಣಿ ಗೋಪಾಲಕೃಷ್ಣ ಭಟ್ಟರ ‘ರಕ್ತಬೀಜ’
(ಪ್ರಸಂಗ : ಶ್ರೀ ದೇವಿ ಮಹಾತ್ಮ್ಯೆ)

Advertisement
Advertisement

(ಶುಂಭ ಮತ್ತು ಶ್ರೀದೇವಿಯ ಯುದ್ಧದ ಸನ್ನಿವೇಶ. ದೇವಿಯನ್ನು ನೋಡಿದ ರಕ್ತಬೀಜ ಹೀಗೆ ತರ್ಕಿಸುತ್ತಾನೆ)

…. ಭಲೇ… ಭಲೇ… ಈ ದರ್ಶನ ಜೀವಾತ್ಮನಿಗೆ ಮೊದಲೇ ಆಗಬೇಕು. ನಿರಾಕಾರ ನಿರ್ಗುಣವಾದಂತಹ ‘ಪರಬ್ರಹ್ಮ’ ಕೇವಲ ನಮ್ಮ ತರ್ಕಕ್ಕೆ ವಸ್ತು. ಸಾಕಾರ ಸ್ವರೂಪವಾದಂತಹ ಈ ವಿಶ್ವವನ್ನು ಕಂಡು ಅದನ್ನು ಗುರುತಿಸಬಹುದು. ಯಾವುದಾದರೂ ಒಂದು ವಸ್ತುವನ್ನು ಕಂಡಾಗ ಆ ವಸ್ತುವನ್ನು ತಯಾರಿಸಿದಂತಹ ವ್ಯಕ್ತಿಯ ಇಚ್ಚಾ – ಕ್ರಿಯಾ – ಜ್ಞಾನವನ್ನು ಗುರುತಿಸಬಲ್ಲ ಪ್ರಾಜ್ಞನಂತೆ ನಾನು ಇವಳನ್ನು ‘ಪರಬ್ರಹ್ಮ’ ಎಂದು ಗುರುತಿಸಿದೆ.

ಇವಳು ಹೆಣ್ಣಲ್ಲ. ಜಗತ್ತಿನ ತಾಯಿ ಇವಳು. ಪ್ರಪಂಚದಲ್ಲಿರುವ ಸಕಲ ಪುರುಷರನ್ನು ಆಕರ್ಷಿಸುವ ಮಾಯಾಮೋಹಿನಿಯಾದ ಹೆಂಡತಿಯೂ ಇವಳೇ. ಸಂಸಾರಕ್ಕೆ ಎಳೆಯುವ ಮಾಯಾರೂಪಿಣಿಯಾದ ಮಗಳೂ ಇವಳೇ. ಹಾಗಾದರೆ ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ‘ಮಾಯೆ’ ನನ್ನನ್ನು ಕಾಡಿತ್ತು. ನನಗೇನಂತೆ, ನನ್ನ ಇಚ್ಛಾ-ಕ್ರಿಯಾ-ಜ್ಞಾನಶಕ್ತಿಯನ್ನು ಮುಂದಿಟ್ಟುಕೊಂಡು ಇವಳನ್ನು ಇದಿರಿಸಿ, ಶಕ್ತಿಯಿಂದ ಇವಳು ಸೋಲುವಂತ ಮಾಡಿ ಮೈಯಿಂದಲ್ಲದಿದ್ದರೂ, ಮನಸ್ಸಿನಿಂದಾದರೂ ಸೋತರೆ ಸಾಕು. ‘ಕೈಹಿಡಿ’ ಅಂತ ಕೇಳಲು ಬಂದಿದ್ದೇನೆ. ‘ಕೈಹಿಡಿ’ ಇದಕ್ಕೆ ಅಂತರಾರ್ಥ ಬೇರೆ. ಯಾಕೆ? ‘ನನ್ನ ಅತ್ತೆಯ ಮಗಳಾಗಿ ಕೈಹಿಡಿದು ನನ್ನ ಪಾಣಿಗ್ರಹಣದ ಸತಿಯಾಗಿ ಬಾ’ ಎಂದು ಸ್ಥೂಲಾರ್ಥ… ‘ಇದೋ ಈ ಸಂಸಾರದಲ್ಲಿ ನನ್ನನ್ನು ಹೆತ್ತು ಹಾಕಿದ್ದಿ. ಮುಂದೇನು ಅಂತ ದಾರಿ ಕಾಣುವುದಿಲ್ಲ. ತಾಯಿಯಾಗಿ ಕೈ ಹಿಡಿದು ಮುಂದಕ್ಕೆ ಒಯ್ಯು’ ಎಂಬುದು ಇನ್ನೊಂದು.
ನೋಡೋಣ. ಸರ್ವಜ್ಞಳಲ್ಲವೇ ಇವಳು. ಅರ್ಥವಾದೀತಲ್ಲ ಇವಳಿಗೆ…. ಒಂದೋ ಇದು ಶುಂಭಾಸುರನ ಕೊನೆ. ಅಲ್ಲದಿದ್ದರೆ ಶುಂಭಾಸುರನ ಜೀವನದ ಪ್ರಾರಂಭ….

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ತೆಂಗಿನ ಗೆರಟೆ ಮೌಲ್ಯವರ್ಧನೆ | ಇದು ಬರೀ “ಚಿಪ್ಪಿ”ಯಲ್ಲ ಇದರೊಳಗಿದೆ ಹಲವು ಬಗೆ..!

ತೆಂಗಿನ ಗೆರಟೆಯು ಮೌಲ್ಯವರ್ಧನೆಯಾದಾಗ ತೆಂಗಿನ ಒಟ್ಟಾರೆ ಆದಾಯವೂ ಹೆಚ್ಚಾಗಲು ಸಾಧ್ಯವಿದೆ. ಸದ್ಯ ಸಣ್ಣ…

2 hours ago

ಮಳೆ ಹಿನ್ನೆಲೆ | ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಶಾಲೆಗಳಿಗೆ ರಜೆ

ಮುಂದಿನ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ. ಹೀಗಾಗಿ…

6 hours ago

ಶನಿ ಬುಧರಿಂದ ನವಪಂಚಮ ರಾಜಯೋಗ

2025 ರಲ್ಲಿ ಶನಿ ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ನಿರ್ಮಾಣವಾಗುತ್ತಿರುವ ನವಪಂಚಮ ರಾಜಯೋಗವು…

6 hours ago

ಸಂಪಾಜೆ ಗ್ರಾಮದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ…

15 hours ago

ಗೆದ್ದದ್ದು ಬೆಂಗಳೂರು ಅಲ್ಲ, ಇಂಗ್ಲೇಂಡಿನ ಡಿಯಾಜಿಯೋ ಕಂಪೆನಿ…!!! ಗೊತ್ತಾ..?

ಎಲ್ಲಿ  ಉಚಿತವೆಂಬ ಆಮಿಶ ಇದೆಯೋ  ಅಲ್ಲಿ ತಳ್ಳಾಟವೂ  ಇರುತ್ತದೆ. ಸರಕಾರಿ ಬಸ್ ಗಳಲ್ಲಿ…

16 hours ago

ಭಾರೀ ಮಳೆ ಸಾಧ್ಯತೆ | ಕೊಡಗು-ಉಡುಪಿ ಜಿಲ್ಲೆಯಲ್ಲಿ ಎಚ್ಚರಿಕೆ | ಕೊಡಗಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ರಜೆ | ಉಡುಪಿಯಲ್ಲಿ ಶಾಲೆಗಳಿಗೆ ರಜೆ |

ಕೊಡಗು ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ  ರೆಡ್ ಅಲರ್ಟ್ ಘೋಷಿಸಲಾಗಿದೆ. ಹೆಚ್ಚಿನ ಗಾಳಿ-ಮಳೆ…

16 hours ago