ಯಕ್ಷಗಾನ : ಮಾತು-ಮಸೆತ

ಇವಳು ಹೆಣ್ಣಲ್ಲ. ಜಗತ್ತಿನ ತಾಯಿ ಇವಳು…..

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಶೇಣಿ ಗೋಪಾಲಕೃಷ್ಣ ಭಟ್ಟರ ‘ರಕ್ತಬೀಜ’
(ಪ್ರಸಂಗ : ಶ್ರೀ ದೇವಿ ಮಹಾತ್ಮ್ಯೆ)

Advertisement

(ಶುಂಭ ಮತ್ತು ಶ್ರೀದೇವಿಯ ಯುದ್ಧದ ಸನ್ನಿವೇಶ. ದೇವಿಯನ್ನು ನೋಡಿದ ರಕ್ತಬೀಜ ಹೀಗೆ ತರ್ಕಿಸುತ್ತಾನೆ)

…. ಭಲೇ… ಭಲೇ… ಈ ದರ್ಶನ ಜೀವಾತ್ಮನಿಗೆ ಮೊದಲೇ ಆಗಬೇಕು. ನಿರಾಕಾರ ನಿರ್ಗುಣವಾದಂತಹ ‘ಪರಬ್ರಹ್ಮ’ ಕೇವಲ ನಮ್ಮ ತರ್ಕಕ್ಕೆ ವಸ್ತು. ಸಾಕಾರ ಸ್ವರೂಪವಾದಂತಹ ಈ ವಿಶ್ವವನ್ನು ಕಂಡು ಅದನ್ನು ಗುರುತಿಸಬಹುದು. ಯಾವುದಾದರೂ ಒಂದು ವಸ್ತುವನ್ನು ಕಂಡಾಗ ಆ ವಸ್ತುವನ್ನು ತಯಾರಿಸಿದಂತಹ ವ್ಯಕ್ತಿಯ ಇಚ್ಚಾ – ಕ್ರಿಯಾ – ಜ್ಞಾನವನ್ನು ಗುರುತಿಸಬಲ್ಲ ಪ್ರಾಜ್ಞನಂತೆ ನಾನು ಇವಳನ್ನು ‘ಪರಬ್ರಹ್ಮ’ ಎಂದು ಗುರುತಿಸಿದೆ.

ಇವಳು ಹೆಣ್ಣಲ್ಲ. ಜಗತ್ತಿನ ತಾಯಿ ಇವಳು. ಪ್ರಪಂಚದಲ್ಲಿರುವ ಸಕಲ ಪುರುಷರನ್ನು ಆಕರ್ಷಿಸುವ ಮಾಯಾಮೋಹಿನಿಯಾದ ಹೆಂಡತಿಯೂ ಇವಳೇ. ಸಂಸಾರಕ್ಕೆ ಎಳೆಯುವ ಮಾಯಾರೂಪಿಣಿಯಾದ ಮಗಳೂ ಇವಳೇ. ಹಾಗಾದರೆ ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ‘ಮಾಯೆ’ ನನ್ನನ್ನು ಕಾಡಿತ್ತು. ನನಗೇನಂತೆ, ನನ್ನ ಇಚ್ಛಾ-ಕ್ರಿಯಾ-ಜ್ಞಾನಶಕ್ತಿಯನ್ನು ಮುಂದಿಟ್ಟುಕೊಂಡು ಇವಳನ್ನು ಇದಿರಿಸಿ, ಶಕ್ತಿಯಿಂದ ಇವಳು ಸೋಲುವಂತ ಮಾಡಿ ಮೈಯಿಂದಲ್ಲದಿದ್ದರೂ, ಮನಸ್ಸಿನಿಂದಾದರೂ ಸೋತರೆ ಸಾಕು. ‘ಕೈಹಿಡಿ’ ಅಂತ ಕೇಳಲು ಬಂದಿದ್ದೇನೆ. ‘ಕೈಹಿಡಿ’ ಇದಕ್ಕೆ ಅಂತರಾರ್ಥ ಬೇರೆ. ಯಾಕೆ? ‘ನನ್ನ ಅತ್ತೆಯ ಮಗಳಾಗಿ ಕೈಹಿಡಿದು ನನ್ನ ಪಾಣಿಗ್ರಹಣದ ಸತಿಯಾಗಿ ಬಾ’ ಎಂದು ಸ್ಥೂಲಾರ್ಥ… ‘ಇದೋ ಈ ಸಂಸಾರದಲ್ಲಿ ನನ್ನನ್ನು ಹೆತ್ತು ಹಾಕಿದ್ದಿ. ಮುಂದೇನು ಅಂತ ದಾರಿ ಕಾಣುವುದಿಲ್ಲ. ತಾಯಿಯಾಗಿ ಕೈ ಹಿಡಿದು ಮುಂದಕ್ಕೆ ಒಯ್ಯು’ ಎಂಬುದು ಇನ್ನೊಂದು.
ನೋಡೋಣ. ಸರ್ವಜ್ಞಳಲ್ಲವೇ ಇವಳು. ಅರ್ಥವಾದೀತಲ್ಲ ಇವಳಿಗೆ…. ಒಂದೋ ಇದು ಶುಂಭಾಸುರನ ಕೊನೆ. ಅಲ್ಲದಿದ್ದರೆ ಶುಂಭಾಸುರನ ಜೀವನದ ಪ್ರಾರಂಭ….

Advertisement

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 13-08-2025 | ಆ.21 ರವರೆಗೆ ಮಳೆ ವಿಸ್ತರಣೆ ಎಲ್ಲಿ ? ವಾಯುಭಾರ ಕುಸಿತದ ಕಾರಣದಿಂದ ಮಳೆ ಎಲ್ಲೆಲ್ಲಾ ಇದೆ..?

ಬಂಗಾಳಕೊಲ್ಲಿಯ ಆಂದ್ರಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಒಡಿಸ್ಸಾ ಕರಾವಳಿ ತನಕ ಸಾಗಿ,…

1 hour ago

ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಸಹಾಯಧನ |ವಿವಿಧ ಕಾರ್ಯಕ್ರಮಗಳ ಮೂಲಕ ರೈತರಿಗೆ ನೆರವು

ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ತೋಟಗಾರಿಕಾ ಬೆಳೆಗಳಿಗೆ…

8 hours ago

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಕರಾವಳಿಯಲ್ಲಿ ವ್ಯಾಪಕ ಮಳೆಯಾಗಿದೆ. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಉತ್ತರ…

8 hours ago

ತುಳುವರ ಆಟಿ ತಿಂಗಳು | ಆಟಿಯ ಕೊನೆಗೆ ಆಟಿಗೊಂದು ಸುತ್ತು….

ತುಳುನಾಡಿನಲ್ಲಿ ಆಟಿ ಬಹಳ ಮಹತ್ವದ ತಿಂಗಳು. ಈ ಸಮಯದಲ್ಲಿ ವಿವಿಧ ಆಚರಣೆಗಳು ಇರುತ್ತವೆ.…

8 hours ago

ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಕ್ಕೆ ಕ್ರಮ | ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆ

ಎತ್ತಿನಹೊಳೆ ಯೋಜನೆಯಡಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮೊದಲ…

19 hours ago

ಅರಣ್ಯ ಸಂರಕ್ಷಿಸುವಂತೆ ಅಧಿಕಾರಿಗಳಿಗೆ ಸೂಚನೆ | ಅರಣ್ಯ ಸಚಿವ ಈಶ್ವರ ಖಂಡ್ರೆ

ಅರಣ್ಯ ಭೂಮಿ ಒತ್ತುವರಿ ಮಾಡಿದರೆ ತೆರವು ಮಾಡಬೇಕಾಗುತ್ತದೆ. ಬೇಲಿ ಹಾಕುವುದರಿಂದ ಅರಣ್ಯ ಭೂಮಿ…

1 day ago